ಬಾಲಕ ನೀರು ಪಾಲು: ಮುಂದುವರಿದ ಶೋಧ ಕಾರ್ಯ
Team Udayavani, Oct 14, 2019, 11:23 AM IST
ಕಲಾದಗಿ: ಸ್ನಾನ ಮಾಡಲು ತೆರಳಿದ ಬಾಲಕ ಕಾಲುವೆಯಲ್ಲಿ ನೀರುಪಾಲಾದ ಘಟನಾ ಸ್ಥಳಕ್ಕೆ ಬಾಗಲಕೋಟೆ ತಹಶೀಲ್ದಾರ್ ಎಂ.ಬಿ. ನಾಗಠಾಣ ಭೇಟಿ ನೀಡಿ ಅಗ್ನಿ ಶಾಮಕ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಘಟಪ್ರಭಾ ನದಿಯಿಂದ ಕಳಸಕೊಪ್ಪ ಕೆರೆಗೆ ನೀರು ತುಂಬಿಸುವ ಜಾಕ್ವೆಲ್ ಪಂಪ್ಹೌಸ್ ಬಳಿಯ ಕಾಲುವೆಯಲ್ಲಿ ಬಾಲಕ ಶನಿವಾರ ಮಧ್ಯಾಹ್ನ ನೀರು ಪಾಲಾಗಿದ್ದ. ಬಾಲಕನಿಗಾಗಿ ಕಾಲುವೆ ನೀರಿನಲ್ಲಿ ಅಗ್ನಿ ಶಾಮಕ ಸಿಬ್ಬಂದಿ, ಮೀನುಗಾರರು ತೆಪ್ಪದ ಸಹಾಯದೊಂದಿಗೆ ಪಾತಾಳ ಗರಡಿ ನೀರಲ್ಲಿ ಬಿಟ್ಟು ಕಳೆದೆರಡು ದಿನದಿಂದ ಶೋಧ ನಡೆಯುತ್ತಿದ್ದು, ರವಿವಾರವೂ ನಡೆದ ಕಾರ್ಯಾಚರಣೆಯಲ್ಲಿ ಬಾಲಕ ಪತ್ತೆಯಾಗಿಲ್ಲ.
ಕಲಾದಗಿಯ ಮೀನುಗಾರರು ಎರಡು ದಿನದಿಂದ ಬಾಲಕನಿಗಾಗಿ 40 ಅಡಿ ಆಳದ ಕಾಲುವೆಯಲ್ಲಿ ದಣಿವರಿಯದೇ ಶೋಧ ಕಾರ್ಯ ನಡೆಸಿದ್ದು, ಮಂಜೂರ ಅಹಮ್ಮದ್ ಮುಜಾವರ್, ಯಾಶಿನ್ ಸೊಲ್ಜರ್, ಹಸನಸಾಬ ಬರಮೈ, ಹಸನಸಾಬ ಮುಜಾವರ್ ನಿರಂತರ ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ಶೋಧ ಕಾರ್ಯ ನಡೆಸಿದರು.
ಕಾಲುವೆ ನೀರಿನಲ್ಲಿ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದರೆ, ಇತ್ತ ಬಾಲಕನ ತಂದೆ ಯಾಶೀನ್ ಮಕಾನದಾರ ಕಾಲುವೆ ಬಳಿ ಬಂಡೆ ಮೇಲೆ ಕುಳಿತು ಮಗನಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಬಾಗಲಕೋಟೆ ಗ್ರೇಡ್-2 ತಹಶೀಲ್ದಾರ್ ಎಂ.ಆರ್. ಭಜಂತ್ರಿ, ಉಪತಹಶೀಲ್ದಾರ್ ಪಿ.ಬಿ. ಸಿಂಗ್ರಿ, ಗ್ರಾಮ ಲೆಕ್ಕಾಧಿಕಾರಿ ಎ.ವಿ. ಸೂರ್ಯವಂಶಿ, ಪೊಲೀಸ್ ಎಎಸೈ ವೈ. ಎಂ. ನಡುವಿನಮನಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್