ಎರಡು ವರ್ಷವಾದ್ರೂ 7 ಸಾವಿರ ಮನೆ ಕಟ್ಟಿಲ್ಲ

•ಆಶ್ರಯ ಮನೆ ಮಂಜೂರಾದ್ರು ನಿರ್ಮಾಣವಿಲ್ಲ •ಎರಡು ವರ್ಷದಲ್ಲಿ ಜಿಲ್ಲೆಗೆ 18 ಸಾವಿರ ಮನೆ ಮಂಜೂರು

Team Udayavani, Jul 4, 2019, 12:27 PM IST

Udayavani Kannada Newspaper

ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ:
ಬಡವರಿಗೆ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ಆಶ್ರಯ ಮನೆ ಮಂಜೂರು ಮಾಡಿದರೂ ಜಿಪಂ ನಿರ್ಲಕ್ಷ್ಯದಿಂದ 7 ಸಾವಿರ ಮನೆಗಳ ನಿರ್ಮಾಣ ಆರಂಭವಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ನಿಜ, ಜಿಲ್ಲೆಯಲ್ಲಿ ಒಂದೆಡೆ ಆಶ್ರಯ ಮನೆಗಾಗಿ ಬಡವರು, ಶಾಸಕರು-ಅಧಿಕಾರಿಗಳೆಡೆಗೆ ನಿತ್ಯ ಎಡತಾಕುತ್ತಿದ್ದರೆ, ಇನ್ನೊಂದೆಡೆ ಮಂಜೂರಾದ ಮನೆಗಳೇ ನಿರ್ಮಾಣಗೊಂಡಿಲ್ಲ. ಹೀಗಾಗಿ ಜಿಲ್ಲೆಗೆ ಬರಬೇಕಿರುವ ಹೆಚ್ಚುವರಿ ಮನೆಗಳೂ ಮಂಜೂರಾಗುತ್ತಿಲ್ಲ ಎನ್ನಲಾಗಿದೆ.

ಎರಡು ವರ್ಷದಲ್ಲಿ 18 ಸಾವಿರ ಮನೆ: ಜಿಲ್ಲೆಯ ಆರು ತಾಲೂಕು ವ್ಯಾಪ್ತಿಯ 198 ಗ್ರಾ.ಪಂ.ಗಳಿಗೆ 2018-19 ಹಾಗೂ 2019-20ನೇ ಸಾಲಿಗೆ ಒಟ್ಟು 18,480 ಮನೆಗಳು ಮಂಜೂರಾಗಿವೆ. ಪ್ರಸಕ್ತ ಏಪ್ರಿಲ್ನಿಂದ ಜೂನ್‌ ಅಂತ್ಯದ ವರೆಗೆ 9,243 ಮನೆ ನಿರ್ಮಿಸಬೇಕಿತ್ತು. ಆದರೆ, ಈವರೆಗೆ 7,686 ಮನೆ ಪೂರ್ಣಗೊಂಡಿವೆ ಎಂದು ಜಿಪಂ ಅಧಿಕಾರಿಗಳು ಹೇಳುತ್ತಿದ್ದಾರೆ.

ಮೂರು ತಿಂಗಳ ಗುರಿಯಲ್ಲಿ ಮಾತ್ರ 7 ಸಾವಿರ ಮನೆಗಳು ನಿರ್ಮಾಣಗೊಂಡಿದ್ದು, ಎರಡು ವರ್ಷಗಳಿಂದ ನಿರ್ಮಾಣಗೊಳ್ಳದೇ ಇರುವ ಮನೆಗಳತ್ತ ಜಿಪಂ ಅಧಿಕಾರಿಗಳು ಗಮನ ಹರಿಸಿಲ್ಲ ಎಂಬ ಆರೋಪ, ಜಿಲ್ಲೆಯ ಜನಪ್ರತಿನಿಧಿಗಳಿಂದ ಕೇಳಿ ಬರುತ್ತಿದೆ.

7 ಸಾವಿರ ಮನೆ ಆರಂಭಿಸಿಲ್ಲ: ಮಂಜೂರಾದ ಒಟ್ಟು 18,480 ಆಶ್ರಯ ಮನೆಗಳಲ್ಲಿ 7,039 ಮನೆ ಆರಂಭಗೊಳಿಸಿಲ್ಲ. ಬಾದಾಮಿ-1306, ಬಾಗಲಕೋಟೆ-791, ಬೀಳಗಿ-559, ಹುನಗುಂದ-1300, ಜಮಖಂಡಿ-1711, ಮುಧೋಳ-1372 ಮನೆಗಳನ್ನು ಆರಂಭಿಸಿಲ್ಲ. ಬಾದಾಮಿ, ಹುನಗುಂದ ಹಾಗೂ ಮುಧೋಳ ತಾಲೂಕಿನಲ್ಲಿ ಅತಿಹೆಚ್ಚು ಮನೆಗಳು ಆರಂಭಿಸಿಲ್ಲ ಎಂಬುದು ಜಿಪಂ ದಾಖಲೆಗಳು ಹೇಳುತ್ತವೆ.

