ಹಿಟ್ ಆ್ಯಂಡ್ ರನ್ ರಾಜಕೀಯ ಬಿಡಿ
Team Udayavani, May 7, 2022, 8:29 PM IST
ಬಾಗಲಕೋಟೆ: ರಾಜ್ಯದ ಕಾಂಗ್ರೆಸ್ ನಾಯಕರುಹಿಟ್ ಆ್ಯಂಡ್ ರನ್ ರಾಜಕೀಯ ಬಿಡಬೇಕು.ದೇಶಕ್ಕೆ ಸ್ವಾತಂತ್ರÂ ಸಿಕ್ಕು 75 ವರ್ಷಗಳಲ್ಲಿ 60 ವರ್ಷಕಾಂಗ್ರೆಸ್ಸಿಗರೇ ಅಧಿಕಾರದಲ್ಲಿದ್ದರು. ಈ ದೇಶದಲ್ಲಿ ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಅವರು. ಈಗಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದುಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಆಧಾರವಿಲ್ಲದೇ ಆರೋಪ ಮಾಡುವುದು,
ಸುಳ್ಳುಆರೋಪದ ಮೂಲಕ ಕೀಳು ಮಟ್ಟದ ರಾಜಕೀಯಮಾಡುತ್ತಿದ್ದಾರೆ. ಹಲವಾರು ಕಾಂಗ್ರೆಸ್ ನಾಯಕರು,ಜೈಲಿಗೆ ಹೋಗಿ ಬಂದಿದ್ದಾರೆ. ಇನ್ನೂ ಹಲವರು,ಬೇಲ್ ಮೇಲೆ ಹೊರಗಿದ್ದಾರೆ. ಸಿದ್ದರಾಮಯ್ಯಸರ್ಕಾರದಲ್ಲೂ ಹಲವಾರು ಗೋಲಮಾಲ್ನಡೆದಿದ್ದವು. ಅವರು ಎಂದೂ ನಿಸ್ಪಕ್ಷವಾಗಿ ತನಿಖೆಗೆಆದೇಶಿಸಲಿಲ್ಲ. ಈಗ ಅವರು ಮಾಡುತ್ತಿರುವಆರೋಪ ನೋಡಿದರೆ, ಭೂತದ ಬಾಯಲ್ಲಿಭಗವದ್ಗೀತೆ ಎಂಬಂತಾಗಿದೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ, ಅವರದೇ ಪಕ್ಷದ ರಾಜಕೀಯ ನಾಯಕರೊಬ್ಬರ ಆಪ್ತ ಸಹಾಯಕರಾಗಿದ್ದವ್ಯಕ್ತಿ, ತಮ್ಮ ಪುತ್ರನಿಗಾಗಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯನ್ನು 12 ಲಕ್ಷ ಮೊತ್ತಕ್ಕೆ ಖರೀದಿಸಿದ್ದರು. ಆಗ ಇಡೀ ರಾಜ್ಯದಸುಮಾರು 8 ಲಕ್ಷ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆತೀವ್ರ ಪೆಟ್ಟು ಬಿದ್ದಿತ್ತು. ಈ ಗೋಲಮಾಲ್ಗೆ ಏನಾದರೂ ಕ್ರಮ ಕೈಗೊಂಡರಾ ಎಂದುಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು