ಚಂಪಕ ಸರಸಿ ಕೊಳದ ಸಂಶೋಧನೆಯಾಗಲಿ: ನಾ| ಡಿಸೋಜ

ಇತಿಹಾಸದ ಆಳ ಅಧ್ಯಯನಕ್ಕೆ ಕರೆ

Team Udayavani, Jun 8, 2019, 4:50 PM IST

08-Juen-34

ಆನಂದಪುರ: ಮಹಾಂತಿ ಮಠದಲ್ಲಿ ನಡೆದ ಇತಿಹಾಸ ಪರಂಪರೆ ಉಳಿಸಿ ಅಭಿಯಾನಕ್ಕೆ ಖ್ಯಾತ ಸಾಹಿತಿ ನಾ| ಡಿಸೋಜ ಚಾಲನೆ ನೀಡಿದರು.

ಆನಂದಪುರ: ಚಂಪಕ ಸರಸಿ ಕೊಳದ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ ಎಂದು ಖ್ಯಾತ ಸಾಹಿತಿ ನಾ| ಡಿಸೋಜ ಹೇಳಿದರು.

ಸಮೀಪದ ಮಲಂದೂರು ಮಹಾಂತಿಮಠದ ಚಂಪಕ ಸರಸಿ ಕೊಳದಲ್ಲಿ ಇತಿಹಾಸ ಪರಂಪರೆ ಉಳಿಸಿ ಅಭಿಯಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕೆಳದಿ ಅರಸರ 17ನೇ ದೊರೆ ಬಸಪ್ಪ ನಾಯಕ ಬರೆದ ಶಿವತತ್ವ ರತ್ನಾಕರ ಎಂಬ ಪುಸ್ತಕದಲ್ಲಿ ಆನಂದಪುರದ ಮಹಾಂತಿ ಮಠದ ಚಂಪಕ ಸರಸದ ಬಗ್ಗೆ ಸುಂದರವಾಗಿ ಉಲೇಖೀಸಿದ್ದಾನೆ. ಹಾಗೆಯೇ ಈ ಆನಂದಪುರವನ್ನು ಆನಂತ ಶಿವಪುರಿ ಎಂದು ಸಂಬೋಧಿಸಿದ್ದಾನೆ. ಕೆಳದಿ ಅರಸರ ಕಾಲದ ಅನೇಕ ಶಾಸನಗಳಲ್ಲಿ ಈ ಚಂಪಕ ಸರಸಿ ಕೊಳದ ಬಗ್ಗೆ ಬರೆದಿದ್ದಾರೆ. ಈ ಕೊಳದ ಬಗ್ಗೆ ಕೆಲವರು ಆಪಾದನೆ ಮಾಡುತ್ತಿದ್ದಾರೆ. ಕೆಲವರು ಹೇಳುವ ಪ್ರಕಾರ ಚಂಪಕ ಒಬ್ಬ ಮಹಿಳೆಯ ಹೆಸರಾಗಿದ್ದು ಆಕೆ ವೇಶ್ಯೆಯಾಗಿದ್ದಳು. ಅವಳನ್ನು ಕೆಳದಿ ಅರಸರ ಕಾಲದಲ್ಲಿ ನಾಯಕ ಇಟ್ಟುಕೊಂಡ ಕಾರಣಕ್ಕೆ ಈ ಕೊಳವನ್ನು ನಿರ್ಮಾಣ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರ. ಈ ಪ್ರದೇಶದಲ್ಲಿ ಅತಿ ಹೆಚ್ಚು ಕಾಡು ಇದ್ದು ಸಂಪಿಗೆ ಮರಗಳು ಹೆಚ್ಚು ಇದ್ದುದರಿಂದ ಚಂಪಕ ಎಂಬ ಹೆಸರು ಬಂದಿರಬೇಕು ಎಂದು ತಿಳಿಯುತ್ತದೆ. ಇದರ ಬಗ್ಗೆ ಸಂಪೂರ್ಣ ಇತಿಹಾಸ ತಿಳಿಬೇಕಾಗಿದೆ. 7ನೇ ಚೋಳ ದೊರೆ ಕೃಷ್ಣಪ್ಪನಾಯಕ ಇಲ್ಲಿಗೆ ಸಮೀಪದ ಹರತಾಳು ಮತ್ತು ಅದರ ಪಕ್ಕದ ಪ್ರದೇಶವನ್ನು ತನ್ನ ವಶಕ್ಕೆ ಪಡೆದು ನಂತರ ಹುಂಚದಲ್ಲಿ ಜೈನ ದೊರೆಗಳು ಆಳುತಿದ್ದ 2 ಪ್ರದೇಶವನ್ನು ವಶಪಡಿಸಿದ್ದ. ಇದಕ್ಕೆ ಆನಂತಪುರ ಎಂದು ಕರೆದಿದ್ದ ಬಗ್ಗೆ ಶಾಸನಗಳು ಇವೆ. ನಂತರದಲ್ಲಿ ವೆಂಕಟಪ್ಪ ನಾಯಕ ಆನಂದಪುರ ಭಾಗದಲ್ಲಿ ಕೊಳ, ಬಾವಿ, ಸರೋವರ.ದೇವಾಲಯವನ್ನು ನಿರ್ಮಾಣ ಮಾಡಿದ್ದ. ಇವನ ಆಡಳಿತಾವಧಿಯಲ್ಲಿ ತಾಂಡವೇಶ್ವರ ದೇವಾಲಯ ನಿರ್ಮಾ ಣವಾಗಿದ್ದು ಅದು ಈ ಚಂಪಕ ಸರಸಿ ಕೊಳದಲ್ಲಿ ಎಂದು ಕಾಣುತ್ತದೆ ಎಂದರು.

