ಸರಿ ಎಂದ್ರು ಕೆಲವರು..ಸರಿಯಲ್ಲವೆಂದ್ರು ಹಲವರು!


Team Udayavani, Dec 20, 2018, 5:25 PM IST

20-december-18.gif

ಯಾವುದೇ ದೇವಸ್ಥಾನಕ್ಕೆ ಹೋದರೂ ಪ್ರಸಾದ ಸ್ವೀಕರಿಸಿ ಹೋಗೋಣ ಎಂದು ಗಂಟೆಗಟ್ಟಲೇ ಭಕ್ತರು ಕಾಯುತ್ತಾರೆ. ದೇವರಿಗೆ ನೀಡುವ ಗೌರವವನ್ನು ಭಕ್ತರು ಪ್ರಸಾದಕ್ಕೂ ನೀಡುತ್ತಾರೆ. ಆದರೆ, ಇಂತಹ ಪ್ರಸಾದ ವ್ಯವಸ್ಥೆ ಇನ್ನು, ಸರ್ಕಾರದ ಪರೀಕ್ಷೆಯ ವ್ಯಾಪ್ತಿಗೆ ಒಳಪಡಲಿದೆ. ಇದಕ್ಕೆ ಹಲವರು ಸರಿ ಎಂದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿಯಲ್ಲಿ ಪ್ರಸಾದ ಸ್ವೀಕರಿಸಿ ಹಲವರು ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರ, ಇಂತಹವೊಂದು ನಿರ್ಧಾರಕ್ಕೆ ಬಂದಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ದೇವಸ್ಥಾನದಲ್ಲಿ ನೀಡುವ ಅನ್ನಪ್ರಸಾದ ಇನ್ಮುಂದೆ ಆರೋಗ್ಯ ಪರಿವೀಕ್ಷಕರಿಂದ ಪರೀಕ್ಷೆಗೊಳಪಡಲಿದೆ.

ಒಂದು ಕಡೆ ನಿರಂತರ ಪ್ರಸಾದ: ದಕ್ಷಿಣ ಕರ್ನಾಟಕದಲ್ಲಿ ಇರುವಂತೆ ದೊಡ್ಡ ದೇವಸ್ಥಾನಗಳು ಹಾಗೂ ನಿರಂತರ ಪ್ರಸಾದದ ವ್ಯವಸ್ಥೆ ಇರುವ ದೇವಸ್ಥಾನಗಳು ಜಿಲ್ಲೆಯಲ್ಲಿ ಅಷ್ಟೊಂದಿಲ್ಲ. ಸದ್ಯ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಡಿ ಕೂಡಲಸಂಗಮದಲ್ಲಿ ಭಕ್ತರಿಗೆ ನಿರಂತರ ಪ್ರಸಾದದ ವ್ಯವಸ್ಥೆ ಇದೆ. ಅದನ್ನು ಬಿಟ್ಟರೆ ಜಿಲ್ಲೆಯಲ್ಲಿ ಇಂತಹ ವ್ಯವಸ್ಥೆ ಇಲ್ಲ. ಖಾಸಗಿ ದೇವಸ್ಥಾನಗಳಲ್ಲಿ ಭಕ್ತರೇ ಸ್ವಯಂ ಪ್ರೇರಣೆಯಿಂದ ಪ್ರಸಾದದ ವ್ಯವಸ್ಥೆ (ಹುಣ್ಣಿಮೆ, ಜಾತ್ರೆಯಂದು ಹೆಚ್ಚು) ಮಾಡುವ ಸಂಪ್ರದಾಯ ಜಿಲ್ಲೆಯಲ್ಲಿದೆ.

