ಗಡಿ ತಾಲೂಕಿನ ಬೆಳೆಗೆ ಕಳೆ ತಂದ ಮಳೆ
ಆತಂಕದಲ್ಲಿದ್ದ ಅನ್ನದಾತರಿಗೆ ಆನಂದ
Team Udayavani, Jul 21, 2019, 3:15 PM IST
ಔರಾದ: ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಮಳೆ ದೃಶ್ಯ.
ಔರಾದ: ಬಾರದ ಮಳೆಯಿಂದ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದ ಗಡಿ ತಾಲೂಕಿನ ಅನ್ನದಾತರಿಗೆ ಶುಕ್ರವಾರ ಸಂಜೆಯಿಂದ ರಾತ್ರಿಪೂರ್ತಿ ಸುರಿದ ಮಳೆ ಮಂದಾಹಾಸ ಮೂಡಿಸಿದ್ದು, ಹೊಲದಲ್ಲಿನ ಬೆಳೆಗಳಿಗೆ ಕಳೆ ಬಂದಿದೆ.
ಒಂದೂವರೆ ತಿಂಗಳ ಹಿಂದೆ ತಾಲೂಕಿನ ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡಿದ ಬಳಿಕ ಮಳೆ ಬಾರದಿರುವುದರಿಂದ ನಿರಾಶೆ ಮೂಡಿತ್ತು. ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ರೈತರಲ್ಲಿ ಹರ್ಷ ಮೂಡಿದೆ. ಮಂಗಾರು ಬಿತ್ತನೆ ನಂತರ ಮಳೆ ಬಾರದಿರುವುದರಿಂದ ಬಾಡುತ್ತಿರುವ ಬೆಳೆ ಕಂಡು, ಪಟ್ಟಣ-ಗ್ರಾಮೀಣ ಭಾಗದ ರೈತ ಕುಟುಂಬದ ಸದಸ್ಯರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಹಾಗೂ ಜಾತ್ರೆಗಳನ್ನು ಮಾಡಿದ್ದರು. ಅವರ ಸಂಕಲ್ಪದಂತೆ ಈಗ ವರಣ ಕೃಪೆ ತೋರಿದ್ದಾನೆ.
ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಜಲಮೂಲಗಳಿಗೆ ನೀರು ಬಾರದಿದ್ದರೂ ಹೊಲದಲ್ಲಿನ ಬೆಳೆಗಳಿಗೆ ಸಾಕಾಗುವಷ್ಟು ನೀರು ಬಂದಿದೆ ಎನ್ನುವುದು ಅನುಭವಿ ರೈತರ ಮಾತು.ಬೆಳೆ ಬಾಡುವ ಸಮಯದಲ್ಲಿ ಮಳೆ ಬಂದಿದೆ. ಇದರಿಂದ ತಾಲೂಕಿನ ರೈತರು ಶನಿವಾರ ತಮ್ಮ ಹೊಲಗಳಿಗೆ ಹೋಗಿ ಉತ್ಸಾಹದಿಂದ ಕೆಲಸ ಮಾಡಿದ್ದು ಕಂಡು ಬಂದಿತು.
ಬೆಳೆಗಳಿಗೆ ಬೇಕಾಗುವಷ್ಟು ಮಳೆ ಬಂದಿದೆ. ಆದರೆ ಜಲಮೂಲಗಳಲ್ಲಿ ನೀರು ಬಂದಿಲ್ಲ. ಜಾನುವಾರುಗಳಿಗೆ ಅಗತ್ಯವಿರುವ ಮೇವು ಸಹ ಈ ವರ್ಷ ಬೆಳೆದಿಲ್ಲ. ಇನ್ನೂ ಸ್ವಲ್ಪ ಮಳೆ ಬಂದರೆ ಅನುಕೂಲವಾಗುತ್ತಿತ್ತು. ಕಾರಣ ಇನ್ನೂ ತಾಲೂಕಿನ ಅರವತ್ತು ಗ್ರಾಮದ ಜನರು ಮಳೆಗಾಲದಲ್ಲೂ ಬೇಸಿಗೆಯಂತೆ ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಹೋಬಳಿವಾರು ಮಳೆ ಪ್ರಮಾಣ: ಔರಾದ ಹೋಬಳಿ ವ್ಯಾಪ್ತಿಯಲ್ಲಿ 36 ಮಿ.ಮೀ., ಚಿಂತಾಕಿ ಹೋಬಳಿ ವ್ಯಾಪ್ತಿಯಲ್ಲಿ 43 ಮಿ.ಮೀ., ದಾಬಕಾ ಹೋಬಳಿ ವ್ಯಾಪ್ತಿಯಲ್ಲಿ 23 ಮಿ.ಮೀ., ಕಮಲನಗರ ಹೋಬಳಿ ವ್ಯಾಪ್ತಿಯಲ್ಲಿ 24 ಮಿ.ಮೀ., ಸಂತಪೂರ ಹೋಬಳಿ ವ್ಯಾಪ್ತಿಯಲ್ಲಿ 42 ಮಿ.ಮೀ., ಠಾಣಾಕುಶನೂರ ಹೋಬಳಿ ವ್ಯಾಪ್ತಿಯಲ್ಲಿ 37 ಮಿ.ಮೀ., ಮಳೆಯಾಗಿದೆ.
ಹೊಲದಲ್ಲಿ ಬೆಳೆಗಳಿಗೆ ಸಾಕಾಗುವಷ್ಟು ಮಳೆ ಬಂದಂತೆ ತಾಲೂಕಿನ ಜಲಮೂಲಗಳಲ್ಲಿ ನೀರು ತುಂಬುವಂತೆ ಮಳೆ ಬರಲಿ. ಈ ವರ್ಷವಾದರೂ ಗಡಿ ತಾಲೂಕಿನಲ್ಲಿ ಬರ ದೂರವಾಗಲಿ ಎನ್ನುವುದು ಪ್ರಜ್ಞಾವಂತರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