ಜೀವ ಭಯ ಇದ್ರೂ ಜೀವ ಉಳಿಸಿದ ನೆಮ್ಮದಿ!
Team Udayavani, Apr 23, 2020, 3:25 PM IST
ಸಾಂದರ್ಭಿಕ ಚಿತ್ರ
ಬಾಗಲಕೋಟೆ: ಕೋವಿಡ್ 19 ಅಂದಾಕ್ಷಣ ಮೊದಲು ನಮಗೂ ಭಯವಾಗಿತ್ತು. ಆ ವಾರ್ಡ್ಗೆ ಡ್ನೂಟಿ ಪಡೆಯಲು ಎಲ್ಲರೂ ಹೆದರುತ್ತಿದ್ದರು. ನಮ್ಮ ಹಿರಿಯ ವೈದ್ಯರು, ಅಧಿಕಾರಿಗಳು ಆತ್ಮಸ್ಥೈರ್ಯದ ಜತೆಗೆ ತರಬೇತಿಯೂ ಕೊಟ್ಟರು. ಎಲ್ಲ ಮಲೇರಿಯಾ, ಡೆಂಘಿಯಂತೆ ಅದೂ ಒಂದೊಂದು ಸಾಂಕ್ರಾಮಿಕ ರೋಗ. ನಮಗೆ ಆರಂಭದಲ್ಲಿ ಜೀವ ಭಯ ಎನಿಸಿದರೂ ಒಂದು ಜೀವ ಉಳಿಸುವ ಕೆಲಸ ಮಾಡಿದ ನೆಮ್ಮದಿ ಇತ್ತು.
ಹೀಗೆ ಹೇಳಿಕೊಂಡವರು ನವನಗರದ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಕೋವಿಡ್ -19 ಸೋಂಕಿತರ ಆರೈಕೆ ಮಾಡಿದ ಹಿರಿಯ ಶುಶ್ರೂಷಕಿ. ಮನೆಯಲ್ಲಿ ಮೂರು ವರ್ಷದ ಮಗು. 14 ದಿನಗಳ ಕಾಲ ಮನೆಗೆ ಹೋಗದೇ ಆಸ್ಪತ್ರೆಯಲ್ಲಿಯೇ ಇರಬೇಕಿತ್ತು. ಒಮ್ಮೆ ಕೋವಿಡ್-19 ವಾರ್ಡ್ಗೆ ಹೋದರೆ ಪಿಪಿಇ ಕಿಟ್ ಧರಿಸಿಯೇ ಹೋಗಬೇಕು. ಅದು ಧರಿಸುವ ಮುಂಚೆಯೇ ನಮ್ಮ ಎಲ್ಲ ಕೆಲಸ ಮುಗಿಸಿಕೊಳ್ಳಬೇಕು. ಹೆಚ್ಚಿಗೆ ನೀರೂ ಕುಡಿಯುವಂತಿರಲಿಲ್ಲ. ಪಿಪಿಇ ಕಿಟ್ ಧರಿಸಿದಾಗ, ನೈಸರ್ಗಿಕ ಕ್ರಿಯೆಗೂ ಹೋಗುವಂತಿರಲಿಲ್ಲ. ಹೀಗಾಗಿ ಒಮ್ಮೆ ಕಿಟ್ ಧರಿಸಿದರೆ, 6 ಗಂಟೆ ತಗೆಯುವಂತಿಲ್ಲ. ಎಷ್ಟೇ ಕಷ್ಟವೆನಿಸಿದರೂ, ನಾವೆಲ್ಲ ಕೆಲಸ ಮಾಡಿದೇವು. ನಮಗೆ ಹಿರಿಯ ಅಧಿಕಾರಿಗಳ, ವೈದ್ಯರ ಸಲಹೆ-ಮಾರ್ಗದರ್ಶನವೂ ಇತ್ತು. ಹೀಗಾಗಿ ಜೀವ ಭಯ ಬಿಟ್ಟು ಎಂದಿನಂತೆ ಕೆಲಸ ಮಾಡಿದೇವು.
ಮಕ್ಕಳ ನೋಡಿ ಕಣ್ಣೀರಾದೇವು: ಏ. 2ರಂದು ನಮಗೆ ಕೋವಿಡ್ 19 ವಾರ್ಡ್ಗೆ ಡ್ನೂಟಿ ಹಾಕಿದ್ದರು. ಆಗಲೇ ಆಸ್ಪತ್ರೆಗೆ ಬಂದಿದ್ದ ವೃದ್ಧರಿಗೆ ಸೋಂಕು ತಗುಲಿತ್ತು. ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅವರಿಗೆ ಬೇರೆ ಬೇರೆ ಕಾಯಿಲೆ ಇದ್ದುದ್ದರಿಂದ ಚಿಕಿತ್ಸೆ ಫಲಿಸಲಿಲ್ಲ. ಆದರೆ, ಏ. 7ರಂದು ಮೂರು ಮಕ್ಕಳು, ಕೋವಿಡ್ 19 ಸೋಂಕಿನಿಂದ ಆಸ್ಪತ್ರೆಗೆ ಬಂದರು. ಆ ಮಕ್ಕಳಿಗೆ ಈ ಜೀವ ಕಂಟಕದ ಸೋಂಕು ಬಂದಿರುವುದು ದುಃಖ ಉಮ್ಮಳಿಸಿ ಬರುವಂತೆ ಮಾಡಿತು. ಅದರಲ್ಲೂ ನಾಲ್ಕು ವರ್ಷದ ಪುಟ್ಟ ಮಗುವನ್ನು ಆ ವಾರ್ಡ್ನಲ್ಲಿರುವರೆಲ್ಲ ಪ್ರೀತಿಯಿಂದ ಆರೈಕೆ ಮಾಡಿದೇವು. ದೇವರು ದೊಡ್ಡವನು. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿದರು. ಬಹುತೇಕರು ಗುಣಮುಖರಾಗುತ್ತಾರೆ ಎಂಬ ನಂಬಿಕೆ ನಮಗಿದೆ. 14 ದಿನಗಳ ಬಳಿಕ ಮನೆಗೆ ಬಂದೆ. ಮೂರು ವರ್ಷದ ಮಗು, ಪತಿ, ಸಹೋದರ ಕಾಯುತ್ತಿದ್ದರು. ನೀ ಹ್ಯಾಂಗ್ ಅದೀ ಎಂದು ನನ್ನ ಆರೋಗ್ಯ ವಿಚಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು