ಥಿಯೇಟರನಲ್ಲಿ ಲಕ್ಷ್ಯ ಚಲನಚಿತ್ರ ವೀಕ್ಷಿಸಿದ ಆಹಾರ ನಿಗಮದ ಅಧ್ಯಕ್ಷ ಶಾಸಕ ನಡಹಳ್ಳಿ
Team Udayavani, Nov 27, 2021, 3:35 PM IST
ಮುದ್ದೇಬಿಹಾಳ: ಇಲ್ಲಿನ ಯು ನಿರ್ದೇಶಕ ರವೀ ಸಾಸನೂರ ನಿರ್ದೇಶಿಸಿದ ಪ್ರಥಮ ಕನ್ನಡ ಚಲನಚಿತ್ರ ಲಕ್ಷ್ಯ ವನ್ನು ಬಿಜೆಪಿ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿಯವರು ಶನಿವಾರ ಇಲ್ಲಿನ ಶ್ರೀ ಗಿರಿಜಾ ಶಂಕರ ಚಿತ್ರಮಂದಿರದಲ್ಲಿ ಸಾಮಾನ್ಯ ಪ್ರೇಕ್ಷಕರೊಂದಿಗೆ ವೀಕ್ಷಿಸಿ ಸರಳತೆ ತೋರುವುದರ ಜೊತೆಗೆ ಚಿತ್ರ ನಿರ್ದೇಶಕರಿಗೆ ಪ್ರೋತ್ಸಾಹ ನೀಡಿದರು.
ಈ ವೇಳೆ ನಿರ್ದೇಶಕ ರವಿ ಸಾಸನೂರ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ಉತ್ತರ ಕರ್ನಾಟಕದ ನಮ್ಮೂರಿನ ಪ್ರತಿಭೆ ಬೆಂಗಳೂರಿನಲ್ಲಿ ನೆಲೆಯೂರಿ ನಿರ್ದೇಶಕನಾಗುವುದು ಸಾಮಾನ್ಯ ಮಾತಲ್ಲ. ಈ ಭಾಗದ ಸಿನಿಪ್ರೀಯರು ಲಕ್ಷ್ಯ ಚಲನ ಚಿತ್ರ ವೀಕ್ಷಿಸಿ ಹೊಸ ಮಾದರಿಯ ಸಂದೇಶ ಹೊಂದಿರುವ ಚಿತ್ರದ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕು ಎಂದರು.
ಸಹ ಸಂಭಾಷಣೆಕಾರ ಅನೀಲಕುಮಾರ, ಚಿತ್ರಮಂದಿರದ ಮಾಲಿಕರಾದ ಶಿವಾನಂದ ಸಾಲಿಮಠ, ಶಂಕರ ಸಾಲಿಮಠ, ಸಾಲಿಮಠ ಸಹೋದರರು, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಿಜೆಪಿ ಯುವ ಘಟಕದ ಅಧ್ಯಕ್ಷ ಪುನೀತ್ ಹಿಪ್ಪರಗಿ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್