ಇಳಕಲ್ಲನಲ್ಲಿ ನಾಲ್ಕು ಜಿಪಂ ಕ್ಷೇತ್ರ ಉದಯ

ಎರಡು ತಾಲೂಕು ಸೇರಿ ಇದ್ದ ಆರು ಕ್ಷೇತ್ರಗಳ ವಿಂಗಡಣೆ, ಹೊಸ ತಾಲೂಕು: ಸ್ಥಾನ ಪಡೆದ ನಂದವಾಡಗಿ!

Team Udayavani, Mar 13, 2021, 3:30 PM IST

ಇಳಕಲ್ಲನಲ್ಲಿ ನಾಲ್ಕು ಜಿಪಂ ಕ್ಷೇತ್ರ ಉದಯ

ಬಾಗಲಕೋಟೆ: ಹುನಗುಂದ ತಾಲೂಕಿನಿಂದ ಬೇರ್ಪಟ್ಟು ಹೊಸ ತಾಲೂಕು ಸ್ಥಾನಮಾನ ಪಡೆದ ಇಳಕಲ್ಲ ತಾಲೂಕಿನಲ್ಲಿಈ ಬಾರಿ ನಾಲ್ಕು ಜಿಪಂ ಕ್ಷೇತ್ರಗಳ ರಚನೆಯಾಗಲಿದ್ದು, ಅದರಲ್ಲಿಹೊಸದಾಗಿ ನಂದವಾಡಗಿ ಸ್ಥಾನ ಪಡೆಯಲಿದೆ.

ಹೌದು, ಹೊಸ ತಾಲೂಕು ರಚನೆಯ ಬಳಿಕ ಇದೇ ಮೊದಲ ಬಾರಿಗೆ ಜಿಪಂ, ತಾಪಂ ಚುನಾವಣೆ ನಡೆಯಲಿದ್ದು,ಹಾಲಿ ಇರುವ ಸದಸ್ಯರ ಅವಧಿ ಈ ತಿಂಗಳ ಕೊನೆಗೊಳ್ಳಲಿದೆ.ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆಇದ್ದು, ಜಿಪಂ, ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಕಾರ್ಯನಡೆಯುತ್ತಿದೆ. ಜಿಲ್ಲೆಯಿಂದ ಇಳಕಲ್ಲ ತಾಲೂಕಿನಡಿ ನಾಲ್ಕುಜಿಪಂ ಹಾಗೂ 9 ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಸ್ತಾವನೆ ರಾಜ್ಯ ಚುನಾವಣೆ ಆಯೋಗಕ್ಕೆಕಳುಹಿಸಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಜಿಲ್ಲೆಯಿಂದ ಕಳುಹಿಸಿದ ಪ್ರಸ್ತಾವನೆಯಲ್ಲಿಕೆಲ ತಿದ್ದುಪಡಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

9 ತಾಪಂ ರಚನೆ: ಇಳಕಲ್ಲ ತಾ.ಪಂ. ವ್ಯಾಪ್ತಿಯಡಿ ಕರಡಿ,ನಂದವಾಡಗಿ, ಕಂದಗಲ್ಲ, ಹಿರೇಶಿಂಗನಗುತ್ತಿ, ಬಲಕುಂದಿ,ಹಿರೇಕೊಡಗಲಿ, ಗುಡೂರ ಎಸ್‌.ಸಿ, ಕೆಲೂರ ಹಾಗೂ ವಡಗೇರಿ ತಾ.ಪಂ. ಕ್ಷೇತ್ರಗಳನ್ನು ಸಧ್ಯ ತಾತ್ಕಾಲಿಕವಾಗಿ ರಚಿಸಲಾಗಿದೆ. ಪ್ರತಿಯೊಂದು ತಾಪಂ ಕ್ಷೇತ್ರಗಳು, 8ರಿಂದ 15 ಸಾವಿರಮತದಾರರನ್ನು ಹೊಂದಿವೆ. ಅವುಗಳಡಿ ಗ್ರಾಪಂ ಹಾಗೂಹಳ್ಳಿಗಳ ಸೇರಿಸುವ ಪ್ರಸ್ತಾವನೆಯೂ ಸಿದ್ಧಗೊಂಡಿದೆಯಾದರೂ ಅದನ್ನು ಆಯೋಗ ಅಧಿಕೃತಗೊಳಿಸುವ ಕಾರ್ಯ ಬಾಕಿ ಇದೆ.ಎರಡು ತಾಲೂಕಿನಲ್ಲಿ ಆರು ಕ್ಷೇತ್ರ: ಕಳೆದ 2015-16ನೇ ಸಾಲಿನಲ್ಲಿ ನಡೆದ ಜಿ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ

