ಆಲಮಟ್ಟಿ ಜಲಾಶಯ ಹಿನ್ನೀರು ಹೆಚ್ಚಳ
•ಮುಚಖಂಡಿ ಕೆರೆ ತುಂಬುವ ಯೋಜನೆ ಆರಂಭಗೊಳ್ಳುವ ನಿರೀಕ್ಷೆ•ಮಹತ್ವದ ವೇಳೆಯೇ ಅಧಿಕಾರಿ ವರ್ಗ
Team Udayavani, Jul 16, 2019, 9:27 AM IST
ಬಾಗಲಕೋಟೆ: ಎರಡೇ ದಿನದಲ್ಲಿ ಮುಚಖಂಡಿ ಕೆರೆ ತುಂಬಿಸುವ ಜಾಕ್ವೆಲ್ ಸುತ್ತ ಹಿನ್ನೀರು ಆವರಿಸಿಕೊಂಡಿದೆ.
ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯು ತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿದ್ದು, ಎರಡೇ ದಿನದಲ್ಲಿ ಬಾಗಲಕೋಟೆ ನಗರದ ಸುತ್ತ ಆಲಮಟ್ಟಿ ಜಲಾಶಯದ ಹಿನ್ನೀರು ಹೆಚ್ಚಿದೆ.
ಎರಡು ದಿನಗಳ ಹಿಂದಷ್ಟೇ ಮುಚಖಂಡಿ ಕೆರೆ ತುಂಬುವ ಯೋಜನೆಯ ಜಾಕವೆಲ್ಗೂ ಹಿನ್ನೀರು ಬಂದಿರಲಿಲ್ಲ. ಆದರೆ, ರವಿವಾರ ರಾತ್ರಿಯೇ ಜಾಕವೆಲ್ ಸುತ್ತ ಹಿನ್ನೀರು ಆವರಿಸಿಕೊಂಡಿದೆ. ಹೀಗಾಗಿ 721 ಎಕರೆ ವಿಸ್ತಾರದ ಮುಚಖಂಡಿ ಕೆರೆ ತುಂಬುವ ಯೋಜನೆ ಆರಂಭಗೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಆಲಮಟ್ಟಿ ಜಲಾಶಯದಲ್ಲಿ 516 ಮೀಟರ್ವರೆಗೆ ನೀರು ಸಂಗ್ರಹಗೊಂಡರೆ ಮುಚಖಂಡಿ ಕೆರೆ ತುಂಬಿಸುವ ಜಾಕವೆಲ್ಗೆ ಹಿನ್ನೀರು ಬರುತ್ತದೆ. ಆಗ ಸತತ ಮೂರು ತಿಂಗಳ ಕಾಲ 250 ಎಚ್ಪಿಯ ಎರಡು ಪಂಪ್ಸೆಟ್ ಆರಂಭಿಸಿದರೆ ಮುಚಖಂಡಿ ಕೆರೆ ತುಂಬಿಕೊಳ್ಳಲಿದೆ ಎಂಬುದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ಗಳ ಲೆಕ್ಕ. ಆದರೆ, 721 ಕೆರೆ ವಿಸ್ತಾರ, ಸುಮಾರು 18 ಅಡಿಯಷ್ಟು ಆಳದಲ್ಲಿರುವ ಮುಚಖಂಡಿ ಕೆರೆಯಲ್ಲಿ ಶೇ.12 ಹೂಳು ತುಂಬಿಕೊಂಡಿದೆ. ಹೀಗಾಗಿ ಎಷ್ಟೇ ನೀರು ತುಂಬಿಸಿದರೂ ಹೂಳು ಹೀರಿಕೊಳ್ಳುತ್ತಿದ್ದು, ಕಳೆದ ಎರಡು ವರ್ಷ ಎಷ್ಟೇ ಪ್ರಯತ್ನಿಸಿದರೂ ಕೆರೆ ಪೂರ್ಣ ತುಂಬಿಸಲು ಆಗಿಲ್ಲ ಎಂಬುದು ಅಧಿಕಾರಿಗಳ ಉತ್ತರವಾಗಿದೆ.
