ಬೈಕ್ ಒತ್ತೆ; ವ್ಯಕ್ತಿ ಪೊಲೀಸರ ಅತಿಥಿ
ಬೈಕ್ ಕಳ್ಳತನ ಮಾಡಿದ ವ್ಯಕ್ತಿ ಬಂಧನ5 ಸಾವಿರ ರೂ.ಗೆ ಒತ್ತೆ ಇಟ್ಟಿದ್ದ ಕದೀಮ
Team Udayavani, Jun 24, 2021, 4:35 PM IST
ಕುಳಗೇರಿ ಕ್ರಾಸ್: ಗ್ರಾಮದಲ್ಲಿ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣ ವಿಚಿತ್ರ ತಿರುವು ಪಡೆದಿದ್ದು, ಕಳ್ಳತನ ಮಾಡಿದ ಬೈಕ್ ಒತ್ತೆ ಇಡುತ್ತಿದ್ದ ಪ್ರಸಂಗ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ಕಳೆದ ವಾರದಲ್ಲಿ ಎರಡು ಬೈಕ್ಗಳನ್ನು ಕಳ್ಳತನ ಮಾಡಲಾಗಿತ್ತು. ಸದ್ಯ ಗ್ರಾಮದ ಹೊಟೇಲ್ ಮಾಲೀಕನಿಗೆ ಸೇರಿದ ಹಿರೋಹೊಂಡಾ ಬೈಕ್ ಗದಗ ಜಿಲ್ಲೆ ಗಡಿ ಭಾಗದ ಕೊಣ್ಣೂರ ಗ್ರಾಮದಲ್ಲಿ ಪತ್ತೆಯಾಗಿದೆ. ಗ್ರಾಮಸ್ಥರಿಗೆ ಸಿಕ್ಕ ಕಳುವಾದ ಬೈಕ್: ಬೈಕ್ ಕಳೆದುಕೊಂಡ ವ್ಯಕ್ತಿಯ ಸ್ನೇಹಿತರು ಬೇರೆ ಕೆಲಸದ ಮೇಲೆ ಕೊಣ್ಣೂರ ಗ್ರಾಮಕ್ಕೆ ತೆರಳಿದ್ದಾಗ ಆಕಸ್ಮಿಕವಾಗಿ ಸ್ನೇಹಿತನ ಬೈಕ್ ಗುರುತಿಸಿದ ಯುವಕರು ಬೈಕ್ ಸವಾರನ್ನು ತಡೆದಿದ್ದಾರೆ. ತಕ್ಷಣ ಬೈಕ್ ಕಳೆದುಕೊಂಡ ಸ್ನೇಹಿತನಿಗೆ ಹಾಗೂ ಗ್ರಾಮದ ಪೊಲೀಸರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ.
ವಿಚಾರಿಸಿದ ಗ್ರಾಮಸ್ಥರು ನಂತರ ಬೈಕ್ ಸಮೇತ ವ್ಯಕ್ತಿಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಿತ್ರ ತಿರುವು ಪಡೆದ ಬೈಕ್ ಕಳ್ಳತನ: ಕಳ್ಳತನ ಮಾಡಿದ್ದ ಬೈಕ್ ಅನ್ನು ಕಳ್ಳನು ಕೊಣ್ಣೂರ ಗ್ರಾಮದ ವ್ಯಕ್ತಿಯೊಬ್ಬನಿಗೆ 5 ಸಾವಿರ ರೂ.ಗೆ ಒತ್ತೆಯಾಗಿ ಇಟ್ಟಿದ್ದಾನೆ ಎಂದು ಬೈಕ್ ಒತ್ತೆ ಪಡೆದಿದ್ದ ವ್ಯಕ್ತಿ ತಿಳಿಸಿದ್ದಾನೆ.
“ನಿನಗೆ ಬೈಕ್ ಕೊಟ್ಟ ವ್ಯಕ್ತಿ ಯಾರು’ ಎಂದು ಗ್ರಾಮಸ್ಥರು ಕೇಳಿದರೆ, “ಗೊತ್ತಿಲ್ಲ. ಈ ಹಿಂದೆ ಹೀಗೆ ಸುಮಾರು ಸಲ ಬೈಕ್ ತಂದು ನನ್ನ ಹತ್ತಿರ ಒತ್ತೆ ಇಟ್ಟು ಬಿಡಿಸಿಕೊಂಡು ಹೋಗುತ್ತಿದ್ದ’ ಎಂದು ಹೇಳುತ್ತಿದ್ದಾನೆ. ಬೈಕ್ ಕಳ್ಳತನ ಮಾಡಿದ ವ್ಯಕ್ತಿಯನ್ನು ಬುಧವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ. ಬೈಕ್ ಒತ್ತೆ ಪಡೆಯುವ ಮುನ್ನ ಬೈಕ್ ಕಳ್ಳನನ್ನು ಅದೇ ಬೈಕ್ ಮೇಲೆ ಕೂಡಿಸಿಕೊಂಡು ಫೋಟೋ ತೆಗೆದಿದ್ದಾನೆ. ಸದ್ಯ ಬೈಕ್ ಒತ್ತೆ ಪಡೆದಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಹೆಚ್ಚಿನ ವಿಚಾರಣೆಗೆ ಬಾದಾಮಿ ಠಾಣೆಗೆ ಕರೆದೊಯ್ಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