ಬಿಸಿಲು ಬೇಗೆ ಎದುರಿಸಲು ಸನ್ನದ್ಧ ..!


Team Udayavani, Feb 28, 2019, 10:08 AM IST

28-february-14.jpg

ಬೀಳಗಿ: ಬೇಸಿಗೆ ಸಮೀಪಿಸುತ್ತಿದೆ. ಬಿಸಿಲಿನ ತಾಪಮಾನವೂ ಹೆಚ್ಚುತ್ತಿದೆ. ಕುಡಿಯುವ ನೀರು, ದನ-ಕರುಗಳಿಗೆ ಮೇವು ಒದಗಿಸುವುದು ಈ ಸಂದರ್ಭದಲ್ಲಿ ಸವಾಲಿನ ಕೆಲಸವಾಗಿದೆ. ಈ ಎಲ್ಲ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ತಾಲೂಕು ಆಡಳಿತ ಸಜ್ಜಾಗಿದೆ.

ಮೇ, ಜೂನ್‌ ತಿಂಗಳವರೆಗೆ ಜನರ ಬೆವರಿಳಿಸಲಿರುವ ಬಿಸಿಲಿನ ಬೇಗೆಯನ್ನು ಅತ್ಯಂತ ವ್ಯವಸ್ಥಿತವಾಗಿ ಎದುರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಕೆಲ ಸಭೆಗಳನ್ನು ನಡೆಸಿವೆ. ಬೇಸಿಗೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ಕಂದಾಯ, ಆರ್‌ಡಬ್ಲ್ಯೂ ಎಸ್‌ ಹಾಗೂ ತಾಲೂಕು ಪಂಚಾಯತಗಳ ಪಾತ್ರ ಅತ್ಯಂತ ಪ್ರಮುಖವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಈ ಮೂರೂ ಇಲಾಖೆಗಳು ಬೇಸಿಗೆಯ ಸವಾಲು ಎದುರಿಸಲು ಜಂಟಿ ಸಮರಕ್ಕೆ ಸಿದ್ಧವಾಗಿವೆ.

1.37 ಕೋಟಿ ಅನುದಾನ: 2018 ನವೆಂಬರ್‌ 30 ರಂದು ಕೇಂದ್ರದ ಕಾಯ್ದಿರಿಸಿದ ನಿ ಧಿಯಿಂದ 30 ಲಕ್ಷ ರೂ. ಈಗಾಗಲೇ ಬಂದಿದೆ. ಹಿಂದಿನ ಸಿಆರ್‌ಎಫ್‌ ನಿ ಧಿಯ 7.95 ಲಕ್ಷ ರೂ.ಗಳ ಶಿಲ್ಕು ಕಂದಾಯ ಇಲಾಖೆ ಬಳಿಯಿದೆ. ಬರ ಪೀಡಿತ ತಾಲೂಕೆಂದು ಘೋಷಣೆಯಾಗಿರುವ ಬೀಳಗಿ ತಾಲೂಕಿಗೆ ಬೇಸಿಗೆ ನಿರ್ವಹಣೆಗೆಂದು 1 ಕೋಟಿ ಅನುದಾನ ಮಂಜೂರಾಗಿದೆ. ಒಟ್ಟು 1.37 ಕೋಟಿ ರೂ. ಬೇಸಿಗೆ ನಿರ್ವಹಣೆಗಿದೆ.

