ಪ್ರವಾಹ ಪ್ರಹಾರಕ್ಕೆ ಜಿಲ್ಲೆ ಜನ ತತ್ತರ

•ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಬಂದ್‌ •234 ಜನರು-216 ಜಾನುವಾರು ಸ್ಥಳಾಂತರ •12 ಸೇತುವೆ ಜಲಾವೃತ

Team Udayavani, Aug 6, 2019, 12:13 PM IST

bk-tdy-1

ಬನಹಟ್ಟಿ: ಕುಲಹಳ್ಳಿ -ಹಿಪ್ಪರಗಿ ರಸ್ತೆ ಜಲಾವೃತಗೊಂಡಿದೆ.

ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಿಲ್ಲೆಯ ಕೃಷ್ಣೆ ಹಾಗೂ ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿ ಹರಿವು ದಿನೇ ದಿನೇ ಅಪಾಯದ ಮುನ್ಸೂಚನೆ ನೀಡುತ್ತಿದ್ದು, ಪ್ರವಾಹ ಪರಿಸ್ಥಿತಿಯನ್ನು ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಮವಾರ ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲಿಸಿದರು.

ಕೃಷ್ಣಾ ನದಿಗೆ 2.64 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಇದರಿಂದ ಜಮಖಂಡಿ ತಾಲೂಕಿನ ಆರು ಸೇತುವೆಗಳು ಜವಾವೃತಗೊಂಡು, ಸಂಚಾರ ಸ್ಥಗಿತಗೊಂಡಿವೆ. ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ನಂ.34ರ (ಚಿಕ್ಕಪಡಸಲಗಿ ಬಳಿ) ಮೇಲೆ ನೀರು ಹರಿಯಲು ಅರ್ಧ ಅಡಿ ಬಾಕಿ ಉಳಿದಿದ್ದು, ರವಿವಾರ ರಾತ್ರಿಯಿಂದಲೇ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಹೆದ್ದಾರಿ ಸುತ್ತ 144 ಕಲಂ ಅಡಿ ಜಮಖಂಡಿ ತಹಶೀಲಾರ್‌ ಪ್ರಶಾಂತ ಚನಗೊಂಡ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಬೈಕ್‌ ಸಹಿತ ಭಾರಿ ವಾಹನ, ಗುಂಪು ಗುಂಪಾಗಿ ಜನರ ಸಂಚಾರವನ್ನು ಜು.10ರ ವರೆಗೆ ನಿಷೇಧಿದ್ದಾರೆ.

12 ಸೇತುವೆ ಜಲಾವೃತ: ಜಮಖಂಡಿ ತಾಲೂಕಿನ ಕಂಕಣವಾಡಿ-ಗುಹೇಶ್ವರ ಗಡ್ಡಿ, ಮುತ್ತೂರ-ಮುತ್ತೂರ ಗಡ್ಡಿ, ಶೂರ್ಪಾಲಿ-ತುಬಚಿ, ಟಕ್ಕಳಕಿ-ತುಬಚಿ ಹಾಗೂ ಧಾರವಾಡ-ವಿಜಯಪುರ ಸೇತುವೆ ಜಲಾವೃತಗೊಂಡಿದೆ. ಜಮಖಂಡಿ-ಜತ್ತ ರಾಜ್ಯ ಹೆದ್ದಾರಿ ಕೂಡ ಬಂದ್‌ ಆಗುವ ಭೀತಿ ಎದುರಾಗಿದ್ದು, ಈ ಹೆದ್ದಾರಿಯ ಸೇತುವೆ ಪೂರ್ಣ ಜಲಾವೃತಗೊಂಡರೆ ಸುಮಾರು 25 ಗ್ರಾಮಗಳ ರಸ್ತೆ ಸಂಪರ್ಕ ಕಡಿದುಕೊಳ್ಳುವ ಭೀತಿ ಉಂಟಾಗಿದೆ.

ರಬಕವಿ-ಬನಕಟ್ಟಿ ತಾಲೂಕಿನ ಮದನಮಟ್ಟಿ-ರಬಕವಿ ಸೇತುವೆ ಸೋಮವಾರ ಜಲಾವೃತಗೊಂಡಿದ್ದು, ಸಂಚಾರ ಬಂದ್‌ ಆಗಿದೆ. ಅಲ್ಲದೇ ಅಸ್ಕಿ ಗ್ರಾಮ ಭಾಗಶಃ ಜಲಾವೃತಗೊಂಡಿದ್ದು, ಮಂಗಳವಾರದ ಹೊತ್ತಿಗೆ ಇನ್ನಷ್ಟು ನೀರು ಆವರಿಸಿಕೊಳ್ಳುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 12 ಸೇತುವೆಗಳು ಜಲಾವೃತಗೊಂಡಿವೆ. ಮಹಾಲಿಂಗಪುರ ಭಾಗದಲ್ಲಿ ಮೂರು, ರಬಕವಿ-ಬನಹಟ್ಟಿ ಭಾಗದಲ್ಲಿ 1, ಜಮಖಂಡಿ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ 8 ಸೇತುವೆಗಳು ನೀರಿನಲ್ಲಿ ಮುಳುಗಿದ್ದರಿಂದ ಸಂಚಾರ ಸ್ಥಗಿತಗೊಂಡಿವೆ. ಇದರಿಂದ ಜಮಖಂಡಿ ತಾಲೂಕಿನ 23 ಹಳ್ಳಿಗಳಿಗೆ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ, ಸೋಮವಾರದಿಂದ ಸಂಪೂರ್ಣ ಸ್ಥಗಿತಗೊಂಡಿದೆ.

