ಇಂದಿನಿಂದ ಬಸವ ಐಸಿರಿ ಬಾನುಲಿ ಕಾರ್ಯಕ್ರಮ
Team Udayavani, Jun 14, 2020, 6:32 AM IST
ಕೂಡಲಸಂಗಮ: ಬಸವಾದಿ ಶರಣರ ತತ್ವ, ಆದರ್ಶ ಸಿದ್ದಾಂತ, ವಚನ ಸಾಹಿತ್ಯ ಸಂದೇಶವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಧಾರವಾಡ ಆಕಾಶವಾಣಿ ಕೇಂದ್ರದಿಂದ ಹಮ್ಮಿಕೊಂಡ ಬಸವ ಐಸಿರಿ ಬಾನುಲಿ ಕಾರ್ಯಕ್ರಮ ಜೂ. 14ರ ಬೆಳಗ್ಗೆ 10ಗಂಟೆಯಿಂದ ಪ್ರಸಾರಗೊಳ್ಳುವುದು.
ಪ್ರತಿ ರವಿವಾರ ಬೆಳಗ್ಗೆ 10 ರಿಂದ 10:30ರ ವರೆಗೆ ಪ್ರಸಾರಗೊಳ್ಳುವ ಬಸವ ಐಸಿರಿ ಬಾನುಲಿ ಕಾರ್ಯಕ್ರಮವು 52 ವಾರಗಳ ಕಾಲ ನಿರಂತರ ನಡೆಯಲಿದೆ. ಧಾರವಾಡ, ವಿಜಯಪುರ, ಕಲಬುರಗಿ, ಹೊಸಪೇಟೆ, ರಾಯಚೂರ, ಚಿತ್ರದುರ್ಗ ಆಕಾಶವಾಣಿ ಹಾಗೂ ಧಾರವಾಡ, ಕಲಬುರ್ಗಿ ವಿವಿಧ ಭಾರತಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರಗೊಳ್ಳಲಿದೆ. ಕೂಡಲಸಂಗಮ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಕೂಡಲಸಂಗಮ, ಬಸವನ ಬಾಗೇವಾಡಿ, ಚಿಕ್ಕಸಂಗಮ, ಎಂ.ಕೆ.ಹುಬ್ಬಳ್ಳಿ, ತಂಗಡಗಿ ಕ್ಷೇತ್ರಗಳ ಪರಿಚಯ ಭಿತ್ತರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು