ಕರುಳ ಕುಡಿಗೂ ಕೋವಿಡ್ 19 ಅಡ್ಡಗೋಡೆ!


Team Udayavani, Mar 30, 2020, 4:59 PM IST

ಕರುಳ ಕುಡಿಗೂ ಕೋವಿಡ್ 19  ಅಡ್ಡಗೋಡೆ!

ಬಾಗಲಕೋಟೆ: ಕೋವಿಡ್ 19 ಮಹಾಮಾರಿ ಕರಳು-ಬಳ್ಳಿಗಳಿಗೂ ದೊಡ್ಡ ಗೋಡೆಯಾಗಿ ನಿಂತಿದೆ. ಹೆತ್ತ ಮಕ್ಕಳನ್ನು, ತಂದೆ-ತಾಯಿಯನ್ನೂ ನೋಡಲಾಗದ ಪರಿಸ್ಥಿತಿ ತಂದೊಡ್ಡಿದೆ.

ತಾಯಿ-ಮಗು ದೂರ ದೂರ: ಮೂರು ವರ್ಷದ ಪುಟ್ಟ ಮಗುವಿನಿಂದ ದೂರ ಇರುವಂತೆ ಈ ಕೋವಿಡ್ 19 ಮಾಡಿದೆ. ಗದಗ ಜಿಲ್ಲೆಯ ಮುಂಡರಗಿಯ ಶರಣಪ್ಪ ಅಬ್ಬಿಗೇರಿ ಮತ್ತು ಜ್ಯೋತಿ ಅಬ್ಬಿಗೇರಿ ಅವರಿಗೆ ಮೂರು ವರ್ಷದ ಸೌಮ್ಯ ಮತ್ತು 8 ತಿಂಗಳ ಎರಡು ಮಕ್ಕಳಿವೆ. ಜ್ಯೋತಿಯ ತವರು ಮನೆ ಗುಳೇದಗುಡ್ಡ. ಜ್ಯೋತಿ ಗುಳೇದಗುಡ್ಡದಲ್ಲಿ (ಅದೇ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು) 8 ತಿಂಗಳ ಮಗುವಿನೊಂದಿಗೆ ಕಳೆದ ಮಾ. 20ರಂದು ಗುಳೇದಗುಡ್ಡಕ್ಕೆ ಬಂದಿದ್ದು, ಮಗುವಿಗೆ ಮತ್ತು ಜ್ಯೋತಿ ಅವರಿಗೆ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಎರಡು ದಿನ ತವರು ಮನೆಯಲ್ಲಿದ್ದು, ಹೋಗೋಣವೆಂದು ಉಳಿದಿದ್ದರು. ಮೂರು ವರ್ಷದ ಮಗುವನ್ನು ಮುಂಡರಗಿಯಲ್ಲಿಯೇ ಬಿಟ್ಟು ಬಂದಿದ್ದರು. ಆದರೆ, ಮಾ.22ರಂದು ಲಾಕ್‌ಡೌನ್‌ ಘೋಷಣೆಯಾಯಿತು. ಜ್ಯೋತಿ ಮತ್ತು 8 ತಿಂಗಳ ಮಗು, ಗುಳೇದಗುಡ್ಡದಲ್ಲೇ ಉಳಿದ್ದು, ಮೂರು ವರ್ಷದ ಮಗು ಮತ್ತು ಪತಿ ಶರಣಪ್ಪ, ಮುಂಡರಗಿ ಯಲ್ಲಿಳಿದವರು. ಮರುದಿನ ಹೋಗೋಣವೆಂದರೆ, 8 ತಿಂಗಳ ಮಗುವಿಗೆ ಮತ್ತೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಮತ್ತೂಂದು ದಿನ ಕಳೆಯುವಷ್ಟರಲ್ಲಿ ಲಾಕ್‌ಡೌನ್‌ ಮುಂದುವರೆಯಿತು. ಇತ್ತ ಜ್ಯೋತಿ ಗುಳೇದಗುಡ್ಡದಲ್ಲಿ ಲಾಕ್‌ ಆದರೆ, ಅತ್ತ ಮೂರು ವರ್ಷದ ಮಗುವಿನೊಂದಿಗೆ ಶರಣಪ್ಪ ಲಾಕ್‌ ಆದ್ರು.

