ಪರಿಸರವೇ ಮಾನವ ಬದುಕಿನ ಜೀವನಾಡಿ
ಗಾಳಿ ಮಲೀನವಾಗದಂತೆ ಎಚ್ಚರ ವಹಿಸಿ | ಮನೆಯ ಅಕ್ಕ ಪಕ್ಕ ಕೈ ತೋಟ ನಿರ್ಮಾಣ ಮಾಡಿ
Team Udayavani, Jun 6, 2021, 6:06 PM IST
ಬಾಗಲಕೋಟೆ: ಪರಿಸರದ ಮೇಲೆ ತೋರುವ ಕಾಳಜಿ, ದಿನನಿತ್ಯ ತೋರಿದಿದ್ದರೆ ಪ್ರಸ್ತುತ ಸನ್ನಿವೇಶದಲ್ಲಿ ಮಹಾಮಾರಿ ಕೊರೊನಾ ರೋಗಕ್ಕೆ ಸಿಲುಕಿ ಪ್ರಾಣವಾಯು ಸಿಗದೆ ಪ್ರಾಣಪಕ್ಷಿ ಹಾರುತ್ತಿರಲಿಲ್ಲ ಎಂದು ರಾಠೊಡ ಮಾರ್ಷಲ್ ಆರ್ಟ್ಸ್ ಸ್ಕೀಲ್ ಯೂನಿಯನ್ ಸಂಸ್ಥಾಪಕ ಎಸ್.ಆರ್.ರಾಠೊಡ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರವೇ ನಮ್ಮ ಬದುಕಿನ ಜೀವನಾಡಿಯಾಗಿದ್ದು, ಅದನ್ನು ಸ್ವತ್ಛವಾಗಿ ಇಟ್ಟುಕೊಳ್ಳುವ ಕರ್ತವ್ಯ ನಮ್ಮದಾಗಿದೆ. ನಮಗೆ ಸಾಧ್ಯವಾದಷ್ಟು ಹೆಚ್ಚೆಚ್ಚು ಗಿಡಮರ ಬೆಳೆಸುವುದು, ಮನೆಯ ಅಕ್ಕ ಪಕ್ಕ ಕೈ ತೋಟ ನಿರ್ಮಾಣ ಮಾಡುವುದು, ಅವುಗಳಿಗೆ ಸೂಕ್ತ ರೀತಿಯಲ್ಲಿ ಪೋಷಿಸಿದರೆ ಹಲವಾರು ಗಿಡಮರಗಳು ಆರ್ಯುವೇದಿಕ್ ಗಿಡಮೂಲಿಕೆಗಳಾಗಿ ಬಳಸಬಹುದು ಎಂದರು. ಗಾಳಿ ಮಲೀನವಾಗದಂತೆ ನೋಡಿಕೊಳ್ಳಬೇಕು. ಹೊಗೆ, ಧೂಳು ಮತ್ತಿತರ ಕಾರಣಗಳಿಂದ ಗಾಳಿಯು ವಿಷಾನಿಲವಾಗುತ್ತದೆ. ಆದ್ದರಿಂದ ಗಾಳಿಯನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು.
ನೀರನ್ನು ಸುಗಮವಾಗಿ ಹರಿದುಹೋಗುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಸಮರ್ಪಣಾ ಸೇವಾ ತಂಡ: ವಿದ್ಯಾಗಿರಿಯ ಸಮರ್ಪಣಾ ಸೇವಾ ತಂಡದಿಂದ ಗದ್ದನಕೇರಿ ಇಟಗಿ ಭೀಮವ್ವನ ದೇವಾಲಯದಲ್ಲಿ ಸಸಿ ನೆಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಶಂಕರ ದಾಸಣ್ಣನವರ ಹಾಜರಿದ್ದರು. ಶಿವಾನಂದ ಬಡಿಗೇರ, ರಂಜೀತ ಕುಲಕರ್ಣಿ, ಜಿ ಸುಭಾಷಿಣಿ, ಪ್ರಹ್ಲಾದ ದಾಸರ, ಹುಚ್ಚಪ್ಪ ಬೀಳಗಿ, ರಾಘವೆಂದ್ರ ಮಾನೆ, ಚನ್ನಬಸು, ನಿತೀಶ ಕುಲಕರ್ಣಿ, ಶ್ರೀನಿವಾಸ ಫಡ್ನಿಸ್ ಪಾಲ್ಗೊಂಡಿದ್ದರು.