ಕೋವಿಡ್ 19 ಬಿಸಿಗೆ ಕಮರಿದ ಹೂಗಳು


Team Udayavani, Apr 20, 2020, 4:08 PM IST

ಕೋವಿಡ್ 19 ಬಿಸಿಗೆ ಕಮರಿದ ಹೂಗಳು

ಬೀಳಗಿ: ಕೋವಿಡ್ 19 ಹೊಡೆತಕ್ಕೆ ರೈತ ಸಾಲು ಸಾಲು ನಷ್ಟ, ನೋವು ಅನುಭವಿಸುತ್ತಲೇ ಇದ್ದಾನೆ. ಇದೀಗ ರೈತರು ಬೇಸಾಯದಡಿ ಬೆಳೆದ ಹೂಗಳ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ದೊರೆಯದೇ ಇರುವ ಪರಿಣಾಮ, ಕೊರೊನಾ ಬಿಸಿಗೆ ಹೂಗಳು ಕೂಡ ಕಮರಿ ಹೋಗುತ್ತಿರುವುದು ರೈತನ ಆತಂಕ ಹೆಚ್ಚಿಸಿದೆ.

ಮಲ್ಲಿಗೆ, ಸೇವಂತಿ, ಸುಗಂಧರಾಜ, ಗಲಾಟೆ, ಕಾಸಮೋಸ್‌ ಹೂ ಸೇರಿದಂತೆ ತಾಲೂಕಿನಾದ್ಯಂತ ಸುಮಾರು 28 ಎಕರೆ ಪ್ರದೇಶದಲ್ಲಿ ವಿವಿಧ ಹೂಗಳು ಅಂದದಿಂದ ಅರಳಿ ಘಮಘಮಿಸುತ್ತಿವೆ. ಯುಗಾದಿ ಪಾದಾರ್ಪಣೆ ಮಾಡುತ್ತಿದ್ದಂತೆ ಆರಂಭವಾಗುತ್ತಿದ್ದ ಮದುವೆ, ಜಾತ್ರೆ, ವಿವಿಧ ಉತ್ಸವಗಳಿಂದಾಗಿ ಹೂಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಿಟ್ಟುಕೊಳ್ಳುತ್ತಿತ್ತು. ರೈತನ ಕೈತುಂಬ ಹಣ ಸಿಗುತ್ತಿತ್ತು. ಆದರೆ, ಯುಗಾದಿಯ ಹೊತ್ತಿಗೆ ಕೋವಿಡ್ 19 ಎಂಟ್ರಿ ಕೊಟ್ಟಿದ್ದರ ಫಲವಾಗಿ ಇಡೀ ದೇಶವೇ ಲಾಕ್‌ಡೌನ್‌ ಸ್ಥಿತಿ ಅನುಭವಿಸುತ್ತಿದೆ.

ಕಾಯಿಪಲ್ಲೆ, ಹಣ್ಣು-ಹಂಪಲವಾದರೆ ಒಂದಷ್ಟು ಎಲ್ಲಿಯಾದರೂ ಮಾರುಕಟ್ಟೆ ಗಿಟ್ಟಿಸಿಕೊಳ್ಳಬಹುದು. ಆದರೆ, ಸಂಪೂರ್ಣ ಲಾಕ್‌ಡೌನ್‌ ಸ್ಥಿತಿಯಿಂದಾಗಿ ಯಾರೊಬ್ಬರೂ ಹೂವಿನ ವಾಸನೆ ಕೂಡ ಮೂಸುತ್ತಿಲ್ಲ. ಪರಿಣಾಮ, ಎಲ್ಲಿಯೂ ಮಾರುಕಟ್ಟೆ ಸಿಗದೆ ಹೂವು ಬೆಳದೆ ರೈತ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಏನೂ ತೋಚುತ್ತಿಲ್ಲ: ತಾಲೂಕಿನಲ್ಲಿ ಮಲ್ಲಿಗೆ 1.6, ಸೆವಂತಿ 1.2, ಸುಗಂಧರಾಜ 2, ಗಲಾಟೆ 2.4 ಹಾಗೂ ಕಾಸಮೋಸ್‌ 4 ಹೆಕ್ಟರ್‌ ಸೇರಿ ತಾಲೂಕಿನಾದ್ಯಂತ ಒಟ್ಟು 11.2 ಹೆಕ್ಟೇರ್‌ ಪ್ರದೇಶದಲ್ಲಿ ಬೇಸಾಯದಡಿ ವಿವಿಧ ಹೂಗಳ ಒಟ್ಟು 79.5 ಟನ್‌ನಷ್ಟು ಬೆಳೆ ಬೆಳೆದು ನಿಂತಿದೆ. ಕೆಜಿಗೆ 45 ರಿಂದ 50 ರೂ. ಗೆ ಮಾರುತ್ತಿದ್ದ ಮಲ್ಲಿಗೆಯನ್ನು 25 ರೂ, ಸಿಕ್ಕರೆ ಸಾಕು ಎನ್ನುವಂತಾಗಿದೆ. ಕೆಜಿಗೆ 15-20 ರೂ.ಗೆ ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿದ್ದ ಸೇವಂತಿಗೆ 7-8 ರೂ.ಗೆ ಮಾತಾಡುವಂತಾಗಿದೆ.

