ಹಣ್ಣು ಬೆಳೆಗಾರರ ಬದುಕೇ ಹಣ್ಣಾಯಿತು !

ಮಾರಲೂ ಆಗ್ಲಿಲ್ಲ-ಗೊಬ್ಬರವೂ ಆಗ್ಲಿಲ್ಲ ಕೆಟ್ಟು ಬಿದ್ದ ಕಲ್ಲಂಗಡಿ-ಬಾಳೆ-ಕುಂಬಳಕಾಯಿ

Team Udayavani, Apr 15, 2020, 7:24 PM IST

15-April-40

ಬಾಗಲಕೋಟೆ: ಕದಾಂಪುರದ ರೈತ ಶಿವಲಿಂಗಪ್ಪ ಗಂಜಿಹಾಳ ಬೆಳೆಸಿದ ಕಲ್ಲಂಗಡಿ ಹಣ್ಣು ಹಾನಿಯಾಗಿದೆ.

ಬಾಗಲಕೋಟೆ: ಜಿಲ್ಲೆಯ ಹಣ್ಣು ಬೆಳೆಗಾರರ ಬದುಕನ್ನು ಕೊರೊನಾ ಮಹಾಮಾರಿ, ಹಣ್ಣುಗಾಯಿ ಮಾಡಿದೆ. ಹೊಲದಲ್ಲಿ ಬೆಳೆದ ಅಪಾರ ಪ್ರಮಾಣದ ಹಣ್ಣು ಬೆಳೆಗಳನ್ನು ಮಾರಲೂ ಆಗಲಿಲ್ಲ. ಇತ್ತ ತಿಪ್ಪೆಗೆ ಸುರಿದು ಗೊಬ್ಬರವೂ ಮಾಡಲಾಗಿಲ್ಲ. ಹೀಗಾಗಿ ಕೈಯಾರೆ ಬೆಳೆದ ಬೆಳೆ ಕಂಡು, ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.

ಹೌದು, ರಾಜ್ಯದಲ್ಲಿ ತೋಟಗಾರಿಕೆ ಬೆಳೆಗೆ ಜಿಲ್ಲೆ ಹೆಸರುವಾಸಿ. ಇದಕ್ಕೆ ಪ್ರೋತ್ಸಾಹ ನೀಡಲೆಂದೇ ಇಲ್ಲಿ ತೋಟಗಾರಿಕೆ ವಿವಿ ಕೂಡ ಸ್ಥಾಪಿಸಲಾಗಿದೆ. ಇಲ್ಲಿನ ಚಿಕ್ಕು, ದಾಳಿಂಬೆ, ದ್ರಾಕ್ಷಿ ದೇಶ- ವಿದೇಶಕ್ಕೂ ರಫ್ತು ಆಗುತ್ತಿದ್ದವು. ಆದರೆ, ಕೊರೊನಾ ಎಂಬ ವೈರಸ್‌, ಹಣ್ಣು ಬೆಳೆಗಾರರ ಬದುಕು ಬರ್ಬರವಾಗಿಸಿದೆ.

ಕೈಯಾರೆ ಕಿತ್ತಿ ಎಸೆದರು: ಭೂಮಿ ಹದ ಮಾಡಿ, ಬೀಜ-ಗೊಬ್ಬರ ಹಾಕಿ ಕೈಯಾರೆ ಆರೈಕೆ ಮಾಡಿ ಉತ್ತಮ ಫಸಲು ಬೆಳೆದಿದ್ದ ರೈತರು, ಕಣ್ಣೀರು ಹಾಕುತ್ತ ತಮ್ಮ ಕೈಯಾರೆ ಕಿತ್ತಿ ಹೊಲದ ಬದುವಿಗೆ ಎಸೆದಿದ್ದಾರೆ. ಜಿಲ್ಲೆಯ ಬಹುತೇಕ ರೈತರ ಹೊಲದ ಬದುಗಳೀಗ ಹಣ್ಣು, ತರಕಾರಿಗಳಿಂದ ತುಂಬಿಕೊಂಡಿವೆ. ಕೆಲವು ಹಣ್ಣುಗಳನ್ನು ತಿಪ್ಪೆಗೆ ಹಾಕಿದರೂ ಅದು ಗೊಬ್ಬರವಾಗಲ್ಲ. ಹೀಗಾಗಿ ಬದುವಿಗೆ ಎಸೆದು, ಕಂಡವರಿಗೆಲ್ಲ ನೋಡಿ ನಮ್ಮ ಬೆಳಿ ಹೆಂಗ್‌ ಆಗ್ಯಾದ್‌ ಎಂದು ಕಣ್ಣು ತೇವ ಮಾಡಿಕೊಳ್ಳುತ್ತಿದ್ದಾರೆ.

