ಪ್ರವಾಹ ಪರಿಹಾರ; ಸರ್ಕಾರಕ್ಕೆ ಜಿಪಂ ನಿಯೋಗ
ಸಿಇಒ ವಿರುದ್ಧ ಕೈ-ಕಮಲ ಸದಸ್ಯರ ಆಕ್ರೋಶ ಶೇ.1 ಕಮಿಷನ್ ಬಗ್ಗೆ ಬಿಸಿ-ಬಿಸಿ ಚರ್ಚೆ
Team Udayavani, Aug 17, 2019, 10:14 AM IST
ಬಾಗಲಕೋಟೆ: ಎಂವಿಎಸ್ ಯೋಜನೆಯಡಿ ಭ್ರಷ್ಟಾಚಾರ ನಡೆದಿದ್ದು, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ ಸದಸ್ಯ ಶಶಿಕಾಂತ ಪಾಟೀಲ ಧರಣಿ ನಡೆಸಿದರು.
ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹದಿಂದ ಹಾನಿಗೀಡಾದ ಗ್ರಾಮಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಪಂನ ಎಲ್ಲ ಸದಸ್ಯರು ಒಳಗೊಂಡ ನಿಯೋಗ, ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಒಕ್ಕೋರಲ ಒತ್ತಾಯ ಕೇಳಿ ಬಂತು.
ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅಧ್ಯಕ್ಷರಾದ ಬಳಿಕ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯರಾದ ಹೂವಪ್ಪ ರಾಠೊಡ, ಶಿವಾನಂದ ಪಾಟೀಲ, ಶರಣಪ್ಪ ಹಂಚಿನಾಳ, ಶಶಿಕಲಾ ಯಡಹಳ್ಳಿ, ಹನಮಂತ ಕಾಖಂಡಕಿ, ಹುನಗುಂದ ತಾಪಂ ಅಧ್ಯಕ್ಷ ಮಹಾಂತೇಶ ಕಡಿವಾಲ ಮುಂತಾದವರು ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಜತೆಗೆ ಅವರಿಗೆ ಪುನರ್ ಬದುಕು ಕಲ್ಪಿಸಲು ಎಲ್ಲ ರೀತಿಯ ನೆರವಾಗಬೇಕು ಎಂದು ಆಗ್ರಹಿಸಿದರು.
ನೆರೆ ಹಾವಳಿ ಜಿಲ್ಲೆಯಲ್ಲಿ ಕರೆದ ಸಾಮಾನ್ಯ ಸಭೆಯಲ್ಲಿ ಸಂತ್ರಸ್ತರ ಸಮಸ್ಯೆ, ಕೈಗೊಳ್ಳಬೇಕಾದ ಪರಿಹಾರ, ಸಂತ್ರಸ್ತರಿಗೆ ಜಿಪಂನಿಂದ ನೀಡಬೇಕಾದ ನೆರವು ಸಹಿತ ನೆರೆ ಹಾವಳಿ ಕುರಿತು ಪ್ರಮುಖ ಚರ್ಚೆ ನಡೆಯುವ ಬದಲು, ಜಿಪಂನಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ, ಜಿಪಂ ಸಿಇಒ ವಿರುದ್ಧ ಅಸಮಾಧಾನಗಳ ಬಗ್ಗೆಯೇ ಸಭೆಯಲ್ಲಿ ಚರ್ಚೆ ನಡೆದವು. ಗುಡೂರ ಎಸ್ಸಿ ಗ್ರಾಮ ಒಳಗೊಂಡ ಇಲಾಳ ಮತ್ತು ಇತರೆ 16 ಹಳ್ಳಿಗಳ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಜುಲೈ 31ಕ್ಕೆ ನೀರು ಕೊಡುವುದಾಗಿ ಸಿಇಒ ಹೇಳಿದ್ದರು. ಈ ಕುರಿತು ಪ್ರಚಾರವೂ ಪಡೆದಿದ್ದರು. ಆದರೆ, ಈವರೆಗೆ ನೀರು ಕೊಟ್ಟಿಲ್ಲ. ಪ್ರವಾಹದಿಂದ ಜನರು ನಲುಗಿದ್ದಾರೆ. ಕುಡಿಯಲು ನೀರಿಲ್ಲ. ಈಗಾಗಲ 43 ಕೋಟಿ ಬಿಲ್ನ್ನು ಗುತ್ತಿಗೆದಾರರಿಗೆ ಕೊಡಲಾಗಿದೆ. ಕಾಮಗಾರಿ ಪೂರ್ಣಗೊಂಡಿಲ್ಲ. ಆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಬಿಜೆಪಿ ಸದಸ್ಯ ಶಶಿಕಾಂತ ಪಾಟೀಲ, ಧರಣಿ ಕೂಡ ನಡೆಸಿದರು.
