ತೇರದಾಳದಲ್ಲಿ ತಾಲೂಕು ಕಚೇರಿ ಆರಂಭಿಸಲು ಆಗ್ರಹ
Team Udayavani, Sep 29, 2019, 10:33 AM IST
ತೇರದಾಳ: ನೂತನ ತಾಲೂಕು ಕೇಂದ್ರ ತೇರದಾಳದಲ್ಲಿ ಎಲ್ಲ ಕಚೇರಿ ಆರಂಭಿಸಬೇಕು. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲರೂ ಹೋರಾಟ ಮಾಡಬೇಕಾಗಿದೆ. ಸೆ. 30ರಂದು ಕ್ಷೇತ್ರಾಧಿಪತಿ ಅಲ್ಲಮಪ್ರಭು ದೇವಸ್ಥಾನ ಆವರಣದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಬೇಕು ಎಂದು ತೇರದಾಳ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಭುಜಬಲಿ ಕೆಂಗಾಲಿ ಹೇಳಿದರು.
ನಗರದಲ್ಲಿ ನಡೆದ ತಾಲೂಕು ಹೋರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 50 ವರ್ಷಗಳ ಅವಿರತ ಹೋರಾಟದಿಂದ ತಾಲೂಕು ಕೇಂದ್ರ ದೊರಕಿದೆ. ಆ ಬಗ್ಗೆ ಯಾರಿಗೂ ಆತಂಕ ಬೇಡ. ಕಚೇರಿಗಳು ಶೀಘ್ರದಲ್ಲಿ ಆರಂಭವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ಸರಕಾರವನ್ನು ಆಗ್ರಹಿಸಲಾಗುವುದು. ಈ ಸಂಬಂಧ ಸೋಮವಾರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಇಲ್ಲಿನ ವಿಶೇಷ ತಹಶೀಲ್ದಾರ್ಗೆ ಸಲ್ಲಿಸಲಾಗುವುದು ಎಂದರು. ಪುರಸಭೆ ಮಾಜಿ ಅಧ್ಯಕ್ಷ ಮಹಾವೀರ ಕೊಕಟನೂರ ಮಾತನಾಡಿ, ಶಾಸಕರಿಂದ ಒತ್ತಡ ಹೇರಿಸಿ ಕೂಡಲೆ ಕಚೇರಿಗಳ ಆರಂಭಕ್ಕೆ ಯತ್ನಿಸೋಣ ಎಂದರು.
ಮನೋಜ ಯಾದವಾಡ, ರವಿ ಸಲಬನ್ನವರ, ಸಾತಬಚ್ಚೆ ಮಾತನಾಡಿ, ಪಕ್ಷಬೇಧ ಮರೆತು ಈ ಭಾಗದ ಎಲ್ಲ ಮುಖಂಡರು ತೇರದಾಳಕ್ಕೆ ಎಲ್ಲ ಕಚೇರಿಗಳು ತಕ್ಷಣ ಆರಂಭವಾಗುವಂತೆ ಹೋರಾಟ ಮಾಡಬೇಕು ಎಂದರು.
ಸೋಮವಾರ ರ್ಯಾಲಿ ಮುಖಾಂತರ ನಾಡಕಚೇರಿಗೆ ತೆರಳಿ, ವಿಶೇಷ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಗುವುದು. ರ್ಯಾಲಿಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದರು. ಕಲ್ಲಪ್ಪ ಕಬಾಡಗಿ, ಪ್ರಫುಲ್ದಾದಾ ದೇಶಪಾಂಡೆ, ಸತ್ಯಪ್ಪ ಮಹಿಷವಾಡಗಿ, ಮುರಿಗೆಪ್ಪ ಹನಗಂಡಿ, ಶಿವಪ್ಪ ಖವಾಸಿ, ಪೂನಾ ಮೇಸ್ತರಿ, ಸಿದ್ಧಪ್ಪ ಗಾಡಿವಡ್ಡರ, ಚಿಕ್ಕಪ್ಪ ಲೋಹಾರ, ತಿಮ್ಮಣ್ಣ ಗಾಡಿವಡ್ಡರ, ಸಿದ್ಧಪ್ಪ ತೆಗ್ಗಿನಮನಿ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