ವಿವಿ-ಇಲಾಖೆಗಳೂ ನೆರವು ನೀಡಲಾಗುತ್ತಿಲ್ಲ: ಜಿಲ್ಲೆಯಲ್ಲಿ ತೋಟಗಾರಿಕೆ ವಿವಿ, ತೋಟಗಾರಿಕೆ ಇಲಾಖೆ, ಹಾಪ್‌ಕಾಮ್ಸ್‌, ಎಪಿಎಂಸಿ ಎಲ್ಲವೂ ಇವೆ. ಆದರೂ, ರೈತರ ನೆರವಿಗೆ ಬಾರದಂತಹ ಅನಿವಾರ್ಯ ಪರಿಸ್ಥಿತಿಯಲ್ಲಿವೆ. ಪ್ರತಿವರ್ಷ ಜಿಲ್ಲೆಯಿಂದ ಪಪ್ಪಾಯಿ, ಚಿಕ್ಕು, ದಾಳಿಂಬೆ, ದ್ರಾಕ್ಷಿ, ಬಾಳೆ ಹೀಗೆ ಹಲವು ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಮುಂಬೈ, ಹೈದ್ರಾಬಾದ್‌, ಮಂಗಳೂರು, ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಇದಕ್ಕಾಗಿಯೇ ಹಲವು ವ್ಯಾಪಾರಸ್ಥರೂ ರೈತರೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡಿರುತ್ತಿತ್ತು. ಆದರೆ, ಈ ಬಾರಿ ವ್ಯಾಪಾರಸ್ಥರೂ ಮನೆಬಿಟ್ಟು ಹೊರ ಬಂದಿಲ್ಲ. ಹೀಗಾಗಿ ರೈತರು, ಕಷ್ಟಪಟ್ಟು ಬೆಳೆದ ಬೆಳೆಗಳಲ್ಲ ಮಣ್ಣು ಪಾಲಾಗಿವೆ. ಕಣ್ಣೀರು ಹಾಕಿದ ವೃದ್ಧ ರೈತ: ಸುಮಾರು 2 ಲಕ್ಷ ಸಾಲ ಮಾಡಿ, ಕಲ್ಲಂಗಡಿ ಬೆಳೆದಿದ್ದ ತಾಲೂಕಿನ ಕದಾಂಪುರದ ರೈತ ಶಿವಲಿಂಗಪ್ಪ ಗಂಜಿಹಾಳ, ಹೊಲದಲ್ಲಿ ಕೆಟ್ಟು ಬಿದ್ದ ಕಲ್ಲಂಗಡಿ ನೋಡಿ ಕಣ್ಣೀರು ಹಾಕಿದ ಪ್ರಸಂಗ ಹೃದಯ ಕಲುಕುವಂತಿತು.

ಇದೊಂದು ಅನಿವಾರ್ಯ ಪರಿಸ್ಥಿತಿ. ಸಾಧ್ಯವಾದಷ್ಟು ರೈತರ ನೆರವಿಗೆ ಬರುವ ಕೆಲಸ ಸರ್ಕಾರ ಮಾಡುತ್ತಿದೆ. ಹಾಪ್‌ಕಾಮ್ಸ್‌ ಮೂಲಕ ರೈತರ ಹಣ್ಣು-ತರಕಾರಿ ಖರೀದಿಸಿ, ಜನರಿಗೆ ತಲುಪಿಸುವ ಕಾರ್ಯ ನಡೆದಿದೆ. ಉಳಿದ ಬೆಳೆಯನ್ನು ಗುತ್ತಿಗೆದಾರರಿಂದ ಖರೀದಿ ಮಾಡಲು ಚಿಂತನೆ ನಡೆದಿದೆ.
ಗೋವಿಂದ ಕಾರಜೋಳ, ಡಿಸಿಎಂ

ಕೃಷಿಯೇ ನಮ್ಮ ಜೀವನ. ಬೆಳೆ ಬೆಳೆದು, ಅದನ್ನು ಮಾರಾಟ ಮಾಡಿ ಬದುಕುವ ನಮಗೆ ಈ ಬಾರಿ ದೊಡ್ಡ ಹಾನಿಯಾಗಿದೆ. 2 ಎಕರೆ 30 ಗುಂಟೆ ಕಲ್ಲಂಗಡಿ ಕೆಟ್ಟು ಹೋಗಿದೆ. ಕಿತ್ತು ಬದಿಗೆ ಹಾಕಿದ್ದೇವೆ. ನಮ್ಮಂತಹ ಬಡ ರೈತರ ನೆರವಿಗೆ ಸರ್ಕಾರ ಬರಬೇಕು. ಇಲ್ಲದಿದ್ದರೆ ರೈತರು ಬದುಕು ಬಹಳ ತೊಂದರೆಗೆ ಸಿಲುಕುತ್ತದೆ.
ಶಿವಲಿಂಗಪ್ಪ ಗಂಜಿಹಾಳ,
ಕದಾಂಪುರದ ರೈತ

ಜಿಲ್ಲೆಯಲ್ಲಿ 56 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆಯ ಕ್ಷೇತ್ರವಿದೆ. ಸಧ್ಯ ಕಟಾವಿಗೆ ಬಂದ ವಿವಿಧ ಬೆಳೆಗಳನ್ನು ಖರೀದಿ ಮಾಡಲು ರೈತರಿಗೆ ಖರೀದಿದಾರರ ಸಂಪರ್ಕ ಸಂಖ್ಯೆ ನೀಡಲಾಗಿದೆ. ಆದರೂ, ಖರೀದಿದಾರರೂ ಮುಂದೆ ಬರುತ್ತಿಲ್ಲ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯ ಕ್ಷೇತ್ರ, ಹಾನಿಯಾದ ವಿವರ ಜಿಲ್ಲಾ ಧಿಕಾರಿಗಳ ಮೂಲಕ ಸರ್ಕಾರಕ್ಕೆ ತಿಳಿಸುತ್ತೇವೆ.
ಪ್ರಭುರಾಜ್‌ ಹಿರೇಮಠ,
ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.