ಅಮೀನಗಡ ಕರದಂಟು ಉದ್ಯಮಕ್ಕೆ ಕಂಟಕ

ಕರದಂಟು ತಯಾರಿಕೆ-ಪೂರೈಕೆ ಸ್ಥಗಿತ

Team Udayavani, May 7, 2020, 2:47 PM IST

ಅಮೀನಗಡ ಕರದಂಟು ಉದ್ಯಮಕ್ಕೆ ಕಂಟಕ

ಅಮೀನಗಡ:ಉತ್ತರ ಕರ್ನಾಟಕದ ಮನೆ ಮಾತಾಗಿರುವ ಅಮೀನಗಡ ಕರದಂಟು ಉದ್ಯಮಕ್ಕೆ ಕೋವಿಡ್ 19 ಕರಿಛಾಯೆ ಆವರಿಸಿದೆ. ಪಟ್ಟಣದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರಾಟವಾಗುತ್ತಿದ್ದ ಅಮೀನಗಡ ಪ್ರಸಿದ್ಧ ಕರದಂಟು ವ್ಯಾಪಾರ ಲಾಕ್‌ಡೌನ್‌ದಿಂದ ಸ್ಥಗಿತಗೊಂಡಿದೆ. ಲಾಕ್‌ಡೌನ್‌ ಮುನ್ನ ಸಿದ್ಧಪಡಿಸಿದ್ದ ಲಕ್ಷಾಂತರ ರೂ. ಮೌಲ್ಯದ ಕರದಂಟು ಸಿಹಿ ತಿಂಡಿಯನ್ನು ಕೆಲ ಉದ್ಯಮಿಗಳು ಉಚಿತವಾಗಿ ಹಂಚಿದ್ದಾರೆ. ಇನ್ನು ಕೆಲವರು ಸಮಸ್ಯೆ ಆಗುವುದಿಲ್ಲ ಎಂದು ಅದನ್ನು ಸಂಗ್ರಹಿಸಿಟ್ಟಿದ್ದಾರೆ. ಸುಮಾರು 42 ದಿನಗಳಿಂದ ಕೋಟ್ಯಂತರ ರೂ. ವ್ಯವಹಾರ ಸ್ಥಗಿತಗೊಂಡಿದೆ.

ಕರದಂಟು ತಯಾರಿಕೆಯಿಲ್ಲ: ಉತ್ತರ ಕರ್ನಾಟಕ ಪ್ರಸಿದ್ಧ ಸಿಹಿ ತಿಂಡಿ ಅಮೀನಗಡ ಕರದಂಟು ತಯಾರಿಕೆಯಲ್ಲಿ ನೈಸರ್ಗಿಕ ಅಂಟು, ಚುಕ್ಕಿ ಬೆಲ್ಲ, ಶುದ್ದ ತುಪ್ಪ ಹಾಗೂ ಹತ್ತಾರು ಬಗೆಯ ಡ್ರೈ ಫುಟ್‌ಗಳ ಮಿಶ್ರಣದಲ್ಲಿ ತಯಾರಾಗುತ್ತದೆ. ಇದರಲ್ಲಿ ಪ್ರೀಮಿಯಮ್‌, ಕ್ಲಾಸಿಕ್‌, ಆರ್ಗೆನಿಕ್‌ ಸುಪ್ರೀಂ ಎಂದು ಮೂರು ತರಹದ ಕರದಂಟು ತಯಾರಿಸಲಾಗುತ್ತದೆ. ಗುಣಮಟ್ಟದ ಕರದಂಟು ಮೂರು ತಿಂಗಳು ಬಳಕೆ ಮಾಡಲಾಗುತ್ತದೆ. ಆರ್ಗೆನಿಕ್‌ ಸುಪ್ರಿಂ ಕರದಂಟು ನಾಲ್ಕರಿಂದ ಆರು ತಿಂಗಳವರೆಗೆ ಬಳಕೆ ಮಾಡಬಹುದಾಗಿದೆ. ಈ ಕರದಂಟು ಶತಮಾನ ಇತಿಹಾಸ ಹೊಂದಿದೆ. 1907ರಲ್ಲಿ ಅಮೀನಗಡದ ಐಹೊಳ್ಳಿ ಮನೆತನದ ದಿವಂಗತ ಸಾವಳಿಗೆಪ್ಪ ಐಹೊಳ್ಳಿಯವರು ಈ ಕರದಂಟು ಸಿಹಿಯ ಮೂಲ ತಯಾರಕರು. ನೂರಾರು ವರ್ಷಗಳಿಂದ ಕರದಂಟು ಸಿಹಿಯನ್ನು ವಿಜಯಾ ಕರದಂಟು ಮಾಲೀಕತ್ವದಲ್ಲಿ ತಯಾರಿ ಮಾಡುತ್ತಾರೆ ಮತ್ತು ಪಟ್ಟಣದ ಇನ್ನಿತರ ಕರದಂಟು ಅಂಗಡಿಕಾರರು ಕೂಡಾ ಕರದಂಟು ಸಿದ್ಧಪಡಿಸುತ್ತಾರೆ. ಆದರೆ, ಲಾಕ್‌ಡೌನ್‌ನಿಂದ ಕರದಂಟು ತಯಾರಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಕರದಂಟು ಅಂಗಡಿಗಳು ಬಂದ್‌: ಮೂಲ ಕರದಂಟು ತಯಾರಕರಾದ ವಿಜಯಾ ಕರದಂಟು ತಯಾರಕರ ಅಮೀನಗಡ ಪಟ್ಟಣದಲ್ಲಿರುವ 5 ಮಳಿಗೆಗಳು, ರಾಜಧಾನಿ ಬೆಂಗಳೂರನಲ್ಲಿರುವ ಎರಡು ಮಳಿಗೆಗಳು ಮತ್ತು ಪಟ್ಟಣದ ಇತರ 7-8 ಕರದಂಟು ಅಂಗಡಿಕಾರರ ಮಳಿಗೆ ಸೇರಿದಂತೆ ಸುಮಾರು 14 ಕರದಂಟು ಅಂಗಡಿಗಳಲ್ಲಿ ಕರದಂಟು ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಎಲ್ಲ ಕರದಂಟು ಅಂಗಡಿಗಳು ಬಂದ್‌ ಆಗಿವೆ. ಇದರಿಂದ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಗೆ ಪೂರೈಕೆಯಾಗುತ್ತಿದ್ದ ಕರದಂಟು ಪೂರೈಕೆ ಸ್ಥಗಿತಗೊಂಡಿದೆ.

