ಬಣ್ಣದಾಟಕ್ಕೆ ಅಡ್ಡಿ; ಇತಿಹಾಸದಲ್ಲೇ ಮೊದಲು

ಸುಮಾರು 180 ವರ್ಷದಿಂದ ಒಂದೂ ಬಾರಿಯೂ ರದ್ದಾಗಿರಲಿಲ್ಲ

Team Udayavani, Mar 22, 2021, 4:12 PM IST

ಬಣ್ಣದಾಟಕ್ಕೆ ಅಡ್ಡಿ; ಇತಿಹಾಸದಲ್ಲೇ ಮೊದಲು

ಬಾಗಲಕೋಟೆ: ದೇಶದಲ್ಲೇ ಅತಿ ವಿಶಿಷ್ಟ ಹಾಗೂ ವಿನೂತನವಾಗಿ ನಡೆಯುವ ಬಾಗಲಕೋಟೆಯ ಹೋಳಿ ಹಬ್ಬಕ್ಕೆ ಈ ಬಾರಿ ಕೋವಿಡ್ 2ನೇ ಅಲೆ ಅಡ್ಡಿಯಾಗಿದೆ. ಹೋಳಿ ಹಬ್ಬದ ಇತಿಹಾಸದಲ್ಲೇಮೊದಲ ಬಾರಿಗೆ ಬಣ್ಣದಾಟ ರದ್ದಾಗಿದೆ.

ಹೌದು, ಬಾಗಲಕೋಟೆಯ ಹೋಳಿ ಆಚರಣೆ,ಅತ್ಯಂತ ವಿನೂತನ. ಇದಕ್ಕೊಂದು ದೊಡ್ಡ ಇತಿಹಾಸವೂ ಇದೆ. ಮೊದಲು ಐದು ದಿನಗಳ ವರೆಗೆ ನಡೆಯುತ್ತಿದ್ದ ಇಲ್ಲಿನ ಬಣ್ಣದಾಟ ನೋಡಲೆಂದೇ ಹಲವಾರು ಜಿಲ್ಲೆ, ಊರುಗಳಿಂದ ಜನ ಬರುತ್ತಿದ್ದರು. ದೇಶ-ವಿದೇಶಗಳಿಗೆ ಹೋಗಿದ್ದ ಬಾಗಲಕೋಟೆಯಜನ, ಹೋಳಿ ಹಬ್ಬಕ್ಕಾಗಿ ಮರಳು ಇಲ್ಲಿಗೆಬರುತ್ತಿದ್ದರು. ಐದು ದಿನಗಳ ಕಾಲ ನಡೆಯುತ್ತಿದ್ದಬಣ್ಣದಾಟದಿಂದ ನಗರದ ವರ್ತಕರಿಗೆ, ವಿವಿಧ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಮೂರು ದಿನಗಳಿಗೆ ಇಳಿಸಲಾಗಿತ್ತು.ಸುಮಾರು 180ರಿಂದ 200 ವರ್ಷಗಳ ಇತಿಹಾಸಹೊಂದಿರುವ ಬಾಗಲಕೋಟೆಯ ಹೋಳಿ-ಬಣ್ಣದಾಟ, ಈ ಬಾರಿ ಕೋವಿಡ್ 2ನೇ ಅಲೆಯ ಪರಿಣಾಮ ಸಪ್ಪೆಯಾಗಿದೆ.

ಬಣ್ಣದ ಬಂಡಿ ನೋಡುವುದೇ ಹಬ್ಬ: ಕಾಮ ದಹನದ ಮರುದಿನದಿಂದ ಮೂರು ದಿನಗಳಕಾಲ ನಡೆಯುತ್ತಿದ್ದ ಇಲ್ಲಿನ ಬಣ್ಣದ ಬಂಡಿಗಳು,ಅದರ ಮುಂದೆ ಹೋಗುವ ತುರಾಯಿ ಹಲಗೆಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಹೋಳಿಆಚರಣೆಗೆಂದೇ ಇಲ್ಲಿ ಬಾಬುದಾರರ ಮನೆತನಗಳಿವೆ.ಕೆಲವು ಬಾಬುದಾರ ಮನೆಯಿಂದ ಹಲಗೆ ಬಂದರೆ,ಇನ್ನೂ ಕೆಲವರ ಮನೆಯಿಂದ ಕಾಮ ದಹನಕ್ಕೆ ಕಟ್ಟಿಗೆ ಬರುತ್ತವೆ.

