ಈ ಬಾರಿ ಬಣ್ಣದಾಟಕ್ಕೆ ಚೀನಾ ಸಾಮಗ್ರಿ ನಿಷೇಧ


Team Udayavani, Mar 4, 2020, 12:14 PM IST

bk-tdy-2

ಸಾಂದರ್ಭಿಕ ಚಿತ್ರ

ಬಾಗಲಕೋಟೆ: ದೇಶದ ಕೋಲ್ಕತ್ತ ಬಿಟ್ಟರೆ ಅತಿ ವಿಶಿಷ್ಟ ಹಾಗೂ ವಿಜೃಂಭಣೆಯಿಂದ ನಡೆಯುವ ಬಾಗಲಕೋಟೆ ಹೋಳಿ ಹಬ್ಬಕ್ಕೂ ಕೊರೊನಾ ಭೀತಿ ಎದುರಾಗಿದ್ದು, ಈ ವರ್ಷ ನಡೆಯಲಿರುವ ನಾಲ್ಕು ದಿನಗಳ ಹೋಳಿ ಹಬ್ಬಕ್ಕೆ ಚೀನಾ ದೇಶದ ಉತ್ಪಾದಿತ ವಸ್ತುಗಳ ಬಳಕೆಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.

ಹೋಳಿ ಹಬ್ಬವನ್ನು ವಿಶಿಷ್ಟ ಹಾಗೂ ಸಂಭ್ರಮದಿಂದ ಆಚರಣೆಗೆಂದೇ ನಗರದಲ್ಲಿ ಹೋಳಿ ಹಬ್ಬದ ಬಾಬುದಾರರೂ ಒಳಗೊಂಡ ಸಮಿತಿ ಇದೆ. ಈ ಸಮಿತಿ, ಪ್ರತಿವರ್ಷವೂ ಹೋಳಿ ಹಬ್ಬ ಆಚರಣೆಗೆ ಮುಂದಾಳತ್ವ ವಹಿಸುತ್ತಿದ್ದು, ಇಡೀ ನಗರದ ಮಹಿಳೆಯರು, ಮಕ್ಕಳು, ಹಿರಿಯರು ಹೋಳಿ ಆಚರಣೆಯಲ್ಲಿ ತೊಡಗುತ್ತಾರೆ. ಯಾವ ಯಾವ ದಿನ ಹೋಳಿ ಆಚರಣೆ: ಮಾ. 9ರಂದು ಬೆಳಗ್ಗೆ 5ಕ್ಕೆ ಕಿಲ್ಲಾದಲ್ಲಿ ಕಾಮ ದಹನದೊಂದಿಗೆ ಹೋಳಿ ಆಚರಣೆಗೆ ಅಧಿಕೃತ ಚಾಲನೆ ದೊರೆಯಲಿದೆ. ಮಾ. 10, 11 ಹಾಗೂ 12ರಂದು ರಂಗು ರಂಗಿನ ಬಣ್ಣದಾಟ ಆರಂಭಗೊಳ್ಳಲಿದೆ.

ಕಿಲ್ಲಾ, ಹಳಪೇಟೆ, ಹೊಸಪೇಟೆ, ಜೈನಪೇಟೆ, ವೆಂಕಟಪೇಟೆ ಓಣಿಯ ಸೋಗಿನ ಪ್ರದರ್ಶನ ನಡೆಯಲಿವೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾಗಲಕೋಟೆ ನಗರ ಮೂರು ಭಾಗಗಳಾಗಿದ್ದು, ವಿದ್ಯಾಗಿರಿ ಹಾಗೂ ನವನಗರದ ಜನರು ಬಣ್ಣದಾಟದಿಂದ ವಂಚಿತರಾಗಿದ್ದಾರೆ. ಹೀಗಾಗಿ ವಿದ್ಯಾಗಿರಿ, ನವನಗರದ ಜನರು ಕೂಡಿಕೊಂಡು 4ನೇ ದಿನ ಮಾ.13ರಂದು ಬಣ್ಣದಾಟವಾಡಲು ನಿರ್ಧರಿಸಿದ್ದು, ಇದಕ್ಕೆ ಸಮಿತಿ ಕೂಡ ವಿಶೇಷ ಕಾಳಜಿ ವಹಿಸಿದೆ. ಈ ಕುರಿತು ಪೊಲೀಸ್‌ ಇಲಾಖೆಗೆ ಅಧಿಕೃತ ಮನವಿ ಮಾಡಿದ್ದು, ಇಲಾಖೆ ಪರಿಶೀಲನೆ ಮಾಡುತ್ತಿದೆ ಎನ್ನಲಾಗಿದೆ.

ಮಾ. 11ರಂದು ಹೋಳಿ ಆಚರಣೆ ಸಮಿತಿ ಹಾಗೂ ಬಾಗಲಕೋಟೆ ಹಬ್ಬ ತಂಡದಿಂದ ಬಸವೇಶ್ವರ ವೃತ್ತದಲ್ಲಿ ರೇನ್‌ ಡ್ಯಾನ್ಸ್‌ ನಡೆಯಲಿದೆ. ನಗರದ ಜನರು ಊರು ಬಿಟ್ಟು ಬೇರೆಡೆ ಪ್ರವಾಸಕ್ಕೆ ಹೋಗದೇ, ಐತಿಹಾಸಿಕ ಹೋಳಿ ಆಚರಣೆಯಲ್ಲಿ ಪಾಲ್ಗೊಳ್ಳಲು ಸಮಿತಿ ಮನವಿ ಮಾಡಿದೆ.

