ನೆರೆ ನಿರಾಶ್ರಿತರಿಗೆ ಕಿಟ್ ವಿತರಣೆ
Team Udayavani, Oct 12, 2019, 12:28 PM IST
ಜಮಖಂಡಿ: ಭೀಕರ ಪ್ರವಾಹದಿಂದ ತತ್ತರಿಸಿದ ಜನತೆಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯ. ಡಾ| ಬಸವಲಿಂಗ ಪಟ್ಟದೇವರ ಮಾರ್ಗದರ್ಶನದಲ್ಲಿ ನಿಮ್ಮ ಸುಖ-ದುಃಖದಲ್ಲಿ ನಾವುಗಳು ಇರುತ್ತೇವೆ. ನಿರಾಶ್ರಿತರು ಭಯ ಪಡುವ ಅವಶ್ಯಕತೆ ಇಲ್ಲವೆಂದು ಬಸವಕಲ್ಯಾಣದ ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮಿಗಳು ಹೇಳಿದರು.
ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ನಿರಾಶ್ರಿತರಿಗೆ ಕಿಟ್ ಮತ್ತು ವಿದ್ಯಾರ್ಥಿಗಳಿಗೆ ಶಾಲಾ ಉಪಕರಣಗಳನ್ನು ವಿತರಿಸಿ ಶ್ರೀಗಳು ಮಾತನಾಡಿದರು. ಉತ್ತರ ಕರ್ನಾಟಕದ ಈ ಭಾಗದ ಭೀಕರ ಅತಿವೃಷ್ಟಿ-ಅನಾವೃಷ್ಟಿ ಸಂಭವಿಸಿದೆ. ಪ್ರವಾಹದ ನಂತರ ರೈತ ಹೊಸ ದೃಷ್ಟಿಕೋನದಿಂದ ವ್ಯವಸಾಯ ಸಾಗುವಳಿ ಮಾಡಬೇಕು. ವಿವಿಧ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ನೆರೆಯನ್ನು ಸವಾಲಾಗಿ ಸ್ವೀಕರಿಸಬೇಕು. ಇದು ಪಾಪವಲ್ಲ. ಇದೊಂದು ಪುಣ್ಯವೆಂದು ಭಾವಿಸಬೇಕು. ನಮಗೆ ಹೊಸಜೀವನ ಕಟ್ಟಿಕೊಳ್ಳಲು ಪಾಠ ಕಲಿಸಿದಂತಾಗಿದೆ. ಜೀವನದಲ್ಲಿ ಬಂದದ್ದನ್ನು ಅನುಭವಿಸಲೇಬೇಕು. ಭೀಕರ ಪ್ರವಾಹದಿಂದ ಜೀವನದಲ್ಲಿ ಹೊಸ ಚಿಂತನೆ-ಯೋಜನೆಗಳನ್ನು ರೂಪಿಸಿಕೊಂಡು ಜೀವನ ರೂಪಿಸುವ ಕಾರ್ಯದಲ್ಲಿ ತೊಡಗಬೇಕು ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಮಾತನಾಡಿ, ಜೀವನದಲ್ಲಿ ಕಷ್ಟ-ಸುಖಗಳನ್ನು ಸರಿಸಮಾನ ಹಂಚಿಕೊಂಡು ಸಂಸಾರ ಸಾಗಿಸಬೇಕಾಗಿದೆ. ನಿಸರ್ಗ ವಿಕೋಪದಲ್ಲಿ ಸಿಕ್ಕಿರುವ ನಾವುಗಳು ಮೈಗೂಡಿಸಿಕೊಂಡು ಜೀವನ ನಡೆಸಬೇಕಾಗಿದೆ. ವರ್ಷವಿಡೀ ರೈತ ತನ್ನ ಹೊಲದಲ್ಲಿ ಶ್ರಮಪಟ್ಟು ದುಡಿಯಲು ಭಗವಂತ ಹೀಗೆ ಮಾಡಿರಬಹುದು. ಪ್ರವಾಹಕ್ಕೀಡಾದವರ ಸೇವೆ ಮಾಡುವದು ಪುಣ್ಯದ ಕೆಲಸ. ಅದನ್ನು ಪ್ರತಿಯೊಬ್ಬರು ನಿರ್ವಹಿಸಬೇಕು ಎಂದರು.
ಗುರುಬಸವ ಪಟ್ಟದೇವರು, ಗ್ರಾಪಂ ಸದಸ್ಯ ನರಸಿಂಹ ಪಾಟೀಲ, ಅಣ್ಣಪ್ಪ ಅಂಬಲಿ, ರುದ್ರಗೌಡ ಪಾಟೀಲ, ಆರ್.ಎಸ್. ಹೊನಗೌಡ ಸಹಿತ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್