ಅಮ್ಮನಿಗಾಗಿ ಕಣ್ಣೀರು ಹಾಕುತ್ತಿರುವ ಮಗು: ಮಾ. 25ರಿಂದ ತಾಯಿ ಜ್ಯೋತಿ, ಗುಳೇದಗುಡ್ಡದಲ್ಲಿದ್ದು, ಅತ್ತ ಮುಂಡರಗಿಯಲ್ಲಿರುವ ಮಗು, ಅಮ್ಮನಿಗಾಗಿ ಕಣ್ಣೀರು ಹಾಕುತ್ತಿದೆ. ತಂದೆ ಶರಣಪ್ಪ ಎಷ್ಟೇ ಸಮಾಧಾನ ಮಾಡಿದರೂ ಮಗು ಅಳುವುದು ನಿಲ್ಲುತ್ತಿಲ್ಲ. ಇತ್ತ, ಮಗುವಿನ ಅಳು ನಿಲ್ಲಿಸಲು ತಾಯಿ, ಮೊಬೈಲ್‌ನಲ್ಲೇ ಎಷ್ಟೇ ಪ್ರಯತ್ನಿಸಿದರೂ ಮಮ್ಮಿ ನೀ ಎಲ್ಲಿ ಅದಿ, ಜಲ್ದ ಬಾ ಎಂದು ತೊದಲು ನುಡಿಯಲ್ಲಿ ಕೇಳಿಕೊಳ್ಳುತ್ತಿದೆ. ಮಗುವಿನ ಮಾತಿಗೆ ತಾಯಿ, ಕಣ್ಣೀರಾಗಿ, ಕೋವಿಡ್ 19  ಎಂಬ ವೈರಸ್‌ಗೆ ಹಿಡಿಶಾಪ ಹಾಕುತ್ತಿದ್ದಾಳೆ. ಎಲ್ಲ ಪ್ರಸಂಗವನ್ನು ಗುಳೇದಗುಡ್ಡ ತಹಶೀಲ್ದಾರ್‌ಗೆ ತಿಳಿಸಿ, ಮೂರು ವರ್ಷದ ಮಗುವಿಗಾಗಿ ಮುಂಡರಗಿಗೆ ಹೋಗಬೇಕು. ನನ್ನ ತಮ್ಮ ಬೈಕ್‌ನಲ್ಲಿ ಬಿಟ್ಟು ಬರುತ್ತಾರೆ ಎಂದೆಲ್ಲ ಮನವಿ ಮಾಡಿಕೊಂಡರು. ಆದರೆ, ಅನಿವಾರ್ಯತೆಯ ಪರಿಸ್ಥಿತಿಯಿಂದ ಅಧಿಕಾರಿ ಪರವಾನಿಗೆ ಕೊಡಲಿಲ್ಲ.

ಹುಟ್ಟಿದ ಊರಿಗೆ ಹೋಗಲು ಆಗುತ್ತಿಲ್ಲ: ತಾಯಿ ಮಗುವಿನ ಪರಿಸ್ಥಿತಿ ಇದಾದರೆ, ದೂರದ ಮಂಗಳೂರು, ಬೆಂಗಳೂರು, ಗೋವಾಕ್ಕೆ ದುಡಿಯಲು ಹೋದವರು ನಡೆದುಕೊಂಡೇ ಜಿಲ್ಲೆಯ ಗಡಿಗೆ ಬಂದಿದ್ದರು. ಕಷ್ಟಪಟ್ಟು ಊರ ಸೇರಲು ಬಂದವರು,ಮರಳಿ ದುಡಿಯುವ ಜಾಗಕ್ಕೆ ಹೋಗಲು ಎಚ್ಚರಿಕೆ ಕೊಡಲಾಗಿದೆ. ಇನ್ನೂ ಕೆಲವೆಡೆ ರಾತ್ರೋರಾತ್ರಿ ಊರಿಗೆ ಬಂದರೆ, ಊರ ಜನ, ಗ್ರಾಮಕ್ಕೆ ಬಿಟ್ಟುಕೊಂಡಿಲ್ಲ. ತಮ್ಮದೇ ಸಂಬಂಧಿಕರಿಂದಲೂ ಕೋವಿಡ್ 19  ಅವರನ್ನು ಹತ್ತಿರದಿಂದ ಮಾತನಾಡಿಸಲೂ ಆಗದಂತಾಗಿದೆ.

ಗುಳೇದಗುಡ್ಡ ನನ್ನ ತವರು. ಇಲ್ಲಿಯೇ ಆಸ್ಪತ್ರೆಯಲ್ಲೇ ಹೆರಿಗೆಯಾಗಿತ್ತು. ಮಗು ಮತ್ತು ನನಗೆ ಆಸ್ಪತ್ರೆಗೆ ತೋರಿಸಲು ಬಂದಿದ್ದೆ. 3 ವರ್ಷ ಮಗುವನ್ನು ಪತಿಯ ಜತೆಗೆ ಮುಂಡರಗಿಯಲ್ಲಿ ಬಿಟ್ಟು ಬಂದಿದ್ದೆ. ಲಾಕ್‌ಡೌನ್‌ ಆಗಿದ್ದರಿಂದ ಇಲ್ಲಿಯೇ ಉಳಿಯಬೇಕಾಯಿತು. ಮಗುವಿನ ಅಳು ಕೇಳಿ, ಕರಳು ಚುರಕ್‌ ಅನ್ನುತ್ತಿದೆ. ಏನು ಮಾಡಲಿ. ಇಲ್ಲಿರಲೂ ಆಗುತ್ತಿಲ್ಲ, ಅಲ್ಲಿಗೆ ಹೋಗಲೂ ಆಗುತ್ತಿಲ್ಲ. –ಜ್ಯೋತಿ ಶರಣಪ್ಪ ಅಬ್ಬಿಗೇರಿ, ತವರು ಮನೆಯಲ್ಲಿರುವ ಮುಂಡರಗಿ ಮಹಿಳೆ

 

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.