ಎಲ್ಲೆಡೆ ಹಲಗೆ ಮಜಲು: ಹೋಳಿ ಆಚರಣೆ ನಿಮಿತ್ತ ನಗರದೆಲ್ಲೆಡೆ ಹಲವು ಸಂಘ-ಸಂಸ್ಥೆಗಳು ಹಲಗೆ ಮಜಲು ಸ್ಪರ್ಧೆ ನಡೆಸುವ ಮೂಲಕ ಪಾರಂಪರಿಕ ಹಲಗೆ ವಾದನ ಕಲೆ ಪೋಷಿಸಿಕೊಂಡು ಬರುತ್ತಿದೆ. 13 ಜನರ ತಂಡಗಳ ಹಲಗೆ ಮಜಲು ಸ್ಪರ್ಧೆಯಲ್ಲಿ ತಾಳಬದ್ಧವಾಗಿ ಹಲಗೆ ನುಡಿಸುವ ತಂಡಗಳಿಗೆ ನಗದು ಬಹುಮಾನ ನೀಡಲಾಗುತ್ತಿದೆ.

ಮಾ. 4ರಂದು ಹೊಳೆ ಆಂಜನೆಯ ದೇವಸ್ಥಾನದ ಎದುರು ಮಾಧವ ಸೇವಾ ಕೇಂದ್ರದಿಂದ ಹಲಗೆ ಮಜಲು ಸ್ಪರ್ಧೆ ಹಮ್ಮಿಕೊಂಡಿದ್ದು, ಪ್ರಥಮ ಸ್ಥಾನ ಪಡೆದ ತಂಡಕ್ಕೆ 11,001, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 8,001 ರೂ. ಹಾಗೂ ತೃತೀಯ ತಂಡಕ್ಕೆ 5,001 ರೂ. ನಗದು ಬಹುಮಾನವಿದ್ದು, 5 ತಂಡಗಳಿಗೆ ಸಮಾಧಾನಕರ ಬಹುಮಾನ ಕೂಡ ನೀಡಲಾಗುತ್ತಿದೆ ಎಂದು ಮಾಧವ ಸೇವಾ ಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ ತಿಳಿಸಿದ್ದಾರೆ.

ಚೀನಾ ಸಾಮಗ್ರಿ ನಿಷೇಧ: ಹೋಳಿಯ ಬಣ್ಣದಾಟಕ್ಕೆ ಬಹುತೇಕ ಸಾಮಗ್ರಿಗಳು ಚೀನಾ ದೇಶದ ಉತ್ಪಾದಿತ ವಸ್ತುಗಳಾಗಿವೆ. ಚೀನಾದಲ್ಲಿ ಕೊರೊನಾ ರೋಗ ಹರಡಿದ ಹಿನ್ನೆಲೆಯಲ್ಲಿ ಈ ಬಾರಿ, ಚೀನಾದಿಂದ ಬಣ್ಣ, ಬಣ್ಣ ಹೊಡೆಯಲು ವಿವಿಧ ಸಾಮಗ್ರಿಗಳನ್ನು ನಗರದ ಯಾವುದೇ ವ್ಯಾಪಾರಸ್ಥರು ತರಿಸಬಾರದು. ಜನರೂ ಅಂತಹ ವಸ್ತುಗಳ ಬಳಕೆ ಮಾಡಬಾರದು ಎಂದು ಸಮಿತಿ ಮನವಿ ಮಾಡಿದೆ. ಜನರು, ಚೀನಾ ಉತ್ಪಾದಿತ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸದೇ, ದೇಶೀಯ ವಸ್ತುಗಳನ್ನು ಖರೀದಿಸಿ, ಬಣ್ಣದಾಟದಲ್ಲಿ ತೊಡಗಬೇಕು ಎಂಬುದು ಪ್ರಜ್ಞಾವಂತರ ಒತ್ತಾಸೆ ಕೂಡ.

ಈ ಬಾರಿಯ ಹೋಳಿಯ ಬಣ್ಣದಾಟಕ್ಕೆ ಚೀನಾ ದೇಶದ ಉತ್ಪಾದಿತ ಬಣ್ಣ ಸಹಿತ ಯಾವುದೇ ಸಾಮಗ್ರಿ ಮಾರಾಟ-ಬಳಕೆ ಮಾಡದಂತೆ ಮನವಿ ಮಾಡಿದ್ದೇವೆ. ಕೊರೊನಾ ರೋಗ ಹಬ್ಬಿದ್ದರಿಂದ ಅಲ್ಲಿಂದ ಬರುವ ವಸ್ತುಗಳ ಬಳಕೆ ಮಾಡಬಾರದು. ಅಲ್ಲದೇ ನಗರದ ಜನರು ಪರ ಊರಿಗೆ ಹೋಗದೇ ಇಲ್ಲಿನ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಹಬ್ಬದಲ್ಲಿ ಪಾಲ್ಗೊಳ್ಳಬೇಕು.  –ಮಹಾಬಲೇಶ್ವರ ಗುಡಗುಂಟಿ, ಪ್ರಧಾನ ಕಾರ್ಯದರ್ಶಿ, ಹೋಳಿ ಆಚರಣೆ ಸಮಿತಿ

ಹಳೆಯ ಬಾಗಲಕೋಟೆಯಿಂದ ಜನರು ಸ್ಥಳಾಂತರಗೊಂಡು ವಿದ್ಯಾಗಿರಿ, ನವನಗರದಲ್ಲಿ ವಾಸವಾಗಿದ್ದು, ಅವರೂ ಬಣ್ಣದಾಟವಾಡಲು ಅವಕಾಶ ಕೇಳಿದ್ದಾರೆ. ಇನ್ನೂ ಪರಿಶೀಲನೆಯಲ್ಲಿದೆ.– ಲೋಕೇಶ ಜಗಲಾಸರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

 

-ಎಸ್‌.ಕೆ. ಬಿರಾದಾರ

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.