ತಹಶೀಲ್ದಾರ್ ಕಚೇರಿಯೇ ಡಸ್ಟ್ ಬಿನ್!
ಮೂಲೆಗಳೆಲ್ಲ ಉಗುಳಿನ ಕೆಂಬಣ್ಣ•ಎಲ್ಲೆಂದರಲ್ಲಿ ಬಿದ್ದಿವೆ ದಾಖಲೆಗಳು
Team Udayavani, Jul 10, 2019, 10:03 AM IST
ತಹಶೀಲ್ದಾರ್ ಕಚೇರಿ ಮೂಲೆಯಲ್ಲಿ ಉಗುಳಿದ್ದರಿಂದ ಮೂಲೆ ತುಂಬಾ ಕೆಂಬಣ್ಣವಾಗಿದೆ.
•ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಯಾವುದೇ ಸರ್ಕಾರಿ ಇಲಾಖೆ, ಕಚೇರಿಗೆ ನೀತಿ, ನಿಯಮ ಇರುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಆದರೆ ಎಲ್ಲೆಂದರಲ್ಲಿ ಕಸ, ಉಗುಳು, ಬೇಕಾಬಿಟ್ಟಿ ದಾಖಲೆಗಳನ್ನಿಟ್ಟು ಜನಸಾಮಾನ್ಯರನ್ನು ಸತಾಯಿಸುವಂತಹ ಡಸ್ಟಬಿನ್ ತರಹದ ಕಚೇರಿ ಯಾವುದಾದರೂ ಇದ್ದರೇ ಅದೇ ಅಫಜಲಪುರ ತಹಶೀಲ್ದಾರ್ ಕಚೇರಿ.
ಪಟ್ಟಣದ ವಿಜಯಪುರ ಹೆದ್ದಾರಿಗೆ ಹೊಂದಿಕೊಂಡಿರುವ ತಹಶೀಲ್ದಾರ್ ಕಚೇರಿ ಹೊರಗಿನಿಂದ ದೊಡ್ಡ ಬಂಗಲೆಯಂತೆ ಕಾಣುತ್ತದೆ. ಒಳಗೆ ಹೋದರೆ ಮಾತ್ರ ಅಕ್ಷರಶಃ ಕೊಳಕಿನ ದರ್ಶನ ಆಗುತ್ತದೆ. ಎಲ್ಲಿ ನೋಡಿದರೂ ಕೊಳಕು ಕಾಣುತ್ತದೆ.
ಎಲ್ಲೆಂದರಲ್ಲಿ ದಾಖಲೆಗಳು: ತಹಶೀಲ್ದಾರ್ ಕಚೇರಿಯಲ್ಲಿ ಎಲ್ಲೆಂದರಲ್ಲಿ ಉಗುಳಿದರೂ ಕೇಳವವರಿಲ್ಲ. ಅದರಲ್ಲೂ ಇಲಾಖೆ ಗೋಡೆಗಳ ಮೂಲೆಗಳು ಉಗುಳಲಿಕ್ಕೆ ಮಾಡಿದಂತೆ ಆಗಿವೆ. ಇಲ್ಲಿಗೆ ಬರುವ ಜನರಿಗೆ ಕುಳಿತುಕೊಳ್ಳಲು ಆಸನಗಳೇ ಇಲ್ಲ. ಹೀಗಾಗಿ ಎಲ್ಲೆಂದರಲ್ಲಿ ಕುಳಿತು ಕೊಳ್ಳುವಂತಾಗಿದೆ. ಕಚೇರಿ ದಾಖಲೆಗಳನ್ನು ಎಲ್ಲಿ ಬೇಕೋ ಅಲ್ಲಿ ಇಡಲಾಗಿದೆ. ಹೀಗಾಗಿ ದಾಖಲೆಗಳನ್ನು ದಿನವಿಡಿ ಹುಡುಕುವುದೇ ಕೆಲಸ ವಾಗಿದೆ. ಅಲ್ಲದೇ ತಾಲೂಕಿನ ಹಳ್ಳಿಗಳಿಂದ ಬರುವ ಜನರಿಗೆ ಕುಡಿಯುವ ನೀರಿನ ಸೌಕರ್ಯವಿಲ್ಲ. ಕುಳಿತುಕೊಳ್ಳಲು ಆಸನಗಳಿಲ್ಲ. ಸಿಕ್ಕಸಿಕ್ಕಲ್ಲಿ ಕುಳಿತು ಕೆಲಸ ಮಾಡಿಕೊಂಡು ಹೋಗುವ ಪರಿಸ್ಥಿತಿ ಇಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!