ಬರಕ್ಕೆ ತತ್ತರಿಸಿದ ಬಿಸಿಲ ನಾಡು

•ಕುಡಿಯುವ ನೀರಿಗೆ ಸೀಮಿತವಾದ ಅಮರ್ಜಾ ಅಣೆಕಟ್ಟು•ಪಾತಾಳಕ್ಕೆ ಕುಸಿದ ಅಂತರ್ಜಲ

Team Udayavani, May 25, 2019, 9:55 AM IST

25-May-1

ಆಳಂದ: ಹನಿ ನೀರಿಲ್ಲದೇ ತಾಲೂಕಿನಲ್ಲಿನ ಕೆರೆಗಳು ಬತ್ತಿಹೋಗಿ ಬರದ ರೌದ್ರಾವತಾರ ಪ್ರದರ್ಶಿಸುತ್ತಿವೆ.

ಆಳಂದ: ಬೇಸಿಗೆ ಬವಣೆಗೆ ತಾಲೂಕಿನ 33 ಕೆರೆಗಳ ಪೈಕಿ 29 ಕೆರೆಗಳು ಸಂಪೂರ್ಣ ನೀರಿಲ್ಲದೆ ಬತ್ತಿ ಹೋಗಿದ್ದು, ಈ ಭಾಗದ ಜೀವ ಸಂಕುಲ ಒದ್ದಾಡುವಂತೆ ಆಗಿದೆ.

ಬೇಸಿಗೆ ಬಂದರೆ ಗ್ರಾಮೀಣ ಭಾಗದಲ್ಲಿ ಕೆರೆ ನೀರನ್ನೇ ಆಶ್ರಯಿಸುತ್ತಿದ್ದ ಜನ ಹಾಗೂ ಜಾನುವಾರುಗಳಿಗೆ ಇತ್ತೀಚೆಗೆ ಪ್ರತಿ ಬೇಸಿಗೆಯಲ್ಲಿಯೂ ಕೆರೆಗಳು ಒಣಗುತ್ತಿರುವ ಸನ್ನಿವೇಶ ಎದುರಾಗುತ್ತಿದ್ದು, ಇದರಿಂದ ಕೆರೆ ಸುತ್ತಮುತ್ತಲಿನ ಪ್ರದೇಶ ಹಾಗೂ ಕೆಳಭಾಗದಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದು ನೀರಿನ ದಾಹ ಹೆಚ್ಚತೊಡಗಿದೆ.

ಎರಡು ದಶಕಗಳ ಹಿಂದೆ ಜಿಲ್ಲೆಗೆ ನೀರಾವರಿ ಕ್ಷೇತ್ರದಲ್ಲಿ ಮುನ್ನುಡಿ ಬರೆದಿದ್ದ ತಾಲೂಕು ಈಗ ನೀರಿಲ್ಲದೆ ಕೃಷಿ ಕ್ಷೇತ್ರ ಕುಗ್ಗಿ ಹೋಗಿದೆ. ನೀರಾವರಿ ಕಲ್ಪಿಸುವ ಉದ್ದೇಶದಿಂದ ಹುಟ್ಟಿಕೊಂಡ ಅಮರ್ಜಾ ಅಣೆಕಟ್ಟು ಈಗ ಕುಡಿಯುವ ನೀರು ಪೂರೈಕೆಗೆ ಸೀಮಿತವಾಗಿ ಬಿಟ್ಟಿದೆ. ಹೀಗಾಗಿ ಮಳೆ ಕೊರತೆಯಿಂದ ಬತ್ತುತ್ತಿರುವ ಕೆರೆ-ಗೋಕಟ್ಟೆಗಳಿಂದ ಕುಡಿಯುವ ನೀರಿಗಷ್ಟೇ ಅಲ್ಲದೆ, ನೀರಾವರಿ ಕೃಷಿಗೆ ಪೆಟ್ಟು ಬಿದ್ದಿದ್ದು, ಶಾಶ್ವತ ಪರಿಹಾರ ದೊರೆಯದೆ ಬೇಸಿಗೆ ಬಂದರೆ ಕುಡಿಯಲು ನೀರು ಸಿಕ್ಕರೆ ಸಾಕಪ್ಪ ಎನ್ನುವ ಮಟ್ಟಕ್ಕೆ ಪರಿಸ್ಥಿತಿ ಬಂದೊದಗಿದೆ.