ಎಲ್ಲ ಸಮಾಜ ಬಾಂಧವರು ಒಟ್ಟಿಗೇ ಕೂಡಿ,ಜಾತಿ-ಪಕ್ಷ, ಪ್ರತಿಷ್ಠೆ ಇಲ್ಲದೇ ಬಣ್ಣದಲ್ಲಿ ಮಿಂದೆದ್ದು,ಬಾಗಲಕೋಟೆಯ ಸಂಸ್ಕೃತಿ ಮೆರೆಯುತ್ತಾರೆ. ಇದುಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಮಾನ್ಯತೆ ಸಿಗುವ ಸಮಯದಲ್ಲೇ ರದ್ದು: ಬಾಗಲಕೋಟೆಯಲ್ಲಿ ಹುಟ್ಟಿ ಬೆಳೆದ, ಸಧ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವ ಅರವಿಂದ ಲಿಂಬಾವಳಿ ಹೋಳಿ ಹಬ್ಬಕ್ಕೆ ಇಲಾಖೆಯಿಂದವಿಶೇಷ ಮಾನ್ಯತೆ ಕೊಡಿಸುವ ಉಮೇದಿಯಲ್ಲಿದ್ದಾರೆ.ಅದಕ್ಕಾಗಿ ಇಲಾಖೆಯಿಂದ ಪ್ರಸ್ತಾವನೆ ತರಿಸಿಕೊಂಡು,ಖಾಯಂ ಆಗಿ ಅನುದಾನ ನಿಗದಿ ಮಾಡುವ ಮೂಲಕಈ ಸಂಸ್ಕೃತಿ, ಪರಂಪರೆಗೆ ಸರ್ಕಾರದ ಅಚ್ಚು ಒತ್ತುವ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಇದೇ ಮೊದಲ ಬಾರಿಗೆ ಇಲಾಖೆಯ ಸಚಿವರೊಬ್ಬರು ವಿಶೇಷ ಕಾಳಜಿ ವಹಿಸಿರುವಾಗಲೇ ಕೋವಿಡ್ ಎಂಬ ಮಾರಿ, ಮೂರು ದಿನಗಳ ಬಣ್ಣದಾಟಕ್ಕೆ ಬ್ರೇಕ್‌ ನೀಡಿರುವುದು ಅತ್ಯಂತ ಬೇಸರವನ್ನು ಇಲ್ಲಿನ ಜನತೆಗೆ ತರಿಸಿದೆ.

ನಾನು ಕಳೆದ 28 ವರ್ಷಗಳಿಂದ ಹೋಳಿ ಆಚರಣೆ ಸಮಿತಿ ಕಾರ್ಯದರ್ಶಿಯಾಗಿದ್ದೇನೆ. 40 ವರ್ಷದಿಂದ ಬಣ್ಣದಾಟ, ಆಚರಣೆ ನೋಡಿಕೊಂಡು ಬಂದಿದ್ದೇನೆ. ಈ ಬಣ್ಣದಾಟಕ್ಕೆ ಸುಮಾರು 180ರಿಂದ 200 ವರ್ಷಗಳ ಇತಿಹಾಸವಿದೆ. ಆರಂಭಗೊಂಡಾಗಿನಿಂದ ಒಮ್ಮೆಯೂ ನಿಂತಿರಲಿಲ್ಲ. ಆದರೆ, ಈ ಬಾರಿ ಕೋವಿಡ್  2ನೇ ಅಲೆಯಿಂದ ಜನರಿಗೆ ತೊಂದರೆಯಾಗಬಾರದು. ನೀರಿನಿಂದ ಒಬ್ಬರಿಗೊಬ್ಬರು ಬಣ್ಣ ಎರಚುತ್ತೇವೆ. ಹೀಗಾಗಿ ಯಾವುದೇ ಸಮಸ್ಯೆ ಉಂಟಾಗದಿರಲಿ ಎಂಬ ಉದ್ದೇಶದಿಂದ ಈ ಬಾರಿ ರೇನ್‌ ಡ್ಯಾನ್ಸ್‌, ಬಣ್ಣದ ಬಂಡಿಗೆಅವಕಾಶವಿಲ್ಲ. ಆದರೆ, ಸಾಂಪ್ರದಾಯಿಕ ಹೋಳಿ ಆಚರಣೆ, ಬಣ್ಣದ ಬಂಡಿಹೋಗುವ ಮಾರ್ಗದಲ್ಲಿ ತುರಾಯಿ ಹಲಗೆ ಸಾಗಲಿದೆ. ಈ ವರ್ಷ, ಬಣ್ಣದಾಟಕ್ಕೆ ಕೋವಿಡ್   ಅಡ್ಡಿಯಾಗಿದ್ದು ನಮಗೂ ಬೇಸರ ತರಿಸಿದೆ. -ಮಹಾಬಲೇಶ್ವರ ಗುಡಗುಂಟಿ, ಕಾರ್ಯದರ್ಶಿ, ಹೋಳಿ ಆಚರಣೆ ಸಮಿತಿ, ಬಾಗಲಕೋಟೆ

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.