ಹಳ್ಳಿ ರಾಜಕೀಯ ಕಾರಣ ?: ಗ್ರಾಮೀಣ ಭಾಗದಲ್ಲಿ ಬಸವ ವಸತಿ ಹಾಗೂ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮಂಜೂರಾದ ಆಶ್ರಯ ಮನೆಗಳು ಆರಂಭಗೊಳ್ಳದಿರಲು ಹಳ್ಳಿ ರಾಜಕೀಯ ಕಾರಣ ಎಂದು ಕೆಲವರು ಹೇಳುತ್ತಾರೆ. ಗ್ರಾಪಂ ಸದಸ್ಯರು ತಮಗೆ ಬೇಕಾದವರಿಗೆ ಮಾತ್ರ ಮನೆ ಮಂಜೂರು ಮಾಡಿಸುತ್ತಾರೆ, ಆ ಫಲಾನುಭವಿ ಸ್ವಂತ ಮನೆ ಹೊಂದಿದ್ದರೆ, ಅದಕ್ಕೆ ಅದೇ ಗ್ರಾಮದ ಬೇರೊಬ್ಬರು ತಕರಾರು ಅರ್ಜಿ ನೀಡಿ, ಸ್ಥಗಿತಗೊಳಿಸುತ್ತಾರೆ. ಮತ್ತೆ ಕೆಲವೆಡೆ ಗ್ರಾಮಸಭೆ ನಡೆಸಿ, ಮಂಜೂರಾದ ಮನೆಗಳನ್ನು ಸರಿಯಾಗಿ ಹಂಚಿಕೆ ಮಾಡುವುದಿಲ್ಲ. ಇದು ಆಶ್ರಯ ಮನೆಗಳ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಗಲು ಕಾರಣ ಎಂಬುದು ಕೆಲವರ ಆರೋಪ.

ಮನೆಗಾಗಿ ಅಲೆದಾಟ ನಿಂತಿಲ್ಲ: ಜಿಲ್ಲೆಯ 3,53,852 ಕುಟುಂಬಗಳಲ್ಲಿ 61,675 ಕುಟುಂಬಕ್ಕೆ ಸ್ವಂತ ಸೂರಿಲ್ಲದಿದ್ದರೆ, 30,437 ಕುಟುಂಬಗಳಿಗೆ ಸ್ವಂತ ನಿವೇಶನವೂ ಇಲ್ಲ. ಇಷ್ಟೊಂದು ಕುಟುಂಬಗಳು ಸ್ವಂತ ಸೂರಿಗಾಗಿ ಪರದಾಡುತ್ತಿದ್ದರೆ, ಜಿಲ್ಲೆಗೆ ಮಂಜೂರಾದ ಸಾವಿರಾರು ಮನೆಗಳನ್ನು ನಿರ್ಮಿಸದೇ, ಉಳಿಸಿಕೊಂಡಿದ್ದರಿಂದ ಹೊಸ ಮನೆಗಳ ಮಂಜೂರಾತಿಗೆ ಹಿನ್ನಡೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಹೊಸಬರ ಆಯ್ಕೆಗೆ ತಯಾರಿ: ಕಳೆದ ಎರಡು ವರ್ಷಗಳಿಂದ ಆಶ್ರಯ ಮನೆ ನಿರ್ಮಿಸಿಕೊಳ್ಳದ ಫಲಾನುಭಗಳನ್ನು ಬದಲಿಸಿ, ಹೊಸಬರ ಆಯ್ಕೆಗೆ ಜಿಪಂ ತಯಾರಿ ನಡೆಸಿದೆ ಎನ್ನಲಾಗಿದೆ. ಆದರೆ, ಈ ಪ್ರಕ್ರಿಯೆಗೆ ಗ್ರಾಪಂ ಮಟ್ಟದ ರಾಜಕೀಯ ಅಡ್ಡಿ ಬರುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಎರಡು ವರ್ಷವಾದರೂ ಮನೆ ನಿರ್ಮಿಸಿ ಕೊಳ್ಳದ ಫಲಾನುಭವಿಗಳಿಗೆ ಆಯಾ ಗ್ರಾಪಂನಿಂದ ನೋಟಿಸ್‌ ನೀಡಿ, ಅಂತಿಮ ಗಡುವು ನೀಡಲಾಗುತ್ತದೆ. ಆ ಬಳಿಕವೂ ಮನೆ ನಿರ್ಮಾಣ ಆರಂಭಿಸಿರುವ ಕುರಿತು ದಾಖಲೆ ಒದಗಿಸದಿದ್ದರೆ, ಅಂತಹ ಫಲಾನುಭವಿಗಳನ್ನು ಆಯ್ಕೆ ಪಟ್ಟಿಯಿಂದ ಕೈಬಿಡಲು ರಾಜೀವ ಗಾಂಧಿ ವಸತಿ ನಿಗಮಕ್ಕೆ ವರದಿ ನೀಡಲಾಗುತ್ತದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

ಸಾಧನೆ ಮಾಡಲಾಗಿದೆ. ಕೆಲವರಿಗೆ ಹಲವು ಬಾರಿ ಹೇಳಿದರೂ ಮನೆ ನಿರ್ಮಿಸಲು ಮುಂದಾಗಿಲ್ಲ. ಅಂತಹ ಫಲಾನುಭವಿಗಳಿಗೆ ಅಂತಿಮ ಸೂಚನೆ ನೀಡಲಾಗುತ್ತಿದೆ. 7 ಸಾವಿರ ಫಲಾನುಭವಿಗಳು ಈವರೆಗೆ ಮನೆ ನಿರ್ಮಿಸಿಕೊಂಡಿಲ್ಲ.
ವಿ.ಎಸ್‌. ಹಿರೇಮಠ,
ಜಿಪಂ ಯೋಜನಾ ನಿರ್ದೇಶಕ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.