ಎಮ್ಮೆ ಸಾವು-ಬೆಕ್ಕು ಸಾವು: ಕೃಷ್ಣಾ ನದಿ ಪ್ರವಾಹದಿಂದ ಕಂಕಣವಾಡಿಯ ಬಾಳಪ್ಪ ನಿಂಗಪ್ಪ ಕಿಸ್ತಿ ಎಂಬ ರೈತರ ಎಮ್ಮೆ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಕಂಕಣವಾಡಿ ಸುತ್ತ ನೀರು ಆವರಿಸಿಕೊಂಡಿದ್ದರಿಂದ ಎಮ್ಮೆಯನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ವೇಳೆ, ನೀರಿನಲ್ಲಿ ಮುಳುಗಿ ಸತ್ತಿದೆ.

ಮುತ್ತೂರ ಗ್ರಾಮದ 31 ಕುಟುಂಬಗಳನ್ನೂ ಮೈಗೂರ ಪುನರ್‌ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಜಾನುವಾರುಗಳ ಸ್ಥಳಾಂತರ ಕಾರ್ಯವನ್ನು ತಾಲೂಕು ಆಡಳಿತ ನಡೆಸುತ್ತಿದೆ.

234 ಜನರ ಸ್ಥಳಾಂತರ: ಆಲಗೂರ ಗ್ರಾಮದ ಗೌಡರ ಗಡ್ಡಿ ತೋಟದ ವಸ್ತಿಯ ಒಟ್ಟು 78 ಕುಟುಂಬಗಳ 234 ಜನರು, 216 ಜಾನುವಾರುಗಳನ್ನು ಆಲಗೂರ ಪುನರ್‌ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ಒಂದು ಗಂಜಿ ಕೇಂದ್ರ ಆರಂಭಿಸಿದ್ದು, ಜನರಿಗೆ ಊಟ-ಕುಡಿಯುವ ನೀರು, ಆರೋಗ್ಯ ತಪಾಸಣೆ ಒದಗಿಸಲಾಗುತ್ತಿದೆ. ಜಾನುವಾರುಗಳಿಗೆ ತಾಲೂಕು ಆಡಳಿತದಿಂದ ಮೇವು ಒದಗಿಸುವ ಕಾರ್ಯ ನಡೆದಿದೆ.

•ಆಲಗೂರ ಗೌಡರ ಗಡ್ಡಿಯ 234 ಜನ-216 ಜಾನುವಾರು ಸುರಕ್ಷಿತ ಸ್ಥಳಕ್ಕೆ

•ಮತ್ತಷ್ಟು ಏರಿದ ಕೃಷ್ಣೆಯ ನೀರಿನ ಹರಿವು

•ಈ ವರೆಗೆ 12 ಸೇತುವೆ ರಸ್ತೆ ಸಂಚಾರ ಸ್ಥಗಿತ

•23 ಹಳ್ಳಿಗಳಿಗೆ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಸ್ಥಗಿತ

•ನಾಲ್ಕು ಹಳ್ಳಿಗಳು ಸಂಪೂರ್ಣ ನಡುಗಡ್ಡೆ

•ಎರಡು ಗಂಜಿ ಕೇಂದ್ರ ಆರಂಭ

•ನಡುಗಡ್ಡೆ ಹಳ್ಳಿಗೆ ಹೋಗಲು 7 ಬೋಟ್ ವ್ಯವಸ್ಥೆ

•ಜಿಲ್ಲೆಯ ಪ್ರವಾಹಕ್ಕೆ ಎಮ್ಮೆ ಮೊದಲ ಬಲಿ

•ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಭೀತಿ

•ಹೆದ್ದಾರಿ ಸಂಚಾರ ನಿಷೇಧ

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ವೀಣಕ್ಕನನ್ನು ಜತೆಗೆ ಕರೆದೊಯ್ಯುವೆ: ಸಂಯುಕ್ತಾ ಪಾಟೀಲ್‌

Lok Sabha Elections; ವೀಣಕ್ಕನನ್ನು ಜತೆಗೆ ಕರೆದೊಯ್ಯುವೆ: ಸಂಯುಕ್ತಾ ಪಾಟೀಲ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.