1167 ಮುಜರಾಯಿ ದೇವಸ್ಥಾನ: ಮುಜರಾಯಿ ಇಲಾಖೆಯಡಿ ಜಿಲ್ಲೆಯಲ್ಲಿ ಒಟ್ಟು 1167 ದೇವಸ್ಥಾನಗಳಿವೆ. ಆದಾಯ ಇರುವ ದೇವಸ್ಥಾನಗಳು ಹಾಗೂ ಆದಾಯವಿಲ್ಲದ ದೇವಸ್ಥಾನಗಳು ಎಂಬ ಎರಡು ಭಾಗಗಳು ಇಲಾಖೆಯಲ್ಲಿದ್ದು, ಆದಾಯ ಇರುವ ದೇವಸ್ಥಾನಗಳಲ್ಲಿ ಎ ಮತ್ತು ಬಿ ಗುಂಪಿನಡಿ ಇಲಾಖೆ ಗುರುತಿಸುತ್ತದೆ. ಎ ಗುಂಪಿನಡಿ ತುಳಸಿಗೇರಿ ದೇವಸ್ಥಾನವಿದ್ದು, ಬಾದಾಮಿಯ ಬನಶಂಕರಿ ದೇವಸ್ಥಾನವೂ ಮುಜರಾಯಿ ಇಲಾಖೆಗೆ ಪಡೆಯಲಾಗಿತ್ತು. ಆದರೆ, ಇದಕ್ಕೆ ಟ್ರಸ್ಟ್‌ನವರು ವಿರೋಧ ವ್ಯಕ್ತಪಡಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಎ ಕೆಟಗರಿ ಅಡಿ ತುಳಸಿಗೇರಿ ದೇವಸ್ಥಾನ ಮಾತ್ರವಿದೆ. ಇನ್ನು ಆದಾಯವಿಲ್ಲದ ದೇವಸ್ಥಾನಗಳು 1167 ಇವೆ. ಬಾಗಲಕೋಟೆ ತಾಲೂಕಿನಲ್ಲಿ 191, ಬಾದಾಮಿ-171, ಬೀಳಗಿ-112, ಜಮಖಂಡಿ-344, ಮುಧೋಳ-164, ಹುನಗುಂದ ತಾಲೂಕಿನಲ್ಲಿ 181 ದೇವಸ್ಥಾನಗಳು ಇಲಾಖೆಯಲ್ಲಿವೆ.

ಪ್ರತಿ ದೇವಸ್ಥಾನಕ್ಕೂ ತದ್‌ಜೀಕ ಭತ್ಯೆ!: ಜಿಲ್ಲೆಯ ಆದಾಯವಿಲ್ಲದ ಮುಜರಾಯಿ ಇಲಾಖೆಯ ಸಿ ಶ್ರೇಣಿಯ ದೇವಸ್ಥಾನಗಳಿಗೆ ಸರ್ಕಾರವೇ ತದ್‌ಜೀಕ್‌ ಭತ್ಯೆ ನೀಡುತ್ತದೆ. ಅದು ಪ್ರತಿದಿನ ಎಣ್ಣೆ-ದೀಪ, ಪೂಜೆ- ಪುನಸ್ಕಾರ ನಡೆಸಲು ಬಳಸಬೇಕು. ಜಿಲ್ಲಾಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರ್‌ಗೆ ಒಂದು ದೇವಸ್ಥಾನಕ್ಕೆ ವಾರ್ಷಿಕ ರೂ. 48 ಸಾವಿರದಂತೆ ಮುಜರಾಯಿ ಇಲಾಖೆ ಅನುದಾನ ಬಿಡುಗಡೆ ಮಾಡುತ್ತಾರೆ. ಆಯಾ ತಹಶೀಲ್ದಾರರು, ತಮ್ಮ ತಾಲೂಕಿನ ದೇವಸ್ಥಾನಗಳಿಗೆ ಈ ಅನುದಾನ ಬಿಡುಗಡೆ ಮಾಡಬೇಕು. 1167 ದೇವಸ್ಥಾನಗಳಿಗೂ ತಲಾ 48 ಸಾವಿರ ಅನುದಾನ ದೇವಸ್ಥಾನಗಳಿಗೆ ವಾರ್ಷಿಕ ಹೋಗುತ್ತದೆ. ಅದೇ ಹಣದಲ್ಲಿ ಪೂಜಾರಿಗಳು ಎಣ್ಣೆ, ದೀಪ, ಪೂಜೆ ಪುನಸ್ಕಾರ ಕೈಗೊಳ್ಳಬೇಕು. ಆದರೆ, ಇದು ಎಷ್ಟರ ಮಟ್ಟಿಗೆ ಸದ್ಬಳಕೆಯಾಗುತ್ತದೆ ಎಂಬ ಪ್ರಶ್ನೆಯೂ ಕೆಲವರಲ್ಲಿದೆ.