ಕುಡಿವ ನೀರಿನ ಮೂಲ: ಬೀಳಗಿ ನಗರ ಸೇರಿದಂತೆ ತಾಲೂಕಿನಲ್ಲಿ ಒಟ್ಟು 82 ಶುದ್ಧ ಕುಡಿವ ನೀರಿನ ಘಟಕಗಳಿವೆ. 75 ಚಾಲ್ತಿಯಿದ್ದು, 7 ಸ್ಥಗಿತಗೊಂಡಿವೆ. ಇನ್ನು ತಾಲೂಕಿನಾದ್ಯಂತ ಒಟ್ಟು 268 ಕೈ ಪಂಪ್‌ ಗಳಿವೆ. 169 ಚಾಲ್ತಿಯಿದ್ದು, 71 ಸ್ಥಗಿತಗೊಂಡಿವೆ. 28 ಕೈ ಪಂಪ್‌ ರಿಪೇರಿ ಕಾಣಬೇಕಿದೆ. ಇನ್ನು ಒಟ್ಟು 229 ಕಿರು ನೀರು ಪೂರೈಕೆ ವ್ಯವಸ್ಥೆಯಿದೆ. 189 ಚಾಲ್ತಿಯಲ್ಲಿವೆ. 15 ರಿಪೇರಿಯಲ್ಲಿವೆ. 25 ಸ್ಥಗಿತಗೊಂಡಿವೆ. ಒಟ್ಟು 101 ಕೊಳವೆ ನೀರು ಪೂರೈಕೆಯಿದೆ. ಇದರಲ್ಲಿ 93 ಚಾಲ್ತಿಯಿದ್ದು, 1 ರಿಪೇರಿಯಿದೆ. 7 ಸ್ಥಗಿತಗೊಂಡಿರುವ ಕುರಿತು ಇಲಾಖೆ ಮಾಹಿತಿ ನೀಡಿದೆ.

ಎಲ್ಲಿ ಸಮಸ್ಯೆಯಾಗಬಹುದು ?: ಸದ್ಯ ಕುಡಿವ ನೀರಿನ ಸಮಸ್ಯೆಯಿರದ ತಾಲೂಕಿನ ಹೊನ್ನಿಹಾಳ, ಕೊಪ್ಪ ಎಸ್‌.ಕೆ, ಶಿರಗುಪ್ಪಿ, ಗಿರಿಸಾಗರ, ಜಾನಮಟ್ಟಿ, ಸೊನ್ನ, ಬಿಸನಾಳ, ತೆಗ್ಗಿ, ಕುಂದರಗಿ, ಬಳ್ಳೂರ ಶೆಡ್‌, ಸುನಗ, ಸಿದ್ದಾಪೂರ ಎಲ್‌ಟಿ, ನಾಗರಾಳ ಎಲ್‌ಟಿ, ನಾಗರಾಳ, ಕೊಂತಿಕಲ್ಲ, ಬಾಡಗಿ, ಬೂದಿಹಾಳ ಎಸ್‌ಜಿ, ಗುಳಬಾಳ, ಅನಗವಾಡಿ, ತುಂಬರಮಟ್ಟಿ, ಕಡಪಟ್ಟಿ, ಯಳ್ಳಿಗುತ್ತಿ, ಕೊರ್ತಿ ಶೆಡ್‌, ಬಂಡೆಮ್ಮ ನಗರ, ಗಡದಿನ್ನಿ ತೋಟ ಹಾಗೂ ಢವಳೇಶ್ವರ ತೋಟದ ವಸ್ತಿ, ಗಲಗಲಿ, ಕಂದಗಲ್ಲ, ಕೋಲೂರ ಸೇರಿದಂತೆ 87 ಜನವಸತಿ ಪ್ರದೇಶಗಳ ಪೈಕಿ, 29 ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಅಪಾಯವಿದೆ. 

ಪರಿಹಾರವೇನು: ಕುಡಿವ ನೀರಿನ ಸಮಸ್ಯೆ ಉದ್ಭವಿಸಲಿರುವ ಪ್ರದೇಶಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸುವುದು, ಖಾಸಗಿ ಕೊಳವೆ ಬಾವಿಗಳಿಂದ ಒಪ್ಪಂದದ ಮೇರೆಗೆ ನೀರು ಪಡೆಯುವುದು ಹಾಗೂ ಟ್ಯಾಂಕರ್‌ ಮೂಲಕ ತುರ್ತು ಕುಡಿವ ನೀರು ಪೂರೈಸುವ ಮೂಲಕ ಸಮಸ್ಯೆ ನೀಗಿಸಲು ಇಲಾಖೆ ಸಜ್ಜಾಗಿದೆ. 