ಜಿಲ್ಲೆಯಾದ್ಯಂತ ಒಟ್ಟು 36 ಕ್ಷೇತ್ರಗಳಿದ್ದವು. ಆಗ ಅವಿಭಜಿತ (ಇಳಕಲ್ಲ ಸೇರಿ) ಹುನಗುಂದ ತಾಲೂಕಿನಲ್ಲಿ ಬಲಕುಂದಿ, ಧನ್ನೂರ, ಗುಡೂರ, ಕಂದಗಲ್‌,ಕೂಡಲಸಂಗಮ, ಐಹೊಳೆ ಸೇರಿ ಒಟ್ಟು ಆರುಜಿ.ಪಂ. ಕ್ಷೇತ್ರಗಳಿದ್ದವು. ಇದೀಗ ಇಳಕಲ್ಲ ಪ್ರತ್ಯೇಕತಾಲೂಕಾಗಿದ್ದು, ಈ ತಾಲೂಕಿನಲ್ಲಿಯೇ ನಾಲ್ಕುಕ್ಷೇತ್ರ ರಚನೆ ಮಾಡಲಾಗುತ್ತಿದೆ. ಈ ಹಿಂದೆ ಇದ್ದ ಕಂದಗಲ್‌, ಬಲಕುಂದಿ, ಗುಡೂರ ಎಸ್‌ಸಿ ಜತೆಗೆ ಇದೇ ಮೊದಲ ಬಾರಿಗೆ ನಂದವಾಡಗಿಯನ್ನು ಹೊಸ ಜಿಪಂ ಕ್ಷೇತ್ರವನ್ನಾಗಿ ರಚಿಸಲಾಗುತ್ತಿದೆ.

ಮೀಸಲಾತಿ ಕೈ ಚಳಕಕ್ಕೆ ಪ್ರಭಾವ: ನಂದವಾಡಗಿ ಹೊಸ ಕ್ಷೇತ್ರ ಸಹಿತ ಇಳಕಲ್ಲ ತಾಲೂಕಿನ ನಾಲ್ಕು ಜಿ.ಪಂ. ಕ್ಷೇತ್ರಗಳಿಗೆಮೀಸಲಾತಿ ನಿಗದಿಯಲ್ಲಿ ಭಾರಿ ಪ್ರಭಾವ ಬೀರು ಕಾರ್ಯನಡೆಯುತ್ತಿದೆ ಎನ್ನಲಾಗಿದೆ. ಕಳೆದ ಬಾರಿ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ವೇಳೆ, ಇಲ್ಲಿನವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದವರು ಕಾಂಗ್ರೆಸ್‌ನವಿಜಯಾನಂದ ಕಾಶಪ್ಪನವರ. ಆಗ ರಾಜ್ಯದಲ್ಲಿ ಕಾಂಗ್ರೆಸ್‌ಸರ್ಕಾರ ಕೂಡ ಅಧಿಕಾರದಲ್ಲಿತ್ತು. ಹೀಗಾಗಿ ಕಾಶಪ್ಪನವರ,ಇಚ್ಛಿಸಿದ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿನಿಗದಿಯಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು. ಇದೀಗ ರಾಜ್ಯದಲ್ಲಿಬಿಜೆಪಿ ಸರ್ಕಾರವಿದ್ದು, ದೊಡ್ಡನಗೌಡ ಪಾಟೀಲರುಶಾಸಕರಾಗಿದ್ದಾರೆ. ಹೀಗಾಗಿ ಈ ಬಾರಿ ದೊಡ್ಡನಗೌಡರಅಣತಿಯಂತೆಯೇ ಕ್ಷೇತ್ರಗಳ ರಚನೆಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತಿದೆ.

ನಂದವಾಡಗಿ ಜಿಪಂ ಕ್ಷೇತ್ರ :

ಇಳಕಲ್ಲ ತಾಲೂಕಿನಲ್ಲಿ ಹೊಸದಾಗಿ ರಚನೆಯಾದ ನಂದವಾಡಗಿ ಜಿ.ಪಂ. ಕ್ಷೇತ್ರ ವ್ಯಾಪ್ತಿಗೆ ನಂದವಾಡಗಿ,ಕರಡಿ, ಅಮರವಾಡಗಿ ಪು.ಕೇ, ಚಿನ್ನಾಪುರ ಎಸ್‌.ಕೆ, ಇಸ್ಲಾಂಪುರಪುಕೆ, ಪೋಚಾಪುರ, ಬೂದಿಹಾಳಎಸ್‌.ಕೆ, ಹೇಮವಾಡಗಿ,ಪಾಲಥಿ, ಬೆನಕನಡೋಣಿ, ತುರಮರಿ, ನಿಸನೂರ,ತಾರಿವಾಳ, ಕೊಣ್ಣೂರ, ಕೋಡಿಹಾಳ, ಕಂಬಿಹಾಳ, ಚಾಮಲಾಪುರ, ಹರಿಣಾಪುರ

