ಢಾಣಕಶಿರೂರ: ಈಟಿ ಫೌಂಡೇಶನ್ ನೆರವು
Team Udayavani, May 9, 2020, 5:50 AM IST
ಬಾಗಲಕೋಟೆ: ಒಂದೇ ಗ್ರಾಮದಲ್ಲಿ 16 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿರುವ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮಸ್ಥರ ಆರೋಗ್ಯ ಹಿತರಕ್ಷಣೆಗಾಗಿ ಬಾಗಲಕೋಟೆಯ ಎಂ.ಎಸ್. ಈಟಿ ಫೌಂಡೇಶನ್ ನೆರವಿಗೆ ಧಾವಿಸಿದೆ.
ಕ್ವಾರಂಟೈನ್ನಲ್ಲಿರುವ ಢಾಣಕಶಿರೂರ ಗ್ರಾಮದ 300 ಕುಟುಂಬಗಳಿವೆ. ಎಂ.ಎಸ್. ಈಟಿ ಫೌಂಡೇಶನ್ನಿಂದ ಸ್ಯಾನಿಟೈಜರ್ ಉಚಿತವಾಗಿ ನೀಡಲಾಯಿತು. ಫೌಂಡೇಶನ್ ಕಾರ್ಯದರ್ಶಿಯೂ ಆಗಿರುವ ಆಗಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ಬಾದಾಮಿಯ ತಹಶೀಲ್ದಾರ್ ಸುಹಾಸ ಇಂಗಳೆ ಅವರಿಗೆ 300 ಕುಟುಂಬಕ್ಕೂ ವಿತರಿಸಲು ಸ್ಯಾನಿಟೈಜರ್ ಹಸ್ತಾಂತರಿಸಿದರು.
ಢಾಣಕಶಿರೂರ ಗ್ರಾಮಸ್ಥರು ಕೋವಿಡ್ ಕುರಿತು ಭಯಬೀಳದೇ ಎಚ್ಚರಿಕೆ ವಹಿಸಬೇಕು. ತಾಲೂಕು ಆಡಳಿತದ ಸೂಚನೆಯಂತೆ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ನಲ್ಲಿರಬೇಕು. ಮನೆಯಿಂದ ಹೊರಬರದೇ, ಕೊರೊನಾ ತೊಲಗಿಸಲು ಕೈ ಜೋಡಿಸಬೇಕು ಎಂದು ರಕ್ಷಿತಾ ಈಟಿ ಮನವಿ ಮಾಡಿದರು.
ಬಾದಾಮಿಯ ಪ್ರಮುಖರಾದ ಆರ್.ಎಫ್. ಬಾಗವಾನ, ಮಲ್ಲಣ್ಣ ಯಲಿಗಾರ, ಚಲವಾದಿ, ರಂಗು ಗೌಡರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