ಪ್ರಸಾದ ಎಂಬುದು ಭಕ್ತರಲ್ಲಿ ಭಾವನಾತ್ಮಕ ಸಂಬಂಧ ಬೆಳೆಸುವ ಪವಿತ್ರ ಸ್ಥಾನ ಪಡೆದಿದೆ. ಇದರ ಮೇಲೆ ಯಾರೂ ಸಂದೇಹ ಪಡಬಾರದು. ಆದರೆ, ಈಚಿನ ದಿನಗಳಲ್ಲಿ ಪ್ರಸಾದದಲ್ಲೂ ವಿಷ ಬೆರೆಯುವ ಪ್ರಕರಣ ನಡೆದಾಗ, ಭಕ್ತರ ಹಿತದೃಷ್ಟಿಯಿಂದ ಸರ್ಕಾರ ಹೊಸ ನಿರ್ಧಾರ ಕೈಗೊಂಡಿರುವುದು ಸೂಕ್ತ.
 ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ,
 ಕೂಡಲಸಂಗಮ

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಗೂ ಮುನ್ನ ಪರೀಕ್ಷೆ ಮಾಡಬೇಕೆಂಬ ಸರ್ಕಾರದ ಆದೇಶ ತಲುಪಿಲ್ಲ. 20 ಅಂಶಗಳ ಆಧಾರದ ಮೇಲೆ ಪ್ರಸಾದ ವ್ಯವಸ್ಥೆ ಉಸ್ತುವಾರಿ ಮಾಡಬೇಕೆಂಬುದನ್ನು ಮಾಧ್ಯಮಗಳ ಮೂಲಕ ಕೇಳಿದ್ದೇವೆ. ಇದು ಇನ್ನೂ ವಿಧಾನಸಭೆಯಲ್ಲಿ ಚರ್ಚೆಯ ಹಂತದಲ್ಲಿದೆ. ಈ ಕುರಿತು ಸರ್ಕಾರದ ಆದೇಶ ತಲುಪಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. 
 ಕೆ.ಜಿ. ಶಾಂತಾರಾಮ್‌, ಜಿಲ್ಲಾಧಿಕಾರಿ

ಭಾರತೀಯ ಸಂಸ್ಕೃತಿಯಲ್ಲಿ ಪ್ರಸಾದಕ್ಕೆ ಪವಿತ್ರ ಸ್ಥಾನವಿದೆ. ಪ್ರಸಾದ ಪಡೆದರೆ ಮನಸ್ಸು-ಭಾವನೆ ಶುದ್ಧವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಆದರೆ, ಈಚಿನ ದಿನಗಳಲ್ಲಿ ಪ್ರಸಾದಕ್ಕೇ ವಿಷ ಬೆರೆಸುವ ಪ್ರಕರಣ ನಡೆದಿರುವುದು ತುಂಬಾ ನೋವುಂಟು ಮಾಡಿದೆ. ಇಂತಹ ಘಟನೆ ನಡೆಯದಂತೆ ತಡೆಯುವುದು ಒಂದೆಡೆಯಾದರೆ, ತಪ್ಪಿಸ್ಥರಿಗೆ ಒಮ್ಮೆ ಕಠಿಣ ಶಿಕ್ಷೆ ಕೊಟ್ಟರೆ ಘಟನೆ ಮರುಕಳಿಸುವುದಿಲ್ಲ. ಪ್ರಸಾದದ ಮೇಲೂ ಕಂಡವರ ಕಣ್ಣು ಬೀಳುತ್ತಿರುವುದು, ಸರ್ಕಾರದ ಮಧ್ಯಪ್ರವೇಶ ಬೇಸರದ ಸಂಗತಿ. ಪ್ರಸಾದಕ್ಕೆ ಅನುಮತಿ ಹೆಸರಲ್ಲಿ ಹಣ ಕೀಳುವ ಪರಿಪಾಠವಾಗುವ ಆತಂಕವಿದೆ.  
ರಾಘವೇಂದ್ರ ಕುಲಕರ್ಣಿ,
ಸಾಮಾಜಿಕ ಕಾರ್ಯಕರ್ತ

„ಶ್ರೀಶೈಲ ಕೆ. ಬಿರಾದಾರ 

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.