ಕೆಜಿಗೆ 70-80 ರೂ.ಗೆ ಕೈ ಸೇರುತ್ತಿದ್ದ ಸುಗಂಧರಾಜ ಇದೀಗ 20-25 ರೂ.ಗೆ ಸಿಗುತ್ತಿದೆ ಎಂದರೂ ಯಾರೂ ಮಾತಾಡಿಸುವವರಿಲ್ಲ. ಕೆಜಿಗೆ 10-15 ರೂ.ಗೆ ಬೀಗುವ ಗಲಾಟೆ ಹೂ ಸದ್ಯ, 4-5 ರೂ.ಗೆ ಯಾರೂ ಮುಖ ಮಾಡುತ್ತಿಲ್ಲದಿರುವ ಧಾರುಣ ಸ್ಥಿತಿಯಿಂದಾಗಿ ಹೂ ಬೆಳೆದ ರೈತನಿಗೆ ಏನೊಂದು ತೋಚದಂತಾಗಿದೆ. ಹೂವಿನ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗಬೇಕಿದೆ. ಇಲ್ಲದಿದ್ದರೆ ಸರಕಾರವಾದರೂ ರೈತನ ಸಹಾಯಕ್ಕೆ ನಿಲ್ಲಬೇಕಿರುವುದು ಅಗತ್ಯವಿದೆ ಎನ್ನುವುದು ಹಲವಾರು ರೈತರ ಒತ್ತಾಸೆಯಾಗಿದೆ.

ಹೂವಿನ ಬೆಳೆ ಯಾವತ್ತೂ ನಷ್ಟ ಮಾಡಿದ್ದಿಲ್ರಿ. ಮಾರಾಟಕ್ಕೆ ಎಲ್ಲಿಯೂ ಆಸ್ಪದ ಸಿಗುತ್ತಿಲ್ಲರೀ. ಮೊದಲು, ದಿನಾಲು ಸಾವಿರಾರು ರೂಪಾಯಿ ಲಾಭ ಕೊಡುತ್ತಿದ್ದ ಹೂವಿನ ಬೆಳೆಗಳನ್ನು ಇವತ್ತಿನ ದಿವಸ ನೆಲಕ್ಕೆ ಕೆಡವಿ ಗೊಬ್ಬರ ಮಾಡಾಕತ್ತೇವ್ರಿ. ಸರಕಾರ ನಮ್ಮ ಸಹಾಯಕ್ಕೆ ಬರಬೇಕಿದೆ. – ನಾರಾಯಣಗೌಡ ಪಾಟೀಲ, ರೈತರು, ಬಾವಲತ್ತಿ ಗ್ರಾಮ

ಸ್ಥಳೀಯವಾಗಿ ಮಾರುಕಟ್ಟೆ ಹೊಂದಿದ ಹೂವಿನ ಬೆಳೆಗಳಿಗೆ ಸದ್ಯ, ಲಾಕ್‌ ಡೌನ್‌ ಸ್ಥಿತಿಯಿಂದಾಗಿ ಮಾರುಕಟ್ಟೆಯೇ ಇಲ್ಲದಂತಾಗಿದೆ. ಹೀಗಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ಸೂಕ್ತ ಪರಿಹಾರಕ್ಕಾಗಿ ತಾಲೂಕಿನ ಹೂವಿನ ಬೆಳೆಗಳ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. -ವಿವೇಕಾನಂದ ಕೆರೂರ, ಸಹಾಯಕ ತೋಟಗಾರಿಕೆ ನಿದೇಶಕರು, ಬೀಳಗಿ

 

-ರವೀಂದ್ರ ಕಣವಿ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.