3 ಸಾವಿರ ಹಾವು ರಕ್ಷಿಸಿದ ಡ್ಯಾನಿಗೆ ಕಚ್ಚಿದ ಹಾವು !
Team Udayavani, Jun 25, 2020, 1:28 PM IST
ಬಾಗಲಕೋಟೆ: ನಗರದಲ್ಲಿ ಹಲವು ಸಾಮಾಜಿಕ ಸೇವೆ, ಹೋರಾಟದ ಮೂಲಕ ಗಮನ ಸೆಳೆದ ಡ್ಯಾನಿಯಲ್ ನ್ಯೂಟನ್ಗೆ ಬುಧವಾರ ಮಧ್ಯಾಹ್ನ ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಗರ, ಗ್ರಾಮೀಣ ಭಾಗದಲ್ಲಿ ಹಾವುಗಳನ್ನು ರಕ್ಷಿಸಿ, ಕಾಡಿಗೆ ಬಿಡುವ ಕಾರ್ಯದಲ್ಲಿ ತೊಡಗಿದ್ದ ಡ್ಯಾನಿಯಲ್ ಅವರಿಗೆ ಈವರೆಗೆ ಒಟ್ಟು 67 ಬಾರಿ ಹಾವು ಕಚ್ಚಿದ್ದರೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಬುಧವಾರ ಮನೆಯೊಂದರ ಬಳಿ ಬಂದಿದ್ದ ಮಿಡಿ ನಾಗರಹಾವು ಹಿಡಿದು ಕಾಡಿಗೆ ಬಿಡಲು ತಯಾರಿಯಾಗಿದ್ದರು. ಹಾವು ಹಿಡಿದ ಬಳಿಕ ಮನೆಗೆ ಹೋಗಿ ಇಟ್ಟಿದ್ದರು. ಈ ವೇಳೆ, ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಅವರ ಸ್ನೇಹಿತರು, ಮನೆಯವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡ್ಯಾನಿಯಲ್ ನ್ಯೂಟನ್ ಅವರು, ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಹಾವುಗಳಿದ್ದರೂ ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಿದ್ದರು. ಇಲ್ಲಿಯ ವರೆಗೆ 3031 ಹಾವು ರಕ್ಷಣೆ ಮಾಡಿದ್ದಾರೆ.
ಅದರಲ್ಲಿ 997 ನಾಗರಹಾವು ಹಿಡಿದಿದ್ದರು. ಒಟ್ಟಾರೆ 67 ಬಾರಿ ಹಾವು ಕಚ್ಚಿತ್ತು. ಹಾವುಗಳ ರಕ್ಷಣೆಯಲ್ಲಿ ಅರಣ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾಗ, ತಾವು ಹಿಡಿದ ಹಾವುಗಳನ್ನೇ ಅರಣ್ಯ ಇಲಾಖೆ ಕಚೇರಿಯ ಬಾಗಿಲ ಬಳಿ ಬಿಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