ಕೃಷ್ಣೆ ಪ್ರವಾಹದಿಂದ ಅಪಾರ ಹಾನಿ

ಆಲಮಟ್ಟಿ ಜಲಾಶಯದಿಂದ ಬಿಟ್ಟ ನೀರಿನಿಂದ ಸಂಗೀತ-ನೃತ್ಯ ಕಾರಂಜಿಗೆ 20 ಲಕ್ಷ ರೂ. ಹಾನಿ

Team Udayavani, Aug 21, 2019, 10:49 AM IST

21-Agust-5

ಆಲಮಟ್ಟಿ: ಮಹಾರಾಷ್ಟ್ರದ ಮಹಾಬಳೇಶ್ವರ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ್ದರಿಂದ ಕೃಷ್ಣೆ ಒಳಹರಿವು ಕಡಿಮೆಯಾಗಿದೆ. ಪ್ರವಾಹ ವೇಳೆ ರಾಜ್ಯದ ನೂರಾರು ಗ್ರಾಮಗಳು ಜಲಾವೃತವಾಗಿ ಗ್ರಾಮ ಹಾಗೂ ಜಮೀನಿನಲ್ಲಿರುವ ವಸ್ತುಗಳು ನೀರಿನಲ್ಲಿ ತೇಲಿಬಂದು ಈಗ ನದಿ ದಡದಲ್ಲಿ ಎಲ್ಲೆಂದರಲ್ಲಿ ಬಟ್ಟೆಗಳು, ಗಿಡಗಂಟಿಗಳ ಅವಶೇಷ ಹಾಗೂ ಜಲಚರಗಳ ಕಳೆಬರಗಳ ರಾಶಿಯೇ ಬಿದ್ದಿರುವದು ನೆರೆ ಭೀಕರತೆಯನ್ನು ಬಿಂಬಿಸುವಂತಾಗಿದೆ.

ಕೃಷ್ಣೆ ಪ್ರವಾಹದಿಂದ ಆಲಮಟ್ಟಿ ಜಲಾಶಯದಿಂದ ಬಿಟ್ಟ ನೀರು ಮೊಘಲ್ ಉದ್ಯಾನದಲ್ಲಿ ನುಗ್ಗಿ ಬೃಹತ್‌ ವಿದ್ಯುತ್‌ ಪರಿವರ್ತಕಗಳು, ಜನರೇಟರ್‌ಗಳಲ್ಲಿ ನೀರು ಹೋಗಿ ಹಾಳಾಗಿವೆ. ಗಿಡಗಳು, ಕಸದರಾಶಿ, ಹರಿದು ಹೋಗಿರುವ ನೀರಿನ ಪೈಪುಗಳು ಹಾಗೂ ಸೌಂದರ್ಯದ ಸಸಿಗಳು, ಉದ್ಯಾನದ ಹಸಿರಿಗಾಗಿ ನೀರೆಳೆಯಲು ಅಳವಡಿಸಿದ್ದ ಮೋಟಾರ ಪಂಪಸೆಟ್‌ಗಳು, ಪಾಲಿಹೌಸ್‌, ಗ್ರೀನ್‌ ಹೌಸ್‌ ಸೇರಿದಂತೆ ಸಸಿಗಳ ಬೆಳವಣಿಗೆಗಾಗಿ ಸಂಗ್ರಹಿಸಲಾಗಿದ್ದ ಗುಣಮಟ್ಟದ ಮಣ್ಣು, ಗೊಬ್ಬರ, ಸಸಿ ತಯಾರಿಸಲು ಬಳಸುವ ಪಾಲಿಥೀನ್‌ ಚೀಲಗಳು ಕೃಷ್ಣಾರ್ಪಣವಾಗಿವೆ.

ಸಂಗೀತ ನೃತ್ಯ ಕಾರಂಜಿ ಹಾಗೂ ಲೇಸರ್‌ ಷೋಗಳಲ್ಲಿ ಅಳವಡಿಸಲಾಗಿದ್ದ ಗುಣಮಟ್ಟದ ಎಲ್ಲ ಕೇಬಲಗಳು ಕೃಷ್ಣೆ ನೀರಿಗೆ ಕೆಲವು ಕೊಚ್ಚಿ ಹೋಗಿದ್ದರೆ ಇನ್ನುಳಿದ ಕೇಬಲ್ಗಳು ಎಷ್ಟು ಸುರಕ್ಷಿತವಾಗಿವೆ ಎನ್ನುವುದು ಕೂಡ ಯಾರಲ್ಲಿಯೂ ಸ್ಪಷ್ಟತೆಯಿಲ್ಲ. ನರ್ಸರಿಗೆ ಸುರಕ್ಷತೆಗಾಗಿ ನಿರ್ಮಿಸಲಾಗಿದ್ದ ಕೃಷ್ಣೆ ದಡದಲ್ಲಿ ಸುರಕ್ಷತಾ ಕಾಂಪೌಂಡ್‌ ಗೋಡೆ ನೀರಿಗೆ ಕೊಚ್ಚಿ ಹೋಗಿದೆ. ನೆರೆ ಇಳಿದಿದ್ದರಿಂದ ನೀರಿನ ಪ್ರವಾಹಕ್ಕೆ ಗಿಡಗಳಲ್ಲಿ ಸಿಕ್ಕಿ ಹಾಕಿಹಾಕಿಕೊಂಡಿರುವ ಸಾಮಾನುಗಳನ್ನು ತಂದು ಲೆಕ್ಕ ಹಾಕುವದರಲ್ಲಿಯೇ ಗುತ್ತಿಗೆದಾರರು ತಲ್ಲೀನರಾಗಿದ್ದಾರೆ.

ಗಬ್ಬು ವಾಸನೆ: 77 ಎಕರೆ ವಿಸ್ತಾರದಲ್ಲಿರುವ ಮೊಘಲ್, ಇಟಾಲಿಯನ್‌, ರೋಜ್‌, ಸಂಗೀತ ನೃತ್ಯ ಕಾರಂಜಿ, ಲೇಸರ್‌ ಶೋಗಳಿಗೆ ಭೇಟಿ ನೀಡಬೇಕಾದರೆ ಮೂಗು ಮುಚ್ಚಿಕೊಂಡೇ ಹೋಗಬೇಕು. ಇಲ್ಲವಾದರೆ ಗಬ್ಬುವಾಸನೆ ತಡೆಯಲಾಗದೇ ವಾಂತಿಯಾಗುವುದು ಖಚಿತ.

ಇಲ್ಲಿ ಹಾವು, ಏಡಿ, ಮೀನುಗಳು ಎಲ್ಲೆಂದರಲ್ಲಿ ಸತ್ತು ಬಿದ್ದಿರುವದರಿಂದ ಅವುಗಳ ದುರ್ನಾತ ಸಹಿಸಲಸಾಧ್ಯ ಎನ್ನುವಷ್ಟರಮಟ್ಟಿಗೆ ದುರ್ವಾಸನೆ ಬೀರುತ್ತದೆ. ಇದರಿಂದ ಅದರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಮೂಗಿಗೆ ಬಟ್ಟೆಕಟ್ಟಿಕೊಂಡು ಕೆಲಸ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.