ಮತ್ತೂಂದು ಪ್ರದೇಶಕ್ಕೆ ಕೋವಿಡ್ ವೈರಸ್ ವಿಸ್ತರಣೆ
Team Udayavani, May 20, 2020, 4:49 AM IST
ಬಾಗಲಕೋಟೆ : ಜಿಲ್ಲೆಯಲ್ಲೇ ಮೊದಲ ಕೋವಿಡ್ ಪ್ರಕರಣ ಕಂಡು ಬಂದಿದ್ದ ಬಾಗಲಕೋಟೆಯ ಅಡತ ಬಜಾರ್ ಪ್ರದೇಶ ಹೊರತುಪಡಿಸಿ, ನಗರದ ಬೇರೆ ಪ್ರದೇಶದಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಆ ಪ್ರದೇಶದ 14 ಜನರೂ ಗುಣಮುಖರಾಗಿ ಮನೆ ಸೇರಿದ ಮರುದಿನವೇ ನಗರದ ಮತ್ತೂಂದು ಪ್ರದೇಶಕ್ಕೆ ಸೋಂಕು ವಿಸ್ತರಣೆಯಾಗಿದ್ದು, ಜಯನಗರದ ಜನರು ಭೀತಿಗೊಂಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಮಹಾರಾಷ್ಟ್ರದ ಕೊಲ್ಹಾಪುರದಿಂದ ಬಂದಿದ್ದ 38 ವರ್ಷದ ಪುರುಷ (ಕಾರ್ಮಿಕ) ಪಿ-1391 ವ್ಯಕ್ತಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿ ಮೂರು ದಿನಗಳ ಹಿಂದೆಯೇ ಮುಚಖಂಡಿ ಕ್ರಾಸ್ ಬಳಿಯ ಜಯನಗರದಲ್ಲಿರುವ ತನ್ನ ಮನೆಗೆ ಬಂದಿದ್ದು, ಒಂದು ದಿನ ಮನೆಯಲ್ಲೇ ಕಳೆದಿದ್ದಾನೆ ಎನ್ನಲಾಗಿದೆ. ಜಯನಗರ ಬಡಾವಣೆಯ ಪ್ರಮುಖರು, ಆತನನ್ನು ಕ್ವಾರಂಟೈನ್ಗೆ ಕಳುಹಿಸಿದ್ದು, ಮರುದಿನವೇ ಆತನಿಗೆ ಪಾಜಿಟಿವ್ ಬಂದಿದೆ. ಹೀಗಾಗಿ ಆತನ ಸಂಪರ್ಕಕ್ಕೆ ಬಂದವರ ವಿವರ ಪಡೆಯುವ ಜತೆಗೆ, ಆತ ಮಹಾರಾಷ್ಟ್ರದಿಂದ ಹೇಗೆ ನಗರಕ್ಕೆ ಬಂದ, ಆತನೊಂದಿಗೆ ಎಷ್ಟು ಜನರಿದ್ದರು, ಕ್ವಾರಂಟೈನ್ ವೇಳೆ ಆತನೊಂದಿಗೆ ಸಂಪರ್ಕಕ್ಕೆ ಬಂದವರ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ನಗರದಲ್ಲಿ ಕಂಡು ಬಂದಿದ್ದ ಒಟ್ಟು 15 ಜನ ಸೋಂಕಿತರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದು, ಉಳಿದ 14 ಜನರೂ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದೀಗ ಮತ್ತೂಂದು ಪ್ರದೇಶವಾದ ಜಯನಗರಕ್ಕೆ ಸೋಂಕು ಬಂದಿದ್ದು, ಈ ಬಡಾವಣೆಯ ಜನರು ಕೋವಿಡ್ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೇ ಈ ಬಡಾವಣೆಗೆ ಮಂಗಳವಾರ ರಾತ್ರಿಯಿಂದಲೇ ಪ್ರವೇಶ, ಹೊರ ಹೋಗುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