ಕಬ್ಬಿನ ಜತೆ ಅಂತರ ಬೆಳೆಯಾಗಿ “ಚಂಡು ಹೂ’

ಸಸಾಲಟ್ಟಿ ರೈತ ಹನಮಂತ ಸಲಬನ್ನವರ ಮಾದರಿ | ಕೈಗೆ ಬಂದಿದೆ 7 ಟನ್‌ ಹೂ|ಟನ್‌ ಹೂಗೆ 10 ಸಾವಿರ ನಿಗದಿ

Team Udayavani, Sep 15, 2021, 9:40 PM IST

vhjgyuy

ವರದಿ: ಬಿ.ಟಿ. ಪತ್ತಾರ

ತೇರದಾಳ: ಕಬ್ಬು ಬೆಳೆ ಜತೆ ಅಂತರ ಬೆಳೆಯಾಗಿ ಚಂಡು ಹೂವು ಬೆಳೆದ ಸಸಾಲಟ್ಟಿ ಗ್ರಾಮದ ರೈತ ಹನಮಂತ ಸಲಬನ್ನವರ ಇತರರಿಗೆ ಮಾದರಿಯಾಗಿದ್ದಾರೆ. ಒಂದು ಎಕರೆ ಏಳು ಗುಂಟೆ ಜಮೀನಿನಲ್ಲಿ ಕಬ್ಬು ಬೆಳೆದಿರುವ ಹನಮಂತ ಸಲಬನ್ನವರ ಅಂತರ ಬೆಳೆಯಾಗಿ ಚಂಡು ಹೂವು ಹಚ್ಚಿದ್ದು, ಅದರಿಂದ ಸಹಸ್ರಾರು ರೂಪಾಯಿ ಆದಾಯ ಹೊಂದುವ ಮೂಲಕ ಕಬ್ಬು ಬೆಳೆ ಬೆಳೆಯಲು ತಗಲುವ ವೆಚ್ಚವನ್ನು ಅಂತರ ಬೆಳೆಯಾದ ಚಂಡು ಹೂವಿನಲ್ಲಿ ಸರಿದೂಗಿಸಿಕೊಂಡಿದ್ದಾರೆ.

ತಿಪಟೂರಿನ ಎವಿಟಿ ಕಂಪನಿಯೊಂದಿಗೆ ಒಡಬಂಡಿಕೆ ಮಾಡಿಕೊಂಡ ಹನಮಂತ ಸಲಬನ್ನವರ, ಎವಿಟಿ ಅವರಿಂದ ಚಂಡು ಹೂವು ಹಾಗೂ ಅದಕ್ಕೆ ಬೇಕಾಗುವ ಔಷಧಿ ಪಡೆದಿದ್ದಾರೆ. ಚಂಡು ಹೂವು ಫಸಲು ಬಂದ ಬಳಿಕ ಅದೇ ಕಂಪನಿಯವರು ಸಸಾಲಟ್ಟಿ ಗ್ರಾಮಕ್ಕೆ ಬಂದು ಹೂವು ತೆಗೆದುಕೊಂಡು ಹೋಗುವ ಬಗ್ಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅದರಂತೆ ಕಳೆದ ಮೂರು ತಿಂಗಳ ಹಿಂದೆ ಚಂಡು ಹೂ ಹಚ್ಚಿದ ಹನಮಂತ, 4 ಅಡಿ 4 ಇಂಚಿಗೆ ಸಾಲಿನಿಂದ ಸಾಲಿಗೆ ಚಂಡು ಹೂವು ಬೀಜ ಹಚ್ಚಿದ್ದಾರೆ. ಬಳಿಕ ಒಂದು ಬಾರಿ ಔಷಧಿ ಸಿಂಪಡಿಸುವ ಕೆಲಸ ಮಾಡಿದ್ದಾರೆ. ಜತೆಗೆ ಮಗ್ಗಿ ಜಾಸ್ತಿ ಆಗುವುದು, ಹೂವು ಅರಳುವುದರ ಬಗ್ಗೆ ಔಷಧಿ ನೀಡಿದ್ದಾರೆ.