ಮಹತ್ವದ ವೇಳೆಯೇ ಅಧಿಕಾರಿ ವರ್ಗ: ಹಿನ್ನೀರನ್ನು ವಿವಿಧ ಕೆರೆಗಳಿಗೆ ತುಂಬಿಸುವ ಸಮಯ ಈಗ ಆರಂಭಗೊಳ್ಳಬೇಕಿದೆ. ಮುಚಖಂಡಿ ಕೆರೆ, ಶಿರೂರ ಜೋಡಿ ಕೆರೆ ತುಂಬಿಸಲು ಒಂದೆರಡು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕಿದ್ದು, ಇದೇ ವೇಳೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾಗಿದ್ದ ಶಂಭುಲಿಂಗ ಹೆರಕಲ್, ವಿಜಯಪುರದ ಮುಖ್ಯ ಇಂಜಿನಿಯರ್ ಕಚೇರಿಗೆ ವರ್ಗಗೊಂಡಿದ್ದಾರೆ.
ಅಲ್ಲದೇ ಮುಚಖಂಡಿ ಕೆರೆ ತುಂಬಿಸುವ ಜಾಕವೆಲ್ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ವಿತರಣೆ ಕೇಂದ್ರದಲ್ಲಿ ಕೆಲವು ತಾಂತ್ರಿಕ ದೋಷಗಳಿದ್ದು, ರಾತ್ರಿಯೇ ದುರಸ್ತಿಗೊಳಿಸಿ ನೀರು ತುಂಬಿಸಲು ಆರಂಭಿಸಲಾಗುವುದು ಎಂದು ಕೆಲ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕಳೆದ ವರ್ಷ ಕೆರೆಗೆ ನೀರು ತುಂಬಿಸುವ ವಿದ್ಯುತ್ ಪಂಪ್ಸೆಟ್ ಸುಟ್ಟರೆ ಅದನ್ನು ದುರಸ್ತಿಗೊಳಿಸಲು ಎರಡು ತಿಂಗಳ ಅವಧಿಯನ್ನು ಅಧಿಕಾರಿಗಳು ತೆಗೆದುಕೊಂಡಿದ್ದರು. ಪಂಪ್ಸೆಟ್ ದುರಸ್ತಿಗೊಳಿಸಿ, ಜಾಕವೆಲ್ಗೆ ತಂದು ಅಳವಡಿಸಿ ನೀರು ತುಂಬಿಸಲು ಆರಂಭಿಸುವ ಹೊತ್ತಿಗೆ ಹಿನ್ನೀರು ಸರಿದು ಹೋಗಿತ್ತು. ಹೀಗಾಗಿ ಮುಚಖಂಡಿ ಕೆರೆ ತುಂಬಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷವೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಟಿಸಿಯಲ್ಲಿ ಕೆಲ ಮೈನರ್ ರಿಪೇರಿ ಇವೆ ಎಂಬ ಸಬೂಬು ಹೇಳಿ, ಮತ್ತೆ ನಿರ್ಲಕ್ಷ್ಯ ವಹಿಸುವ ಚಾಳಿ ಮುಂದುವರೆಸಿದ್ದು, ನಿಗದಿತ ಅವಧಿಯಲ್ಲಿ ಕೆರೆ ತುಂಬಿಸಲು ಆರಂಭಿಸುತ್ತಾರಾ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಇಂದು ಆರಂಭ: ಐತಿಹಾಸಿಕ ಮುಚಖಂಡಿ ಕೆರೆ ಮತ್ತು ಶಿರೂರ ಜೋಡಿ ಕೆರೆ ತುಂಬಿಸಲು ಮಂಗಳವಾರದಿಂದಲೇ ಆರಂಭಿಸುತ್ತೇವೆ. ಮುಚಖಂಡಿ ಕೆರೆ ತುಂಬಿಸುವ ವಿದ್ಯುತ್ ಪರಿವರ್ತಕದಲ್ಲಿ ಸಣ್ಣ ದುರಸ್ತಿ ಕಾರ್ಯವಿದ್ದು, ಶಿರೂರ ಕೆರೆ ತುಂಬಿಸುವ ಜಾಕವೆಲ್ನಲ್ಲಿ ಫ್ಯೂಜ್ ಹೋಗಿದೆ. ಎರಡೂ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದು, ಮಂಗಳವಾರದಿಂದ ಕೆರೆಗೆ ನೀರು ಹರಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ನೂತನ ಎಇಇ ಸೋಮಶೇಖರ ಸಾವನ್ ಉದಯವಾಣಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