ರೈಲು ಹಳಿ ಮಧ್ಯೆ ಮಲಗಿಜೀವ ಉಳಿಸಿಕೊಂಡ ವೃದ್ಧ!
Team Udayavani, Jul 19, 2019, 5:14 AM IST
ಬಾಗಲಕೋಟೆ: ರೈಲು ಬರುತ್ತಿದ್ದ ವೇಳೆಯೇ ರೈಲ್ವೆ ಗೇಟ್ ದಾಟಲು ಹೋಗಿ ಇನ್ನೇನು ರೈಲ್ವೆಗೆ ಸಿಲುಕಲಿದ್ದ ವೃದ್ಧನೊಬ್ಬ, ಚಾಣಾಕ್ಷ್ಯತನ ಮೆರೆದು ರೈಲು ಹಳಿಗಳ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡ ಪ್ರಸಂಗ ನಗರದ ಶಿರೂರ ರೈಲ್ವೆ ಗೇಟ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ದೃಶ್ಯಾ ವಳಿಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ನಗರಕ್ಕೆ ಬಂದಿದ್ದ ಹಳ್ಳಿಯೊಂದರ ವೃದ್ಧ ಸಂಜೆ, ಮರಳಿ ತಮ್ಮೂರಿಗೆ ತೆರಳುವ ವೇಳೆ ಶಿರೂರ ರೈಲ್ವೆ ಗೇಟ್ ಹಾಕಲಾಗಿತ್ತು. ಆ ವೇಳೆ ರೈಲು ಬರುವುದು ತಡವಾಗಬಹುದು ಎಂದು ಭಾವಿಸಿ ರೈಲ್ವೆ ಗೇಟ್ ದಾಟಲು ಹೊರಟಿದ್ದರು. ಅಷ್ಟೊತ್ತಿಗೆ ಗೂಡ್ಸ್ ರೈಲು ವೇಗವಾಗಿ ಬರುತ್ತಿರುವುದು ಕಂಡು, ಅತ್ತ ಗೇಟ್ ದಾಟಲಾಗದೆ ರೈಲ್ವೆ ಹಳಿಗಳ ಮಧ್ಯೆ ಮಲಗಿದ್ದಾರೆ. ಈ ರೀತಿ ಮಲಗಿಕೊಂಡು ಜೀವ ಉಳಿಸಿಕೊಳ್ಳಲು ಅಲ್ಲಿದ್ದ ಸಾರ್ವಜನಿ ಕರು ವೃದ್ಧನಿಗೆ ಕೂಗಿ ಹೇಳಿದ್ದು, ಅವರು ಹೇಳಿದಂತೆ ವೃದ್ಧ ರೈಲು ಹಳಿಗಳ ಮಧ್ಯೆ ಮಲಗಿಕೊಂಡಿದ್ದಾರೆ. ವೃದ್ಧ ರೈಲು ಹಳಿಗಳ ಮಧ್ಯೆ ಮಲಗಿರುವುದು ಗೂಡ್ಸ್ ರೈಲ್ವೆ ಚಾಲಕನ ಗಮನಕ್ಕೆ ಬಂದಿದ್ದು ರೈಲು ನಿಲ್ಲಿಸಿದ್ದಾನೆ. ರೈಲು ನಿಂತ ಬಳಿಕ ವೃದ್ಧ ಹೊರ ಬಂದಿದ್ದು, ಈ ಎಲ್ಲ ದೃಶ್ಯಗಳನ್ನು ಯುವಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