ಬಸವಣ್ಣನ ಐಕ್ಯ ಸ್ಥಳದ ಲಿಂಗದಲ್ಲಿ ಬಿರುಕು
Team Udayavani, Feb 19, 2019, 12:40 AM IST
ಕೂಡಲಸಂಗಮ: ಕೃಷ್ಣ, ಮಲಪ್ರಭೆ ನದಿಗಳ ಸಂಗಮದಲ್ಲಿರುವ ಬಸವಣ್ಣನ ಐಕ್ಯ ಮಂಟಪದ ಐಕ್ಯ ಸ್ಥಳದ ಲಿಂಗದಲ್ಲಿ ಬಿರುಕು ಬಿಟ್ಟಿದ್ದು, ರಕ್ಷಿಸುವ ಕಾರ್ಯವನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕೈಗೊಳ್ಳಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.
ಕೆಲವು ಭಕ್ತರು ಬಸವಣ್ಣನ ಐಕ್ಯ ಸ್ಥಳದ ಲಿಂಗಕ್ಕೆ ನಾಣ್ಯ ಎಸೆಯುತ್ತಾರೆ. ಇದರಿಂದ ಲಿಂಗಕ್ಕೆ ಧಕ್ಕೆ ಉಂಟಾಗುತ್ತಿದೆ. ಮಂಡಳಿ ಅ ಧಿಕಾರಿಗಳು ಬಸವಣ್ಣನ ಐಕ್ಯ ಸ್ಥಳದ ಜಾಗದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು,ಲಿಂಗಕ್ಕೆ ಎಸೆಯುವ ನಾಣ್ಯವನ್ನು ಹುಂಡಿಗೆ ಹಾಕುವ ಕಾರ್ಯಕ್ಕೆ ವ್ಯಕ್ತಿಯೊಬ್ಬರನ್ನು ನೇಮಕ ಮಾಡಬೇಕು. ಐಕ್ಯ ಸ್ಥಳದ ಲಿಂಗಕ್ಕೆ ಪೈಬರ್ ಗ್ಲಾಸ್ ಅಳವಡಿಸಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