ಸುನಗ ಮತ್ತು ಕುಂದರಗಿ ಜಿಪಂ ವ್ಯಾಪ್ತಿಯ ಸುಮಾರು ಹನ್ನೊಂದು ಹಳ್ಳಿಗಳಿಗೆ ಕುಡಿಯಲು ಶುದ್ಧ ನೀರಿಲ್ಲ. ಬಹುಗ್ರಾಮ ಕುಡಿವ ನೀರು ಯೋಜನೆಯ ಹಳ್ಳಿಗೂ ಕಳೆದ ಒಂದು ತಿಂಗಳಿಂದ ನೀರು ಬರುತ್ತಿಲ್ಲ. ಇಲ್ಲಿನ ನದಿ ಬತ್ತಿ ಹೋಗಿದೆ. ಪರಿಣಾಮ, ಕೊಳವೆ ಬಾವಿಯ ಫ್ಲೋರೈಡ್‌ಯುಕ್ತ ನೀರನ್ನು  ಶ್ರಯಿಸುವಂತಾಗಿದೆ. ಇದರಿಂದ ಜನ-ಜಾನುವಾರುಗಳ ಆರೋಗ್ಯ ಮೇಲೆ ಪರಿಣಾಮ ಬೀರಿದೆ. ಕೂಡಲೇ ನದಿಗೆ ನೀರು ಬಿಡಬೇಕು. ಇಲ್ಲವಾದರೆ ಶುದ್ಧ ಕುಡಿವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
.ಮಲ್ಲು ಹೋಳಿ, ಚಿಕ್ಕಾಲಗುಂಡಿ

ತಾಲೂಕಿನಲ್ಲಿ ಒಟ್ಟು 87 ಜನ ವಸತಿ ಪ್ರದೇಶಗಳಿದ್ದು, 1,60,264 ಜನಸಂಖ್ಯೆಯಿದೆ. ಅಲ್ಲದೆ, 1,29,335 ಜಾನುವಾರುಗಳಿವೆ. ಇದುರೆಗೂ ತಾಲೂಕಿನ ಯಾವುದೇ ಜನವಸತಿ
ಪ್ರದೇಶದಲ್ಲಿ ಕುಡಿವ ನೀರು, ಮೇವಿನ ಸಮಸ್ಯೆ ಕುರಿತು ವರದಿಯಾಗಿಲ್ಲ. ಇದೀಗ ಬೇಸಿಗೆಯ ಆರಂಭ. ಸುಮಾರು ನಾಲ್ಕು ತಿಂಗಳು ಆವರಿಸಲಿರುವ ಬೇಸಿಗೆಯಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಮೇವು ಇತ್ಯಾದಿ
ಸಮಸ್ಯೆಗಳು ಎದುರಾಗಬಹುದು. ಸಮಸ್ಯೆ ನಿರ್ವಹಣೆಗೆ ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ. 18 ವಾರಕ್ಕಾಗುವಷ್ಟು 30647.82 ಎಂ.ಟಿ. ಮೇವು ಸದ್ಯ ಲಭ್ಯವಿದೆ. ಅಲ್ಲದೆ ತಾಲೂಕಿನ ಅನಗವಾಡಿ ಬಳಿ ಬಿಳಿಜೋಳ ದಂಟಿನ ಮೇವು ಸಂಗ್ರಹಕ್ಕೂ ಕ್ರಮ ಕೈಗೊಳ್ಳಲಾಗಿದೆ. 
. ಉದಯ ಕುಂಬಾರ
ತಹಶೀಲ್ದಾರ್‌, ಬೀಳಗಿ

„ರವೀಂದ್ರ ಕಣವಿ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.