ತಾಲೂಕಿನ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 33 ಕೆರೆಗಳ ಪೈಕಿ ಆಳಂದ, ಸಾಲೇಗಾಂವ, ಬೆಳಮಗಿ, ಮಟಕಿ, ಹಡಲಗಿ, ನಿಂಬಾಳ, ಕೆರೂರ, ನರೋಣಾ, ಬೆಳಮಗಿ ಈ ಎಂಟು ಕೆರೆಗಳಲ್ಲಿ ಶೇ. 50ರಷ್ಟು ಮಾತ್ರ ನೀರು ಸಂಗ್ರಹವಿದೆ. ಇಲ್ಲಿನ ಹಳ್ಳಿಗರ ಪ್ರಾಣಿ, ಪಕ್ಷಿಗಳಿಗೆ ಕೊಂಚ ನೆಮ್ಮದಿ ಇದೆ. ಆದರೆ ಆರಂಭದಲ್ಲಿ ಈ ಕೆರೆಗಳ ಉದ್ದೇಶವೇ ರೈತರ ಜಮೀನುಗಳಿಗೆ ನೀರೊದಗಿಸುವ ಉದ್ದೇಶವಾಗಿತ್ತು. ಆದರೆ ಯಾವ ಕೆರೆಯ ಕಾಲುವೆಯೂ ಇಂದು ಜೀವಂತವಿಲ್ಲ. ಇತ್ತ ವರ್ಷ ಕಳೆದಂತೆ ಬೇಸಿಗೆಯಲ್ಲಿ ನೀರು ಉಳಿಯುತ್ತಿಲ್ಲ. ಹೀಗಾಗಿ ಕೆರೆಗಳಿಗೆ ಮಳೆಗಾಲದಲ್ಲಿ ಒಂದೊಮ್ಮೆ ಹೆಚ್ಚಿನ ಮಳೆ ಬಂದು ಅಧಿಕ ಪ್ರಮಾಣದ ನೀರು ಸಂಗ್ರಹಿಸಿಕೊಳ್ಳಲು ಕಾಯಕಲ್ಪದ ಕೆಲಸ ನಡೆದರೆ, ಪ್ರತಿ ಬೇಸಿಗೆಯಲ್ಲಿಯೂ ಉಂಟಾಗುವ ನೀರಿನ ತಾಪತ್ರಯ ತಪ್ಪಿಸುವ ಕೆಲಸ ಮಾಡಬೇಕಾಗಿರುವುದು ಅತ್ಯಂತ ಜರೂರಿಯಾಗಿದೆ.

ಮತ್ತೂಂದೆಡೆ ಇನ್ನುಳಿದ 25 ಕೆರೆಗಳಲ್ಲಿ ಸೆಪ್ಟೆಂಬರ್‌ ಹಾಗೂ ಕೆಲವು ಡಿಸೆಂಬರ್‌ ತಿಂಗಳಲ್ಲೇ ಸಂಪೂರ್ಣ ಬತ್ತಿ ಹೋಗಿದ್ದು, ಕೆಲವು ಕೆರೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲದೇ 2012ರಲ್ಲಿ ತಾಲೂಕಿನ ಪಡಸಾವಳಿ ಕೋತನಹಿಪ್ಪರಗಾ ಮತ್ತು ನಿಂಬರಗಾ ಗ್ರಾಮಕ್ಕೆ ಹೊಸ ಕೆರೆ ನಿರ್ಮಾಣಕ್ಕೆ ಮಂಜೂರಾತಿ ದೊರೆತರೂ ಅಧಿಕಾರಿಗಳ ನಿರಾಸಕ್ತಿಯಿಂದ ಇದುವರೆಗೂ ಕಾಮಗಾರಿ ಆರಂಭಕ್ಕೆ ಚಾಲನೆ ದೊರೆತಿಲ್ಲ. ಹೆಚ್ಚೆಚ್ಚು ಕೆರೆ, ಗೋಕಟ್ಟೆಗಳ ನಿರ್ಮಾಣ ಮತ್ತು ಇದ್ದ ಕೆರೆಗಳಿಗೆ ನಿರ್ವಹಣೆ ಕೆಲಸ, ಮಳೆಗಾಲದಲ್ಲಿ ಕೆರೆಗಳ ನೀರು ವ್ಯಯವಾಗದಂತೆ ನೋಡಿಕೊಂಡರೆ ಬೇಸಿಗೆಯಲ್ಲಿ ಜೀವಜಲಕ್ಕೆ ಪರದಾಟ ತಪ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಆಳುವ ಜನ ಪ್ರತಿನಿಧಿಗಳು ಹೆಜ್ಜೆ ಹಾಕುವರೆ ಎನ್ನುವುದನ್ನು ಕಾಯ್ದುನೋಡಬೇಕಿದೆ.

33 ಕೆರೆಗಳ ಪೈಕಿ 29 ಕೆರೆಗಳು ಬತ್ತಿಹೋಗಿವೆ. ನಾಲ್ಕು ಕೆರೆಗಳಲ್ಲಿ ಅರ್ಧದಷ್ಟು ನೀರಿದ್ದು, ಕೃಷಿ ಪೂರೈಕೆಗೆ ಅವಕಾಶ ನೀಡದೆ, ಜನ ಜಾನುವಾರುಗಳ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಮೂರು ಕೆರೆಗಳು ಮಂಜರಾದರೂ ಸಹಿತ ಭೂಸ್ವಾಧಿಧೀನ ಕೈಗೊಂಡು ಪರಿಹಾರ ಮೊತ್ತ ಪಾವತಿಸುವಲ್ಲಿ ವಿಳಂಬವಾಗಿದ್ದರಿಂದ ಕಾಮಗಾರಿಗೆ ತಡವಾಗಿದೆ. ಕೋತನಹಿಪ್ಪರಗಾ ಮತ್ತು ನಿಂಬರಗಾ ರೈತರಿಗೆ ಭೂಸ್ವಾಧಿಧೀನ ಪರಿಹಾರ ಮೊತ್ತ ಪಾವತಿಯಾಗಿದ್ದು, ಕಾಮಗಾರಿ ನಡೆಯಲಿದೆ. ಪಡಸಾವಳಿಯಲ್ಲಿ ರೈತರು ತಕರಾರೆತ್ತಿದ್ದರಿಂದ ಇನ್ನು ಪ್ರಕ್ರಿಯೆ ಶುರುವಾಗಿಲ್ಲ.
ಆನಂದಕುಮಾರ,
ಪ್ರಭಾರಿ ಎಇಇ,
ಸಣ್ಣ ನೀರಾವರಿ ಇಲಾಖೆ, ಕಲಬುರಗಿ

ಮಹಾದೇವ ವಡಗಾಂವ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.