ಅಂದಾಜು ಮತದಾರರು : 20,560

ಬಲಕುಂದಿ ಜಿಪಂ ಕ್ಷೇತ್ರ : ಈ ಕ್ಷೇತ್ರವೂ 3ನೇ ಬಾರಿಗೆ ಮುಂದುವರೆಯುತ್ತಿದ್ದು,ಇದರಡಿ ಬಲಕುಂದಿ, ಈಶ್ವರನಗರ, ವಡ್ಡರಹೊಸೂರ,ಗೊರಬಾಳ, ಹೆರೂರ, ಇಂಗಳಗಿ,ತೊಂಡಿಹಾಳ, ಗೊಪಸಾನಿ, ಚಿಕ್ಕಕೊಡಗಲಿ, ಸೇವಾಲಾಲ ನಗರ,ಸಂಕ್ಲಾಪುರ, ಗೋನಾಳ ಎಸ್‌.ಬಿ,ಹಿರೇಉಪನಾಳ, ಹಿರೇಕೊಡಗಲಿ, ಗುಡೂರ ಎಸ್‌.ಬಿ, ಗುಗ್ಗಲಮರಿ, ಹನಮನಾಳ ಎಸ್‌.ಟಿ.

ಅಂದಾಜು ಮತದಾರರು : 21,985

ಕಂದಗಲ್‌ ಜಿಪಂ ಕ್ಷೇತ : ಪ್ರಸಕ್ತ ಹಾಗೂ ಕಳೆದ 2010ರ ಚುನಾವಣೆಯಲ್ಲೂಕಂದಗಲ್‌ ಜಿ.ಪಂ. ಕ್ಷೇತ್ರ ಮುಂದುವರೆದಿದ್ದು, ಈಬಾರಿಯೂ ಈ ಕ್ಷೇತ್ರ ಸ್ಥಾನ ಉಳಿಸಿಕೊಂಡಿದೆ. ಆದರೆ,ಕೆಲ ಹಳ್ಳಿಗಳನ್ನು ಕೈಬಿಟ್ಟು, ಹೊಸ ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಯೋಜನೆಹಾಕಿಕೊಳ್ಳಲಾಗಿದೆ. ಈ ಕ್ಷೇತ್ರದಡಿ ಕಂದಗಲ್‌, ಗೋನಾಳ ಎಸ್‌.ಕೆ, ಹಿರೇಓತಗೇರಿ, ಮರಟಗೇರಿ, ಸೋಮಲಾಪುರ, ವಜ್ಜಲ, ಚಿಕ್ಕೋತಗೇರಿ, ಗೋನಾಳಎಸ್‌.ಟಿ, ಹಿರೇ ಶಿಂಗನಗುತ್ತಿ, ಚಿಕ್ಕಾದಾಪುರ, ಹಿರೇಆದಾಪುರ, ಕೃಷ್ಣಾಪುರ, ಚಿಕ್ಕ ಶಿಂಗನಗುತ್ತಿ,ಜಂಬಲದಿನ್ನಿ, ಚಟ್ನಿಹಾಳ, ತುಂಬ, ಚಿನ್ನಾಪುರ ಎಸ್‌.ಟಿ,ಕೇಸರ ಭಾವಿ, ಹಿರೇಹುನಕುಂಟಿ, ಮಲಗಿಹಾಳ ಮತ್ತು ಗಡಿಸುಂಕಾಪುರ.

ಅಂದಾಜು ಮತದಾರರು :  29,037

ಗುಡೂರ ಎಸ್‌.ಸಿ ಜಿಪಂ ಕ್ಷೇತ್ರ :

ಗುಡೂರ ಎಸ್‌.ಸಿ ಕ್ಷೇತ್ರವೂ 2ನೇ ಬಾರಿ ಮುಂದುವರೆಯಲಿದ್ದು, ಈ ಕ್ಷೇತ್ರದಡಿ ಗುಡೂರಎಸ್‌.ಸಿ, ಕೆಲೂರ, ಕುಣಬೆಂಚಿ, ತಳ್ಳಿಕೇರಿ, ವಡಗೇರಿ, ದಮ್ಮೂರ,ಗೊರಜನಾಳ, ಇಲಾಳ,ಮುರಡಿ, ಗಾಣದಾಳ, ಚಿಕನಾಳ,ಕ್ಯಾದಿಗೇರಿ, ಚಿಲಾಪುರ, ಬೆನಕನವಾರಿ, ಸಿದ್ದನಕೊಳ್ಳ, ಉಪನಾಳ ಎಸ್‌.ಸಿ.

 ಅಂದಾಜು ಮತದಾರರು :  35,736

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.