ಪತ್ತೆಯಾಗದ ಚಿರತೆ: ಜನರಲ್ಲಿ ಹೆಚ್ಚಿದ ಆತಂಕ
Team Udayavani, Jun 1, 2021, 7:32 PM IST
ಜಮಖಂಡಿ: ಕಳೆದ 4 ದಿನಗಳಿಂದ ಕುಂಬಾರಹಳ್ಳ ಗ್ರಾಮದ ಕಬ್ಬಿನ ಗದ್ದೆಗಳಲ್ಲಿ ಬೀಡುಬಿಟ್ಟಿರುವ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿರುವ ಎರಡು ಬೋನಿಗೆ ಚಿರತೆ ಬೀಳುತ್ತಿಲ್ಲ.
ರವಿವಾರ ರಾತ್ರಿ ಗ್ರಾಮದ ಹೆಗಡೆಯವರ ತೋಟದ ಪಕ್ಕದ ಶಿಂಧೆಯವರ ತೋಟದ ಮನೆ ನಾಯಿ ಕೂಡಾ ಕಾಣುತ್ತಿಲ್ಲ. ಈ ನಾಯಿಯನ್ನು ಚಿರತೆ ತಿಂದಿರಬಹುದು ಜನರಲ್ಲಿ ಶಂಕೆ ಹೆಚ್ಚಾಗುತ್ತಿದೆ. ರವಿವಾರ ರಾತ್ರಿ ವೇಳೆಯಲ್ಲಿ ಚಿರತೆ ಸಂಚರಿಸುವ ಎಲ್ಲ ಕುರುಹುಗಳು, ಹೆಜ್ಜೆಗಳು ಪತ್ತೆಯಾಗಿವೆ. ಆದರೆ, ಅರಣ್ಯ ಇಲಾಖೆ ಇಟ್ಟಿರುವ ಸಿಸಿ ಕ್ಯಾಮೆರಾದಲ್ಲಿ ಮಾತ್ರ ಚಿರತೆ ಕಾಣಿಸಿಕೊಂಡಿಲ್ಲ.
ಕಬ್ಬಿನ ಗದ್ದೆ, ಪಕ್ಕದ ರಸ್ತೆಗಳಲ್ಲಿ ಚಿರತೆ ಸಂಚರಿಸಿದ ಹೆಜ್ಜೆಗಳು ಕಂಡು ಬಂದಿವೆ. ಚಾಣಾಕ್ಷ ಚಿರತೆಯ ಆಟಕ್ಕೆ ಗ್ರಾಮದ ಜನರಲ್ಲಿ ಭಯದ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿರತೆಯನ್ನು ಬಂಧಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಗ್ರಾಮಸ್ಥರ ಒತ್ತಡ ಹೆಚ್ಚಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್