ಶಿಲೆಯಲ್ಲಿ ಅರಳುತ್ತಿದೆ ಮುನೀಂದ್ರ ಶ್ರೀಗಳ ಗದ್ದುಗೆ


Team Udayavani, Mar 25, 2019, 11:31 AM IST

gul-4
ವಾಡಿ: ಸುಕ್ಷೇತ್ರ ಹಳಕರ್ಟಿ ಗ್ರಾಮದ ಕಟ್ಟಮನಿ ಹಿರೇಮಠದ ಮೂವರು ಲಿಂ.ಮುನೀಂದ್ರ ಶಿವಯೋಗಿಗಳ ಗದ್ದುಗೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಅತ್ಯಾಕರ್ಷಕ ಶಿಲಾದೇಗುಲ ಮಠದ ಸೌಂದರ್ಯ ಹೆಚ್ಚಿಸುತ್ತಿದೆ.
ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಮೃತ ಹಸ್ತದಿಂದ ಕತೃ ಗದ್ದುಗೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತು ಎರಡು ವರ್ಷಗಳು ಕಳೆದಿದ್ದು, ಸದ್ಯ ಶೇ.70 ರಷ್ಟು ಗದ್ದುಗೆ ಜೋರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದೆ. ಭಕ್ತಿ ಸೇವೆ ಮೂಲಕ ಕಟ್ಟಿಮನಿ ಮಠದತ್ತ ಭಕ್ತರನ್ನು ಆಕರ್ಷಿಸಿರುವ ಲಿಂ. ಮುನೀಂದ್ರ ಶಿವಯೋಗಿಗಳ ಗದ್ದುಗೆ ಸ್ಮಾರಕವಾಗಿ ನಿಲ್ಲಬೇಕು ಎಂಬ ಸದ್ಯದ ಪೀಠಾಧಿಪತಿ ಅಭಿನವ ಶ್ರೀಮುನೀಂದ್ರ ಸ್ವಾಮೀಜಿಗಳ ಕನಸು ಸಾಕಾರಗೊಳ್ಳುತ್ತಿದೆ.
ಶಿಲಾ ದೇಗುಲಗಳ ತವರೂರಾಗಿರುವ ಐತಿಹಾಸಿಕ ಹಂಪಿ ಸಮೀಪದ ಬುಕ್‌ ಸಾಗರ ಪರಿಸರದಲ್ಲಿನ ಶ್ವೇತವರ್ಣದ ಶಿಲಾ
ಬಂಡೆಗಳನ್ನು ಹಳಕರ್ಟಿ ಗ್ರಾಮಕ್ಕೆ ತರಿಸಲಾಗಿದೆ. ಈ ಬಂಡೆಗಳು ಹಾಗೂ 22 ಕಂಬಗಳಿಂದ ಕತೃ ಗದ್ದುಗೆ ನಿರ್ಮಾಣಗೊಳ್ಳುತ್ತಿದೆ. ಕಟ್ಟಡದ ಗುಹೆ ಮಾರ್ಗದಲ್ಲಿ ಲಿಂ.ಮುನೀಂದ್ರ ಶ್ರಿಗಳ ಗದ್ದುಗೆ ನಿರ್ಮಾಣಗೊಂಡಿವೆ. ಮೇಲ್ಭಾಗದಲ್ಲಿ ಶ್ರೀಗಳ ಶಿಲಾಮೂರ್ತಿ ಸ್ಥಾಪಿಸಲಾಗುತ್ತಿದೆ. ಶಿಲ್ಪ ಕಲಾವಿದನ ಕೈಚಳಕಕ್ಕೆ ಸಿಕ್ಕು ಇಡೀ ಗದ್ದುಗೆ ಕಲಾಕೃತಿಗಳಿಂದ ಬೆಸೆದುಕೊಂಡಿದೆ. ಸ್ಥಳದಲ್ಲಿಯೇ ಶಿಲೆಗಳ ಕೆತ್ತನೆ ಕಾರ್ಯ ನಡೆಯುತ್ತಿದ್ದು, ಗದ್ದುಗೆಗೆ ಅಂತಿಮ ಸ್ಪರ್ಷ ನೀಡಲಾಗುತ್ತಿದೆ.
