ಟಿಪ್ಪು ಜಯಂತಿ ರದ್ದತಿಗೆ ಖಂಡನೆ
•ರಾಜ್ಯ ಸರ್ಕಾರ ಧೋರಣೆಗೆ ಪ್ರಗತಿಪರರ ಆಕ್ರೋಶ•ಹೋರಾಟಕ್ಕೆ ವಿವಿಧ ಸಂಘಟನೆಗಳ ಸಾಥ್
Team Udayavani, Aug 3, 2019, 3:16 PM IST
ಬಾಗಲಕೋಟೆ: ಟಿಪ್ಪು ಜಯಂತಿ ರದ್ದುಗೊಳಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿದರು.
ಬಾಗಲಕೋಟೆ: ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದುಪಡಿಸಿದ್ದನ್ನು ವಿರೋಧಿಸಿ ನಗರದ ವಿವಿಧ ಪ್ರಗತಿಪರ ಸಂಘಟನೆಗಳು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದವು.
ನವನಗರದ ಡಾ| ಬಿ.ಆರ್. ಅಂಬೇಡ್ಕರ್ ಭವನದಿಂದ ಪ್ರಗತಿಪರ ಸಂಘಟನೆಗಳ ಹಲವು ಪ್ರಮುಖರು ಡಿಸಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ರಮೇಶ ಆರ್. ಬದ್ನೂರ ಮಾತನಾಡಿ, ದೇಶದಲ್ಲಿ ನೂರಾರು ಧರ್ಮಗಳು ಹಾಗೂ ಲಕ್ಷಾಂತರ ಜಾತಿಗಳು ಇವೆ. ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ನಾಗರಿಕ ಹಿತಾಸಕ್ತಿ ಕಾಪಾಡಲು ಜಗತ್ತಿನಲ್ಲಿ ಅತ್ಯಂತ ದೊಡ್ಡ ಲಿಖೀತ ಸಂವಿಧಾನ ಹೊಂದಿದ್ದೇವೆ. ಆದ್ದರಿಂದ, ನಾಗರಿಕ ಹಿತಾಸಕ್ತಿ ಉಳಿಸಿಕೊಂಡು ಹೋಗಬೇಕು. ಆದರೆ, ರಾಜ್ಯ ಸರ್ಕಾರ ಅದನ್ನು ತುಳಿಯುವ ಕೆಲಸ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಆದರ ಈಗ ಅದನ್ನು ಬದಿಗಿಟ್ಟು ಧರ್ಮ, ಜಾತಿಗಳ ಮೇಲೆ ತಾರತಮ್ಯ ಮಾಡುತ್ತಿದೆ. ಕರ್ನಾಟಕವನ್ನು ಲೂಟಿ ಮಾಡಿ ಸಾಮ್ರಾಜ್ಯವನ್ನು ಕಟ್ಟಿಕೊಂಡ ಮರಾಠರು, ಮೊಗಲರು, ಪೇಶ್ವೆಗಳ ಇತಿಹಾಸವನ್ನು ಆರಾಧಿಸುವ ಬಿಜೆಪಿಗರಿಗೆ ಟಿಪ್ಪು ದ್ರೋಹಿಯಂತೆ ಕಾಣುತ್ತಾನೆ. ಟಿಪ್ಪು, ಮತಾಂಧ ಎಂದು ಕರೆಯುತ್ತಿರುವುದಕ್ಕೆ ಅರ್ಥವೇ ಇಲ್ಲ ಎಂದರು.
ಉತ್ತರ ಭಾರತದ ಅನೇಕ ರಾಜರು ಮಾಡಿದ್ದ ಲೂಟಿ, ಮತಾಂತರ, ಹತ್ಯೆ ಯಾವುದು ನಿಮ್ಮ ಕಣ್ಣಿಗೆ ಕಾನಿಸುತ್ತಿಲ್ಲ. ನಿಮ್ಮಗಳ ರಾಷ್ಟ್ರೀಯತೆಯ ಆಕ್ರಮಣಕ್ಕೆ ಕರ್ನಾಟಕ ಇತಿಹಾಸ ಮತ್ತು ಇತಿಹಾಸ ಪುರುಷರನ್ನು ಬಲಿ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಇರದಿದ್ದರೆ ಮೈಸೂರು ರಾಜ್ಯ ಯಾವತ್ತೋ ಮರಾಠರ ರಾಜ್ಯವಾಗುತ್ತಿತ್ತು. ತನ್ನ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದ ವೈರಿಗಳಿಗೆ ನೆಲೆ ನೀಡಿದವರನ್ನು ಸಂಹರಿಸಿ ತನ್ನ ರಾಜ್ಯ ರಕ್ಷಣೆ ಮಾಡಿಕೊಂಡಿದ್ದಾನೆ ಹೊರತು, ಕೊಡಗಿನ ಜನರನ್ನು ಹಿಂದುಗಳು ಎನ್ನುವ ದ್ವೇಷದಿಂದಾಗಲಿ ಉದ್ದೇಶಪೂರ್ವಕವಾಗಿ ಸಂವರಿಸುವ ಕೆಲಸ ಟಿಪ್ಪು ಮಾಡಿಲ್ಲ. ಇದಕ್ಕೆ ಸಾಕಷ್ಟು ದಾಖಲೆಗಳಿವೆ ಎಂದರು.
ವಕೀಲ ಎನ್.ಬಿ. ಗಸ್ತಿ, ಪರಶುರಾಮ ಮಹಾರಾಜನವರ, ನೂರಅಹಮದ್ ಪಟ್ಟೆವಾಲ, ಸಲೀಂ ಮೊಮಿನ, ಬಸವರಾಜ ನೀಲನಾಯಕ, ನಾಗರಾಜ ಹೊಂಗಲ್, ಬಸವರಾಜ ದರ್ಮಂತಿ, ಆತ್ಮಾರಾಮ ನೀಲನಾಯಕ, ಮಲ್ಲು ಕಟ್ಟಿಮನಿ, ಬಸವರಾಜ ಅಂಬಿಗೇರ, ರಾಜು ಮನ್ನಿಕೇರಿ, ನಬೀಸಾಬ ಟಂಕಸಾಲೆ, ಗೌಫ್ ಚೌಹಾರಿ, ಸಿಖಂದರ ಅಥಣಿ, ಜಾಫರ್ ಬೇಪಾರಿ, ವಿರುಪಾಕ್ಷ ನೀಲನಾಯಕ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಬೆಂಬಲ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