ಕಾನೂನಾತ್ಮಕ ಹೋರಾಟ ಮೂಲಕ ಪಡೆಯುವ ಮೀಸಲಾತಿಗೆ ನಮ್ಮ ಬೆಂಬಲವಿದೆ : ಹನಮಂತ ನಿರಾಣಿ
Team Udayavani, May 9, 2022, 9:37 PM IST
ಹುನಗುಂದ : ಲಿಂಗಾಯುತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯ ಹೋರಾಟಕ್ಕೆ ನಿರಾಣಿ ಕುಟುಂಬದ ವಿರೋಧವಿಲ್ಲ.ಕಾನೂನಾತ್ಮಕ ಹೋರಾಟ ಮೂಲಕ ಪಡೆಯುವ ಮೀಸಲಾತಿಗೆ ನಮ್ಮ ಬೆಂಬಲವಿದೆ ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಕಟ್ಟಡಗಳ ಭೂಮಿ ಪೂಜೆಗೆ ಆಗಮಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ನೀಡಬೇಕೆನ್ನುವುದರಲ್ಲಿ ಎರಡು ಮಾತಿಲ್ಲ.ಹೋರಾಟ ರೂಪರೇಷದಲ್ಲಿ ಒಬ್ಬೊಬ್ಬರ ಒಂದೊಂದು ತರಹ ನಡೆಸುತ್ತಿದ್ದಾರೆ. ಕಾನೂನಾತ್ಮಕ ಹೋರಾಟದ ಮೂಲಕ ಮೀಸಲಾತಿಯನ್ನು ಪಡೆಯುವುದು ಸೂಕ್ತ. ನಿರಾಣಿ ಕುಟುಂಬ ಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ ಎನ್ನುವ ಸುದ್ದಿಗಾರ ಪ್ರಶ್ನೆಗೆ ಹನನಂತ ನಿರಾಣಿ ಉತ್ತರಿಸಿ ಮೀಸಲಾತಿ ಹೋರಾಟ ಮಾಡತ್ತೀದ್ದಾರೆ ಅಲ್ಲಿ ಹೋಗಿ ಪಾಲ್ಗೊಂಡರೇ ಮಾತ್ರ ಹೋರಾಟದಲ್ಲಿ ನಾವು ಇದ್ದೇವೆ ಎನ್ನುವುದ್ದಲ್ಲ ನಾವು ಎಲ್ಲೆ ಇದ್ದರೂ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಇದನ್ನೂ ಓದಿ : ದೇಶೀಯ ಕ್ರೀಡೆಗೆ ವಿದೇಶದಲ್ಲೂ ಹೈಟೆಕ್ ಸ್ಪರ್ಶ : ಎಂ.ಎಸ್.ತ್ಯಾಗಿ ಅಭಿಮತ
ಇನ್ನು ಪದವೀದರ ಮತ ಕ್ಷೇತ್ರದಿಂದ ಮತ್ತೊಮ್ಮೆ ನಾನು ಕಣಕ್ಕೀಳಿವುದು ಗ್ಯಾರೆಂಟಿ.ಈಗಾಗಲೇ ಪಕ್ಷ ನನಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ತೋರಿದೆ.ಜೂನ್ 30 ರೊಳಗಾಗಿ ಪದವೀಧರ ಚುನಾವಣೆಯ ನಿರ್ಧಾರವಾಗಲಿದೆ. ಕಳೆದ ಬಾರಿಗಿಂತಲ್ಲೂ ಹೆಚ್ಚಿನ ಅಂತರದಲ್ಲಿ ನಾನು ಗೆಲ್ಲುವುದು ನಿಶ್ಚಿತ. ಪ್ರತಿಸ್ಪರ್ಧಿ ಯಾರೇ ಇದ್ದರೂ ನಮ್ಮದು ಗೆಲ್ಲುವಿನ ಕಡೆಗೆ ಮಾತ್ರ ಗಮನವಿದೆ ಎಂದರು. ಇನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು 2500 ಕೋಟಿ ಕೊಟ್ಟರೇ ಮುಖ್ಯಮಂತ್ರಿ ಸ್ಥಾನ ನೀಡುತ್ತಾರೆ ಎನ್ನುವ ಹೇಳಿಕೆಗೆ ತಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಿರಾಣಿ ಯತ್ನಾಳವರು ದೊಡ್ಡ ರಾಜಕಾರಣಿಗಳು ಅವರ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ನಾಯಕರು ಅದಕ್ಕೆ ಉತ್ತರಿಸುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ
Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ
MUST WATCH
ಹೊಸ ಸೇರ್ಪಡೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್