ಚಂಪಕ ಸರಸಿ ಕೊಳದ ಬಗ್ಗೆ ಸಂಪೂರ್ಣ ಇತಿಹಾಸ ಅಧ್ಯಯನದಿಂದ ತಿಳಿಯಬಹುದು. ಇದಕ್ಕೆ ಐತಿಹಾಸಿಕ ಪುಟಗಳನ್ನು ತೆಗೆಯಬೇಕು. ಹಾಗೆಯೇ ಲೇಖನ, ವರದಿ, ಪುಸ್ತಕಗಳಾದಾಗ ಮಾತ್ರ ಸಂಪೂರ್ಣ ಇತಿಹಾಸ ತಿಳಿಯಲು ಸಾಧ್ಯ. ಇಂತಹ ಹಳೆಯ ಕೊಳಗಳು, ದೇವಾಲಯಗಳು, ಕಟ್ಟಡಗಳು, ಕೆರೆಗಳು, ಸರೋವರಗಳ ಸಂರಕ್ಷಣೆಯಾಗಬೇಕಾದ ಅವಶಕತೆ ಇದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಂಜುನಾಥ್‌, ತಾಲೂಕು ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ವಿ.ಟಿ. ಸ್ವಾಮಿ, ಸೈನಿಕ ಕಿಶೋರ್‌ ಭೈರಾಪುರ, ಬಿ.ಡಿ. ರವಿಕುಮಾರ್‌, ವಿವಿಧ ಸಂಘ-ಸಂಸ್ಥೆಯ ಸದಸ್ಯರಾದ ರಾಜೇಂದ್ರ ಗೌಡ, ಉಮೇಶ್‌, ಶೌಕತ್‌ ಅಲಿ, ವಕೀಲ ಪ್ರವೀಣ್‌, ಗಣೇಶ್‌, ಇಂತಿಯಾಜ್‌, ಸುಗಂಧ ರಾಜ್‌, ಅಶ್ವಿ‌ನ್‌, ಸಗಾರಿಯಮೇರಿ, ಸಾವಿತ್ರಮ್ಮ, ಗುರುರಾಜ್‌, ಜಯಪ್ಪ ಗೌಡ, ಅನಸೂಯ, ಕಾವ್ಯ ಮತ್ತಿತರರು ಇದ್ದರು.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.