ಕೋಟ್ಯಂತರ ರೂ. ವ್ಯವಹಾರ ಸ್ಥಗಿತ: ಪಟ್ಟಣ ದಲ್ಲಿ 12ಕ್ಕೂ ಹೆಚ್ಚು ಕರದಂಟು ಮಳಿಗೆಗಳಿದ್ದು, ಪ್ರತಿದಿನ ಸುಮಾರು 300-400 ಕೆಜಿ ಕರದಂಟು ಪಟ್ಟಣದಲ್ಲಿ ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತದೆ. ಪ್ರತಿದಿನ ಸುಮಾರು 2 ರಿಂದ 3 ಲಕ್ಷ ರೂ. ವಹಿವಾಟು ಆಗುತ್ತಿತ್ತು. ಮದುವೆ ಕಾರ್ಯಕ್ರಮಗಳು ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುವುದರಿಂದ ವ್ಯಾಪಾರ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ, 43 ದಿನಗಳ ಕಾಲ ಕರದಂಟು ತಯಾರಿಕೆ ಸ್ಥಗಿತ ಗೊಂಡಿದ್ದರಿಂದ ಕೋಟ್ಯಂತರ ರೂ. ವ್ಯವಹಾರ ಸ್ಥಗಿತಗೊಂಡಿದೆ. ಇದು ಪ್ರಸಿದ್ಧ ಕರದಂಟು ಉದ್ಯಮಕ್ಕೂ ಪೆಟ್ಟು ಬಿದ್ದಿದೆ.

ವಿಜಯಾ ಕರದಂಟು ಅಮೀನಗಡದಲ್ಲಿರುವ ಐದು ಮಳಿಗೆಗಳು ಹಾಗೂ ಬೆಂಗಳೂರಿನಲ್ಲಿರುವ ಎರಡು ಮಳಿಗೆ ಮತ್ತು ಸುಮಾರು ಹತ್ತು ಜಿಲ್ಲೆಗಳಲ್ಲಿ ಕರದಂಟು ದಿನನಿತ್ಯ ಮಾರಾಟವಾಗುತ್ತದೆ. ಪ್ರತಿದಿನ 200-300 ಕೆಜಿ ಕರದಂಟು ಮಾರಾಟ ಮಾಡಲಾಗುತ್ತಿತ್ತು. ಲಾಕ್‌ಡೌನ್‌ಗಿಂತ ಮುಂಚೆ ಸಿದ್ಧಪಡಿಸಿದ 3 ಲಕ್ಷ ರೂ. ಕರದಂಟು ಇದೆ. ಆದರೆ, ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಕರದಂಟು ತಯಾರಿಕೆ ಮತ್ತು ಮಾರಾಟ ಸ್ಥಗಿತಗೊಳಿಸಿದ್ದೇವೆ.-ಸಂತೋಷ ಐಹೊಳ್ಳಿ, ವಿಜಯಾ ಕರದಂಟು ಮಾಲೀಕರು

ಕೋವಿಡ್ 19 ಲಾಕ್‌ ಹಿನ್ನೆಲೆಯಲ್ಲಿ ಕರದಂಟು ಮಳಿಗೆ ಬಂದ್‌ ಮಾಡಲಾಗಿದೆ. ಆದರೆ ಲಾಕ್‌ಡೌನ್‌ಗಿಂತ ಮುಂಚಿತವಾಗಿ ಸಿದ್ಧಪಡಿಸಿದ್ದ 150 ಕೆಜಿ ಕರದಂಟು ಉಚಿತವಾಗಿ ಹಂಚಲಾಗಿದೆ. 43 ದಿನಗಳಿಂದ ಅಂಗಡಿಗಳು ಬಂದ್‌ ಆಗಿವೆ. ಇದರಿಂದ ಬಾಡಿಗೆ ಕಟ್ಟುವುದು ಕಷ್ಟವಾಗಿದೆ. ಲಕ್ಷಾಂತರ ರೂ. ನಷ್ಟವಾಗಿದೆ ಮತ್ತು ಉದ್ಯಮ ಕೂಡಾ ಬಂದ್‌ ಆಗಿದೆ. –ಸಯ್ಯದ ಸಿಕಂದರ ಪಾಷಾ ಖಾದ್ರಿ, ಖಾದ್ರಿ ಕರದಂಟು ಮಾಲೀಕರು

 

-ಎಚ್‌.ಎಚ್‌.ಬೇಪಾರಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು

Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.