ಕೆಟ್ಟ ಕೋವಿಡ್ ಬಂದೈತಿ; ಪುಣ್ಯಕ್‌ ಉಳಿಗಾಲ ಎಲ್ಲೆ„ತಿ!

ಹತ್ತೇ ದಿನದಲ್ಲಿ 10 ಲಕ್ಷ ಜನರಿಗೆ ತಲುಪಿದ ಹಾಡು­ಪೊಲೀಸನ ಹಾಡಿಗೆ ಜನರು ಫಿದಾ 

Team Udayavani, Jun 5, 2021, 7:30 PM IST

4 bgk-1b

ವರದಿ: ಶ್ರೀಶೈಲ ಕೆ. ಬಿರಾದಾರ

ಬಾಗಲಕೋಟೆ: ಅರೆರೇ ಕೆಟ್ಟ ಕೊರೊನಾ ಬಂದೈತಿ. ಪುಣ್ಯಕ್ಕ ಉಳಿಗಾಲ ಎಲ್ಲೈತಿ. ಜನರ ಜೀವಾ ಜಗ್ಗತೈತಿ.. ಕೊರೊನಾ ಓಡಿಸಾಕ, ತಯಾರ್‌ ಆಗೂನ್‌.. ನೀನು ಹೇಳಲೇ ಮಗನ, ನೀ ಹೋಗತಿ ಇಲ್ಲೋ.. ಓಡಿಸೋಣ ಗುಮ್ಮಿ… ಜಿಲ್ಲೆಯೂ ಸೇರಿದಂತೆ ಬಹುತೇಕ ಕಡೆ ಎಲ್ಲರ ಮೊಬೈಲ್‌ನಲ್ಲಿ ಈ ಹಾಡುಗಳೇ ರಿಂಗಣಿಸುತ್ತಿವೆ.

ಬಾಗಲಕೋಟೆ ಖ್ಯಾತ ಕವಿ ಎಚ್‌.ಎನ್‌. ಶೇಬನ್ನವರ ರಚಿಸಿರುವ ಈ ಎರಡು ಹಾಡುಗಳು ಈಗ ಎಲ್ಲೆಡೆ ಭಾರಿ ಸದ್ದು ಮಾಡುತ್ತಿವೆ. ಅದರಲ್ಲೂ ನಗರದ ಸಂಚಾರಿ ಪೊಲೀಸ್‌ ಠಾಣೆಯ ಪೇದೆ ಭಾಸ್ಕರ ಕಮ್ಮಾರ ಹಾಡಿರುವ ಅರೆರೇ ಕೆಟ್ಟ ಕೊರೊನಾ ಬಂದೈತಿ, ಪುಣ್ಯಕ್ಕೆ ಉಳಿಗಾಲ ಎಲ್ಲೈತಿ.. ಎಂಬ ಹಾಡು ಕೇವಲ 10 ದಿನಗಳಲ್ಲಿ 7.25 ಲಕ್ಷ ವೀಕ್ಷಣೆ ಕಂಡಿದ್ದು, ಈ ಎರಡು ಹಾಡುಗಳು ಈ ವರೆಗೆ 10 ಲಕ್ಷ ಜನರು ವೀಕ್ಷಿಸಿ ಖುಷಿ ಕಂಡಿದ್ದಾರೆ. ಪೊಲೀಸ್‌ ಪೇದೆ ಹಾಗೂ ನಗರದ ಗಾಯಕ ಕೃಷ್ಣಾ ಅಂಬಿಗೇರ ಅವರಿಬ್ಬರೂ ಕೂಡಿ ಹಾಡಿರುವ ಈ ಹಾಡಿಗೆ ಸದ್ಯ ಅತ್ಯುತ್ತಮ ಪ್ರಕ್ರಿಯೆ ಕೂಡ ವ್ಯಕ್ತವಾಗಿದೆ.

ಕೊರೊನಾ ಜಾಗೃತಿ ಹಾಡು: ಕೊರೊನಾ 2ನೇ ಅಲೆ ಅತಿಹೆಚ್ಚು ಸಂಕಷ್ಟ ನೀಡಿದ್ದು, ಈ ಕುರಿತು ಮನದಲ್ಲೇ ಕೊರಗಿದ ಶಿಗಿಕೇರಿಯ ನಾಟಕಕಾರರೂ ಆಗಿರುವ ಕವಿ ಎಚ್‌.ಎನ್‌. ಶೇಬನ್ನವರ, ಎರಡು ಹಾಡುಗಳನ್ನು ರಚಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ರಾಬರ್ಟ್‌ ಚಿತ್ರದ ಕಣ್ಣು ಹೊಡೆಯಾಕ್‌ ಹಾಡಿನ ರಿಮಿಕ್ಸ್‌ನಲ್ಲಿ ಕೊರೊನಾ ಓಡಿಸಾಕ ತಯಾರ್‌ ಆಗೂನ, ನೀನು ಹೇಳಲೇ ಮಗನ, ನೀ ಹೋಗತಿಲ್ಲೋ, ಓಡಿಸೋಣ ಗುಮ್ಮಿ ಎಂಬ ಹಾಡನ್ನು ನಗರದ ಯುವ ಗಾಯಕ ಬೇಬಿ ಆಯಿಷಾ ಹಾಡಿದ್ದಾರೆ.

