ಬಿಸಿಲಲ್ಲೇ ನೀರಿಗಾಗಿ ನೀರೆಯರ ಪರದಾಟ
Team Udayavani, May 25, 2019, 10:04 AM IST
ಅಫಜಲಪುರ: ಗೊಬ್ಬೂರ (ಬಿ) ಗ್ರಾಮದ ಶಿವಾಜಿ ನಗರದಲ್ಲಿ ಮಹಿಳೆಯರು ಕೊಡಗಳನ್ನಿಟ್ಟು ನೀರಿಗಾಗಿ ಕಾಯುತ್ತ ಕುಳಿತಿರುವುದು.
ಅಫಜಲಪುರ: ತಾಲೂಕಿನ ಗೊಬ್ಬೂರ (ಬಿ) ಗ್ರಾಮದಲ್ಲಿ ಉರಿ ಬಿಸಿಲಲ್ಲಿ ಅಲೆದಾಡಿ ಬಳಕೆಗೆ ಮತ್ತು ಕುಡಿಯಲು ನೀರು ತರುವಲ್ಲಿ ನೀರೆಯರು ಪರದಾಡುತ್ತಿದ್ದಾರೆ.
ಗ್ರಾಮದಲ್ಲಿ ಪುರಾತನ ಕಾಲದ 11 ತೆರೆದ ಬಾವಿಗಳಿವೆ. ಇಷ್ಟು ವರ್ಷ ಈ ಬಾವಿಗಳಿಂದ ಗ್ರಾಮಸ್ಥರು ನೀರು ಪಡೆಯುತ್ತಿದ್ದರು. ಈಗ ಅವೆಲ್ಲ ಬತ್ತಿ ಹೋಗಿವೆ. ಗ್ರಾಪಂ ವ್ಯಾಪ್ತಿಯ ವಾಡಿ ತಾಂಡಾ, ಗೊಬ್ಬೂರ ವಾಡಿ ಹಾಗೂ ಗೊಬ್ಬೂರ (ಬಿ) ಸೇರಿದಂತೆ ಒಟ್ಟು 30 ಕೊಳವೆ ಬಾವಿಗಳಿವೆ. ಇವುಗಳಲ್ಲಿ ಕೇವಲ 10 ರಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ಬರುತ್ತಿದೆ. ಅದು ಒಂದು ಕೊಳವೆ ಬಾವಿಗೆ 10 ಕೊಡಗಳಷ್ಟು ಮಾತ್ರ ನೀರು ಬರುತ್ತಿದೆ. ಈ ಕೊಳವೆ ಬಾವಿಗಳ ಎದುರು ನಸುಕಿನ ಜಾವದಿಂದ ರಾತ್ರಿ ವರೆಗೆ ಗ್ರಾಮಸ್ಥರು ಕಾಯ್ದು ನೀರು ತೆಗೆದುಕೊಂಡು ಹೋಗುವ ಪರಿಸ್ಥಿತಿಯಿದೆ.
ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ಧು ಶಿರಸಗಿ ಅವರು ಗ್ರಾಮದ ಅಂಬೇಡ್ಕರ್ ಭವನದ ಎದುರು ಕೊರೆಸಿದ ಕೊಳವೆ ಬಾವಿಯಲ್ಲಿ ಸ್ವಲ್ಪ ನೀರಿನಮಟ್ಟ ಹೆಚ್ಚಿದೆ. ಗ್ರಾಮದ ಬಹುತೇಕರು ಈಗ ಅದನ್ನೇ ನೆಚ್ಚಿಕೊಂಡಿದ್ದಾರೆ. ಅದರ ಮೇಲೂ ಹೆಚ್ಚಿನ ಒತ್ತಡ ಇರುವುದರಿಂದ ನೀರು ಸಮರ್ಪಕವಾಗಿ ಸಾಕಾಗುತ್ತಿಲ್ಲ. ಹೀಗಾಗಿ ಗ್ರಾಮದ ಯುವಕರು ಕಿಲೋ ಮೀಟರ್ಗಟ್ಟಲೇ ದೂರ ಹೋಗಿ ದ್ವಿಚಕ್ರ, ತ್ರಿಚಕ್ರ, ತಳ್ಳು ಬಂಡಿಗಳು ಹಾಗೂ ಎತ್ತಿನ ಬಂಡಿಗಳಲ್ಲಿ ನೀರು ತರುತ್ತಿದ್ದಾರೆ. ಗೊಬ್ಬೂರ (ಬಿ) ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 8250 ಜನಸಂಖ್ಯೆ ಇದೆ. ಇಷ್ಟು ಪ್ರಮಾಣದ ಜನಸಂಖ್ಯೆಗೆ ನೀರು ಸಾಕಾಗುತ್ತಿಲ್ಲ. ಹೀಗಾಗಿ ಎಲ್ಲರೂ ನಿತ್ಯ ನೀರಿಗಾಗಿ ಊಟ, ಕೆಲಸ ಬಿಟ್ಟು ನೀರು ತರಲು ಸುಡು ಬಿಸಿಲಲ್ಲೇ ಅಲೆದಾಡಬೇಕಾದ ಅನಿವಾರ್ಯತೆ ಬಂದಿದೆ.
ಇನ್ನೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಒಂದು ವರ್ಷದಿಂದ ಸ್ಥಗಿತವಾಗಿದೆ. ಇದರಿಂದ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಶುದ್ಧೀಕರಣ ಘಟಕ ಸ್ಥಗಿತದ ಬಗ್ಗೆ ವಿಚಾರಿಸಿದಾಗ ನೀರಿನ ಮೂಲವೇ ನಿಂತು ಹೋಗಿದೆ. ಹೀಗಾಗಿ ಶುದ್ಧೀಕರಣ ಘಟಕ ಸ್ಥಗಿತಗೊಳಿಸಲಾಗಿದೆ ಎಂದು ಸಂಬಂಧಿಸಿದವರು ಉತ್ತರಿಸುತ್ತಾರೆ. ಗೊಬ್ಬೂರವಾಡಿ, ವಾಡಿ ತಾಂಡಾ ಹಾಗೂ ಗೊಬ್ಬೂರ (ಬಿ) ಗ್ರಾಮದಲ್ಲಿ ತಲಾ ಒಂದು ಕೊಳವೆ ಬಾವಿ ಖರೀದಿಸಲಾಗಿದೆ. ಇದರಿಂದ ಮಿನಿ ಟ್ಯಾಂಕ್ಗಳಿಗೆ ನೀರು ತುಂಬಿ ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷ ಶಿವಾನಂದ ಅಲ್ದೆ ತಿಳಿಸಿದ್ದಾರೆ. ಜಿಪಂನ ಎನ್ಆರ್ಡಬ್ಲ್ಯುಪಿ ಅಡಿ ಒಂದು ಕೋಟಿ ರೂ. ಅನುದಾನ ತಂದು ತೆರೆದ ಕೊಳವೆ ಬಾವಿ ಕೊರೆಸಲಾಗಿದೆ. ಆದಷ್ಟು ಬೇಗ ಗೊಬ್ಬೂರ (ಬಿ) ಗ್ರಾಪಂ ವ್ಯಾಪ್ತಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ಧು ಶಿರಸಗಿ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