ಶುದ್ಧ ಕಾಯಕದಿಂದ ನೆಮ್ಮದಿ
Team Udayavani, May 22, 2019, 12:38 PM IST
ಬಾಗಲಕೋಟೆ: ನಗರದ ಚರಂತಿಮಠದಲ್ಲಿ ನಡೆದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಡಾ| ಶಿವಾನಂದ ಕುಬಸದ ಮಾತನಾಡಿದರು.
ಬಾಗಲಕೋಟೆ: ಕಾರ್ಯ ಎಂಬುದು ದೇಹ ಮತ್ತು ಮನಸ್ಸಿನ ಸಮತೋಲನ ಕಾಯುವ ಸಾಧನ. ಕಾರ್ಯದಿಂದ ಬಂದ ಹಣವನ್ನು ದಾನ ಕೊಟ್ಟನೆಂಬ ಅಹಂಕಾರ ತಪ್ಪಿಸಲು ಶರಣರು ದಾಸೋಹ ಪದ್ಧತಿ ಜಾರಿಗೆ ತಂದಿದ್ದಾರೆ ಎಂದು ವೈದ್ಯ, ಸಾಹಿತಿ ಡಾ| ಶಿವಾನಂದ ಕುಬಸದ ಹೇಳಿದರು.
ನಗರದ ಚರಂತಿಮಠದಲ್ಲಿ ಹುಣ್ಣಿಮೆ ನಿಮಿತ್ತ 40ನೇ ಶಿವಾನುಭವ ಗೋಷ್ಠಿ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ವೈದಿಕ ಸಂಸ್ಕೃತಿಯಲ್ಲಿ ಕಾಣುವ ವರ್ಗ, ವರ್ಣ ಅಸಮಾನತೆಗಳ ವಿರುದ್ಧ ಹೋರಾಡಲು ವಚನ ಚಳುವಳಿ ನಡೆಸಿದರು. ಭಕ್ತಿಯ ಗುರಿ ಮೋಕ್ಷವಾದರೆ ವಚನಗಳು ಸಮಾಜದಲ್ಲಿ ಬದುಕಲು ಹಾಗೂ ಸಮಾನತೆಗಾಗಿ ಹೋರಾಡಿ, ಕೂಡಿ ಬಾಳಲು ಸಹಾಯ ಮಾಡುತ್ತವೆ ಎಂದರು.
ಇನ್ನೊಬ್ಬ ಅತಿಥಿ ಡಾ|ಯೋಗಪ್ಪನವರ ಮಾತನಾಡಿ, ಹಳೆಗನ್ನಡ ಪಂಪ ಭಾಷೆಗಳು ಜನರಿಗೆ ಅರ್ಥವಾಗುತ್ತಿದ್ದಲ್ಲ. ಜನಸಾಮಾನ್ಯರಿಗೆ ತಿಳಿಯಲು ಸರಳ ಭಾಷೆಯಲ್ಲಿ ವಚನಗಳನ್ನು ಶರಣರು ರಚಿಸಲು ಬಹಳ ಶ್ರಮಪಟ್ಟರು. ತಂದೆ-ತಾಯಿಗಳ ಸೇವೆ ದೇವರ ಭಕ್ತಿಗಿಂತ ಮೀಗಿಲು ಎಂದರು.
ಸಾನ್ನಿಧ್ಯ ವಹಿಸಿದ್ದ ಹಾವೇರಿ ಜಿಲ್ಲೆ ಬೊಮ್ಮನಹಳ್ಳಿಯ ವಿರಕ್ತಮಠದ ಶಿವಯೋಗಿ ಸ್ವಾಮೀಜಿ ಮಾತನಾಡಿ, ಇಂದಿನ ಆಧುನಿಕ ಮೋಹಕ್ಕೆ ಸಿಲುಕಿ ತಪ್ಪು ದಾರಿ ಇಡುತ್ತಿರುವ ಯುವ ಜನಾಂಗಕ್ಕೆ ವಚನಗಳ ಅಧ್ಯಯನ ಉತ್ತಮ ಜೀವನಕ್ಕೆ ಆಧಾರವಾಗುತ್ತವೆ ಎಂದು ಹೇಳಿದರು.
ಅಲ್ಲಮಪ್ರಭು ಹೈಟಿಕ್ ಆಸ್ಪತ್ರೆ ವತಿಯಿಂದ ಡಾ|ಪ್ರಭುಸ್ವಾಮಿ ಮಠ ಅವರು ವೈದ್ಯ ಡಾ| ಕೆರೂಡಿ ದಂಪತಿಯನ್ನು ಸನ್ಮಾನಿಸಿದರು. ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ.ಎಸ್. ಪಾವಟೆ, ಜಿ.ಬಿ. ವೀರಭದ್ರಯ್ಯ ಉಪಸ್ಥಿತರಿದ್ದರು. ಸಾಂಚಿ ಗುಂಡಾ ಪ್ರಾರ್ಥಿಸಿದರು. ಡಾ| ಪ್ರಭುಸ್ವಾಮಿ ಪ್ರಭುಸ್ವಾಮಿಮಠ ಸ್ವಾಗತಿಸಿದರು. ಶಿವಾನಂದ ಪೂಜಾರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