ಕೊಂಬೆ ಸವರುವ ಕಾಮಗಾರಿಗೆ ಚಾಲನೆ
Team Udayavani, Dec 15, 2019, 3:57 PM IST
ಬಾಗಲಕೋಟೆ: ತಾಲೂಕಿನ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನವನಗರದ ಯುನಿಟ್-1ರಲ್ಲಿಯ ಮುಖ್ಯ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಮತ್ತು ಬೀದಿ ಬದಿ ದೀಪಗಳಿಗೆ ಅಡತಡೆ ಉಂಟು ಮಾಡುವ ಮರ ಹಾಗೂ ಕೊಂಬೆ ಸವರುವ ಕಾಮಗಾರಿಗೆ ಶಾಸಕ ಡಾ|ವೀರಣ್ಣ ಚರಂತಿಮಠ ಚಾಲನೆ ನೀಡಿದರು.
ಶನಿವಾರ ನವನಗರದ ಸೆಕ್ಟರ್ ನಂ. 43ರಲ್ಲಿ ಮರದ ಕೊಂಬೆಗಳ ಸವರುವ ಕಾಮಗಾರಿಗೆ ಚಾಲನೆ ಮಾತನಾಡಿದ ಅವರು, ತಾಲೂಕಿನ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಮತ್ತು ಕೃಷ್ಣ ಭಾಗ್ಯಜಲ ನಿಗಮ ನಿಯಮಿತ ಅರಣ್ಯ ವಿಭಾಗದ ಸಹಯೋಗದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. 60.64 ಲಕ್ಷ ರೂ.ಗಳಿಗೆ ಟೆಂಡರ್ ನೀಡಲಾಗಿದ್ದು, ಗುತ್ತಿಗೆದಾರರು ನಿಗದಿತ ಅವಧಿಯೊಳಗಾಗಿ ಮರದ ಕೊಂಬೆ ಸವರುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ನಾಗರತ್ನ ಹೆಬ್ಬಳ್ಳಿ, ಶಾಂತಾ ಹನಮಕ್ಕನವರ, ಬಿಟಿಡಿಎ ಮುಖ್ಯ ಎಂಜಿನಿಯರ್ ವಾಸನದ, ಮಾಜಿ ಬಿಟಿಡಿಎ ಅಧ್ಯಕ್ಷ ಜಿ.ಎನ್. ಪಾಟೀಲ, ಭಾಗೀರತಿ ಪಾಟೀಲ, ಬಸವರಾಜ ಹೆಬ್ಬಳ್ಳಿ, ರಾಜು ಗೌಳಿ, ಶಂಕರ ಕೆಂಚನ್ನವರ, ರಾಜು ರೆವಣಕರ, ರಾಜು ನಾಯಕರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು