ತಂದೆ ಎದುರೇ ಹಳಿಗೆ ಬಿದ್ದು ಯುವಕ ಆತ್ಮಹತ್ಯೆ
Team Udayavani, Dec 14, 2018, 6:00 AM IST
ಬಾಗಲಕೋಟೆ: ಯುವಕನೊಬ್ಬ ತಂದೆಯ ಎದುರೇ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಗರದ ಶಿರೂರ ರೈಲ್ವೆ ಗೇಟ್ ಬಳಿ ಸಂಭ ವಿಸಿದೆ. ತಾಲೂಕಿನ ಗುಳಬಾಳ ತಾಂಡಾದ ಹೆಸ್ಕಾಂ ಲೈನ್ಮನ್ ಪರಶುರಾಮ ರಾಠೊ ಡ (27) ಆತ್ಮಹತ್ಯೆ ಮಾಡಿಕೊಂಡ ಯುವಕ.
ಪರಶುರಾಮ ಬಾಗಲಕೋಟೆಯಿಂದ ತನ್ನ ತಂದೆಯ ಜತೆಗೆ ಬೈಕ್ ಮೇಲೆ ಹೊರಟಿದ್ದ. ಶಿರೂರ ರೈಲ್ವೆ ಗೇಟ್ ಬಳಿ ರೈಲು ಆಗಮಿಸುವ ಹಿನ್ನೆಲೆಯಲ್ಲಿ ಗೇಟ್ ಅಳವಡಿಸಲಾಗಿತ್ತು. ರೈಲು ಬರುತ್ತಿದ್ದಂತೆ ಬೈಕ್ ಹಿಂಬದಿ ಕುಳಿತಿದ್ದ ಪರಶುರಾಮ, ಬೈಕ್ ಇಳಿದು ಓಡುತ್ತ ರೈಲ್ವೆ ಹಳಿಯ ಮೇಲೆ ಮಲಗಿಕೊಂಡಿದ್ದಾನೆ. ತಂದೆ ಹಿಡಿಯಲು ಓಡಿದರೂ ಕೈಗೆ ಸಿಕ್ಕಿಲ್ಲ. ಅಷ್ಟರಲ್ಲಿ ರೈಲು ಯುವಕನ ಕುತ್ತಿಗೆ ಮೇಲೆ ಹಾಯ್ದು, ದೇಹ ಮತ್ತು ಕುತ್ತಿಗೆ ತುಂಡಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