ಮೈತ್ರಿ ಸರ್ಕಾರ ಪತನ ಮಾಧ್ಯಮಗಳ ಸೃಷ್ಟಿ’
Team Udayavani, Sep 22, 2018, 7:00 AM IST
ಕೂಡಲಸಂಗಮ: ಮೈತ್ರಿ ಸರ್ಕಾರ ಪತನವಾಗಲಿದೆ ಎಂಬುದು ಮಾಧ್ಯಮಗಳ ಸೃಷ್ಟಿ. ಆದರೆ, ಅಂಥ ಯಾವುದೇ ಆತಂಕ ಇಲ್ಲ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.
ಕೂಡಲಸಂಗಮದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್, ಜೆಡಿಎಸ್ ಶಾಸಕರು ಆಪರೇಶನ್ ಕಮಲಕ್ಕೆ ಒಳಗಾಗಿದ್ದಾರೆ. ಸರ್ಕಾರ ಈಗಲೋ, ಆಗಲೋ ಬಿದ್ದು ಹೋಗುತ್ತದೆ ಎಂಬ ರೀತಿಯಲ್ಲಿ ನಿತ್ಯ ಬಿಂಬಿಸುತ್ತಿವೆ. ಅಂತ ಯಾವುದೇ ಅಪಾಯ ಸಮ್ಮಿಶ್ರ ಸರ್ಕಾರಕ್ಕಿಲ್ಲ.
ಜಾರಕಿಹೊಳಿ ಸಹೋದರರ ಸಮಸ್ಯೆಗೆ ಪಕ್ಷದ ವರಿಷ್ಠರು ಪರಿಹಾರ ಕಲ್ಪಿಸಿದ್ದಾರೆ. ಆಪರೇಶನ್ ಕಮಲಕ್ಕೆ ಒಳಗಾಗುವುದಿಲ್ಲ ಎಂದು ಬಳ್ಳಾರಿ ಶಾಸಕರು ಸ್ಪಷ್ಟಪಡಿಸಿದ್ದಾರೆ.
ಎಲ್ಲ ಸಚಿವರು ತಮ್ಮ ಇಲಾಖೆ ಕೆಲಸ ಕಾರ್ಯಗಳನ್ನು ಸುಗಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ.ಸಿಎಂ ದಂಗೆ ಪದವನ್ನು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ನನ್ನ ಗಮನಕ್ಕೆ ಇಲ್ಲ. ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮುಖಂಡರ ಪ್ರಯತ್ನ ಪ್ರಜಾಪ್ರಭುತ್ವ ವ್ಯವಸ್ಥೆಯ ಕಪ್ಪು ಚುಕ್ಕೆ ಎಂದರು.