ಹಳಕರ್ಟಿ ಗ್ರಾಮವೊಂದು ಐತಿಹಾಸಿಕ ತಾಣವಾಗಿದ್ದು, ರಾಷ್ಟ್ರಕೂಟರ ಆಡಳಿತದ ಹಲವು ಕುರುಹುಗಳು ಇಲ್ಲಿವೆ. ಶಿಲಾಶಾಸನಗಳು, ಕೋಟೆ ಕೊತ್ತಲಗಳು, ಬಾವಿ, ದೇವಸ್ಥಾನಗಳು ಹಳಕರ್ಟಿ ಗ್ರಾಮದ ಇತಿಹಾಸ ಹೇಳುತ್ತಿವೆ. ಶ್ರೀ ವೀರಭದ್ರೇಶ್ವರ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ ಹಾಗೂ ಕಟ್ಟಿಮನಿ ಹಿರೇಮಠ, ಗ್ರಾಮದ ಭಕ್ತಿಯ ಕೇಂದ್ರಗಳಾಗಿವೆ. ಪ್ರತಿ ವರ್ಷ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ನಡೆದು ಕಲ್ಯಾಣ ನಾಡಿನ ಗಮನ ಸೆಳೆಯುತ್ತದೆ.
ನಿರ್ಮಾಣ ಹಂತದಲ್ಲಿರುವ ಲಿಂ.ಮುನೀಂದ್ರ ಶ್ರೀಗಳ ಗದ್ದುಗೆಯೂ ಸಹ ಗ್ರಾಮದ ಭಕ್ತಿಯ ಕೇಂದ್ರಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದು, ನೂತನ ಗದ್ದುಗೆಯ ಲೋಕಾರ್ಪಣೆಗಾಗಿ ಭಕ್ತರು ಕಾಯ್ದು ಕುಳಿತಿದ್ದಾರೆ.
ಹಳಕರ್ಟಿ ಕಟ್ಟಿಮನಿ ಹಿರೇಮಠಕ್ಕೆ ಲಿಂ.ಮುನೀಂದ್ರ ಶ್ರೀಗಳ ಕೊಡುಗೆ ಅನನ್ಯವಾಗಿದೆ. ಶ್ರೀಗಳು ಮಠವನ್ನು
ಕಟ್ಟುವ ಬದಲು ಭಕ್ತರಮನಸ್ಸು ಕಟ್ಟಿದ್ದಾರೆ.
ನಂಬಿದ ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡಿ ಪವಾಡ ಮಾಡಿದ್ದಾರೆ. ಲಿಂ.ಮುನಿಂದ್ರ ಶ್ರೀಗಳ ಕೊಡುಗೆ ಚಿರಕಾಲ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಬೇಕು ಎನ್ನುವ ಕಾರಣಕ್ಕೆ ಸುಂದರ ಶಿಲಾ ಗದ್ದುಗೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಭಕ್ತರು ಸಹಾಯ-ಸಹಕಾರ ನೀಡಲು ಮುಂದೆ ಬಂದಿರುವುದು ಸಂತೋಷ ತಂದಿದೆ.
2020ರ ಫೆಬ್ರವರಿಯಲ್ಲಿ ಲಿಂ.ಮುನೀಂದ್ರ ಶ್ರೀಗಳ ಪುಣ್ಯಾರಾಧನೆ ಸಮಾರಂಭದಲ್ಲಿ ಜಗದ್ಗುರುಗಳ ಮೂಲಕ ಗದ್ದುಗೆ ಲೋಕಾರ್ಪಣೆಗೊಳ್ಳಲಿದೆ.
ಶ್ರೀ ಮುನೀಂದ್ರ ಸ್ವಾಮೀಜಿ ಪೀಠಾಧಿಪತಿ, ಕಟ್ಟಿಮನಿ ಹಿರೇಮಠ ಹಳಕರ್ಟಿ

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

1-wqeqwewq

Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.