ಬೆಳೆಯ ನಡುವೆ ಕಸ-ಕಳೆ ಕೂಡ ಬೆಳೆದಿಲ್ಲ. ಇದರಿಂದ ಹೆಚ್ಚಿನ ಖರ್ಚು ಹನಮಂತ ಅವರಿಗೆ ತಗುಲಲಿಲ್ಲ. 7 ಟನ್‌ ಹೂ-ಚಂಡು ಹೂವು ಕೈಗೆ ಬಂದಿದೆ. ಇದುವರೆಗೆ 5 ಟನ್‌ ಹೂ ಬೆಳೆ ಬಂದಿದೆ. ಇನ್ನೂ ಎರಡು ಟನ್‌ದಷ್ಟು ಬೆಳೆ ಬರುವ ನಿರೀಕ್ಷೆ ಹೊಂದಿದ್ದಾರೆ. ಬೀಜ ವಿತರಿಸಿದ ತಿಪಟೂರಿನ ಎವಿಟಿ ಕಂಪನಿಯವರೇ ಸಸಾಲಟ್ಟಿಗೆ ಬಂದು ಪ್ರತಿ ಟನ್‌ಗೆ ಹತ್ತು ಸಾವಿರ ದರ ನಿಗದಿಗೊಳಿಸಿ ಅವರೇ ಖರೀದಿಸಿದ್ದಾರೆ. ಜತೆಗೆ ಸಾರಿಗೆ ಬಾಡಿಗೆ ಕೂಡ ಎವಿಟಿ ಕಂಪನಿಯವರೇ ಭರಿಸಿಕೊಂಡಿದ್ದಾರೆ. ಇದರಿಂದ ಇದುವರೆಗೆ ಐದು ಟನ್‌ ಹೂವು ಪಡೆದಿರುವ ಎವಿಟಿ, ಹನಮಂತ ಸಲಬನ್ನವರ ಅವರಿಗೆ 50 ಸಾವಿರ ಹಣ ನೀಡಿದ್ದಾರೆ. ಇನ್ನೂ 2 ಟನ್‌ ಬೆಳೆ ಬರುವ ನಿರೀಕ್ಷೆ ಇದ್ದು, ಅದರಿಂದ 20 ಸಾವಿರ ರೂ. ಬರುತ್ತದೆ. ಒಟ್ಟು 70 ಸಾವಿರ ರೂ.ಗಳ ಆದಾಯ ಪೈಕಿ ಹೂವು ಕೀಳಲು ಹನಮಂತ ಅವರು ಅಂದಾಜು ಹತ್ತು ಸಾವಿರ ಹಣ ನೀಡಿದ್ದು, ಇದರಿಂದ ಯಾವುದೇ ಖರ್ಚು ಇಲ್ಲದೇ 60 ಸಾವಿರ ಲಾಭ ಪಡೆದಿದ್ದಾರೆ.

ಒಂದು ಬೆಳೆಯ ಜತೆಗೆ ಅಂತರ ಬೆಳೆ ಬೆಳೆಯಲು ಹೊಂದಾಣಿಕೆ (ಒಡಬಂಡಿಕೆ) ವ್ಯವಸಾಯ ಮಾಡಿಕೊಳ್ಳುವ ಮೂಲಕ ಮೂಲ ಬೆಳೆ ಬಿತ್ತನೆ ಖರ್ಚು ನೀಗಿಸಿಕೊಳ್ಳುವ ಹೊಸ ಪ್ರಯೋಗ ರೈತರಿಗೆ ಹೊಸ ಆಸೆ ಮೂಡಿಸಿದೆ.

ಟಾಪ್ ನ್ಯೂಸ್

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.