ಶೇ.1 ಕಮೀಷನ್ ಕೊಟ್ರೆ ಬಿಲ್ ಕೊಡ್ತಾರೆ: ಬಿಜೆಪಿ ಹಿರಿಯ ಸದಸ್ಯ ಹೂವಪ್ಪ ರಾಠೊಡ, ಪುನರ್ವಸತಿ ಕೇಂದ್ರಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆರ್ಡಿಪಿಆರ್ನಿಂದ 11.60 ಕೋಟಿ ಅನುದಾನ ಮಾರ್ಚ್ ನಲ್ಲೇ ಬಿಡುಗಡೆಗೊಂಡರೂ ಗುತ್ತಿಗೆದಾರರಿಗೆ ಬಿಲ್ ಕೊಡಲಿಲ್ಲ. ಹೀಗಾಗಿ ಆ ಹಣ ಮರಳಿ ಹೋಗಿತ್ತು. ಗುತ್ತಿಗೆದಾರರೇ ಅವರಿವರ ಕಾಲು ಹಿಡಿದು ಆ ಹಣ ಮರಳಿ ಬಿಡುಗಡೆ ಮಾಡಿಸಿದ್ದಾರೆ. ಈಗ ಬಿಲ್ ನೀಡಲು ಜಿಪಂನಲ್ಲಿ ಶೇ.1ರಷ್ಟು ಕಮೀಷನ್ ಕೊಟ್ಟಾಗಲೇ ಎರಡು ದಿನಗಳ ಹಿಂದೆ ಬಿಲ್ ಕೊಡಲಾಗಿದೆ. ಮೂರು ತಿಂಗಳು 11.60 ಕೋಟಿ ಜಿಪಂನಲ್ಲಿತ್ತು. ಅದರ ಬಡ್ಡಿ ಹಣ ಎಲ್ಲಿ ಹೋಯಿತು. ಇದಕ್ಕೆ ಯಾರು ಸಂಬಂಧ. ಕಮೀಷನ್ ಕೊಟ್ಟರೆ ಮಾತ್ರ ಜಿಪಂನಲ್ಲಿ ಬಿಲ್ ಕೊಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಕುರಿತು ಸುಮಾರು ಅರ್ಧ ಗಂಟೆಗಳ ಕಾಲ ಬಿಸಿ-ಬಿಸಿ ಚರ್ಚೆ ನಡೆಯಿತು. ಇದಕ್ಕೆ ಉತ್ತರಿಸಿದ ಜಿಪಂ ಸಿಇಒ ಗಂಗೂಬಾಯಿ ಮಾನಕರ, 11.60 ಕೋಟಿ ಅನುದಾನ ಸರ್ಕಾರದ ಪಿಡಿ ಖಾತೆಯಲ್ಲಿತ್ತು. ಚುನಾವಣೆ ನೀತಿ ಸಂಹಿತೆ ಇದ್ದಾಗ ಅನುದಾನ ಕೊಡಲು ವಿಳಂಬವಾಗಿತ್ತು. ಅಲ್ಲದೇ ಹಣ ಪಿಡಿ ಖಾತೆಗೆ ಹಾಕಿದ ಬಳಿಕ, ಸರ್ಕಾರದ ಮಟ್ಟದಲ್ಲಿ ಅಕೌಂಟ್ ಲಾಕ್ ಮಾಡಲಾಗಿತ್ತು. ಇದರಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಆಗಿರಲಿಲ್ಲ. ಬಳಿಕ ಆ ಹಣ ಸರ್ಕಾರ ಮರಳಿ ಜಮೆ ಮಾಡಿಕೊಂಡಿತ್ತು. ಈಗ ಪುನಃ ಅನುದಾನ ಬಂದಿದ್ದು, ಗುತ್ತಿಗೆದಾರರಿಗೆ ಬಿಲ್ ನೀಡಲಾಗಿದೆ. ಅವರಿಂದ ಶೇ.1ರಷ್ಟು ಕಮೀಷನ್ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?