ಈ ಹಾಡನ್ನು ಎರಡು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿದ್ದು, 2.50 ಲಕ್ಷ ವೀವರ್ ದಾಟಿದೆ. ಇನ್ನು ಅರೆರೇ ಕೆಟ್ಟ ಕೊರೊನಾ ಬಂದೈತಿ, ಪುಣ್ಯಕ್ಕೆ ಉಳಿಗಾಲ ಎಲ್ಲೈತಿ  ಎಂಬ ಕೊರೊನಾ ಕುರಿತು ಜಾಗೃತಿ ವಹಿಸುವ ಹಾಡನ್ನು ಪೊಲೀಸ್‌ ಪೇದೆ ಭಾಸ್ಕರ ಕಮ್ಮಾರ ಮತ್ತು ಕೃಷ್ಣಾ ಅಂಬಿಗೇರ ಹಾಡಿದ್ದು, ಇದನ್ನು 10 ದಿನಗಳ ಹಿಂದೆ ಅಪ್‌ಲೋಡ್‌ ಮಾಡಲಾಗಿದೆ. ರಾಯಲ್‌ ಬಾಗಲಕೋಟೆ, ನಮ್ಮ ಬಾಗಲಕೋಟೆ ಫೇಸ್‌ಬುಕ್‌ ಪೇಜ್‌ ಸಹಿತ ಹಲವರು ಇದನ್ನು ಅಪ್‌ ಲೋಡ ಮಾಡಿದ್ದು, ಈವರೆಗೆ 7.50 ಲಕ್ಷ ವೀಕ್ಷಣೆ, 868 ಕೆ ಕಮೆಂಟ್ಸ್‌, 4.1ಕೆ ಶೇರ್‌, 24 ಕೆ. ಲೈಕ್ಸ್‌ ಆಗಿವೆ. ಅದರಲ್ಲೂ ಪೊಲೀಸ್‌ ಪೇದೆಯೊಬ್ಬರು ತಮ್ಮ ಸುಂದರ ಕಂಠದಿಂದ ಕೊರೊನಾ ಜಾಗೃತಿ ಮೂಡಿಸುವ ಹಾಡು, ಜಿಲ್ಲೆಯಲ್ಲಿ ಫೇಮಸ್‌ ಆಗಿರುವುದು ಇದೇ ಮೊದಲು ಎನ್ನಲಾಗಿದೆ.

ಹಲವರ ಮೆಚ್ಚುಗೆ: ಕವಿ ಎಚ್‌.ಎನ್‌. ಶೇಬನ್ನವರ ರಚಿಸಿದ ಈ ಎರಡು ಹಾಡುಗಳನ್ನು ನಗರದ ಆರ್‌ಕೆ ಸ್ಟುಡಿಯೋದಲ್ಲಿ ರಿಕಾರ್ಡ್‌ ಮಾಡಿದ್ದು, ಪೊಲೀಸ್‌ ಪೇದೆ ಭಾಸ್ಕರ ಮತ್ತು ಕೃಷ್ಣಾ ಹಾಡಿರುವ ಈ ಜಾಗೃತಿ ಗೀತೆಯನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ ಬಿಡುಗಡೆಗೊಳಿಸಿದ್ದಾರೆ. ಜತೆಗೆ ಪೊಲೀಸ್‌ ಪೇದೆಯ ಬೆನ್ನು ತಟ್ಟಿ, ಉತ್ತಮ ಜಾಗೃತಿ ಗೀತೆ ಹಾಡಿದ್ದೀರಿ ಎಂದು ಹಾರೈಸಿದ್ದಾರೆ. ಕವಿ ಶೇಬನ್ನವರ, ಗಾಯಕರಾದ ಭಾಸ್ಕರ ಕಮ್ಮಾರ, ಕೃಷ್ಣಾ ಅಂಬಿಗೇರ ಹಾಗೂ ಬೇಬಿ ಆಯಿಷಾ ಅವರ ಈ ಪ್ರಯತ್ನಕ್ಕೆ ಯುವ ನಾಯಕರಾದ ಸಂತೋಷ ಹೊಕ್ರಾಣಿ, ಬಸವಪ್ರಭು ಸರನಾಡಗೌಡ, ಬಸವೇಶ್ವರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಪ್ರಮುಖರಾದ ಮಳಿಯಪ್ಪ ಹೊಸಗರ, ಮುತ್ತು ಮಾಚಕನೂರ, ಲಿಂಗರಾಜ ಜಾಡರ, ವಿಠ್ಠಲ ರೇವಡಿ ಮುಂತಾದ ಪ್ರಮುಖ ಸಹಕಾರ ನೀಡಿ, ಈ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ.

ಒಟ್ಟಾರೆ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಪೊಲೀಸ್‌ ಪೇದೆ, ಇಬ್ಬರು ಗಾಯಕರು, ಕವಿ ಶೇಬನ್ನವರ ರಚಿಸಿದ ಕೊರೊನಾ ಜಾಗೃತಿ ಹಾಡುಗಳು ಎಲ್ಲರ ಮನ ಗೆದ್ದಿವೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.