ತಾಯಿ ಬನವ್ವ ನಾವೇನ್‌ ತಪ್ಪ ಮಾಡೇವಿ!


Team Udayavani, Oct 25, 2019, 1:08 PM IST

bk-tdy-1

ಖ್ಯಾಡ (ಬಾಗಲಕೋಟೆ): ತಾಯಿ ಬನವ್ವ, ನಾವೇನ್‌ ತಪ್ಪ ಮಾಡೀವಿ. ಒಂದ್‌ ವರ್ಷದಾಗ ಮೂರೂ ಮೂರು ಸಾರಿ ಯಾಕ್‌ ತ್ರಾಸ್‌ ಕೊಡಾಕತ್ತಿ… ಬಾದಾಮಿ ತಾಲೂಕಿನ ಚೋಳಚಗುಡ್ಡ ಗ್ರಾ.ಪಂ. ವ್ಯಾಪ್ತಿಯ ಖ್ಯಾಡದ ಜನ ಉತ್ತರಕರ್ನಾಟಕದ ಆರಾಧ್ಯ ದೇವತೆ ಬಾದಾಮಿ-ಬನಶಂಕರಿ ದೇವಿಗೆ ಹೀಗೆ ಕೈಮುಗಿದು ಕೇಳುತ್ತಿದ್ದಾರೆ.

ಎರಡೇ ತಿಂಗಳಲ್ಲಿ ಬರೋಬ್ಬರು ಮೂರು ಬಾರಿ, ಎಲ್ಲಾ ಸಾಮಗ್ರಿ, ಮಕ್ಕಳು, ಆಡು-ಎಮ್ಮೆ ಹೊಡೆದುಕೊಂಡು ಪ್ಲಾಟ್‌ (ಆಸರೆ ಗ್ರಾಮ)ದಲ್ಲಿದ್ದು ಜೀವ ಉಳಿಸಿಕೊಂಡು, ಮರಳಿ ಊರಿಗೆ ಬರುತ್ತಿದ್ದಾರೆ.

ರಾಡಿ ನೋಡ್ರಿ: ಖ್ಯಾಡ ಗ್ರಾಮಕ್ಕೆ ಮಲಪ್ರಭಾ ನದಿ ಮೂರು ಬಾರಿ ನುಗ್ಗಿದೆ. ಹಳೆಯ ಊರಿಗೆ ನುಗ್ಗಿದಾಗೊಮ್ಮೆ, ರಾಶಿ ರಾಶಿ ರಾಡಿ ತಂದು ಬಿಟ್ಟಿದೆ. ಮನೆಗಳ ಒಳಗೆ, ಹೊಸ್ತಿಗಳು ರಾಡಿಯಿಂದ ತುಂಬಿಕೊಂಡಿದೆ. ಕಳೆದ ಆಗಸ್ಟನಲ್ಲಿ ಬಂದ ಪ್ರವಾಹದಿಂದ ಇಡೀ ಗ್ರಾಮಕ್ಕೆ ನೀರು ನುಗ್ಗಿತ್ತು.

ಮನೆಗಳಲ್ಲಿನ ಹಾಸಿಗೆ, ಹೊದಿಕೆ, ಧವಸ-ಧಾನ್ಯ ಎಲ್ಲವೂ ಹಾನಿಯಾಗಿತ್ತು. ಇದೀಗ ಪುನಃ ಕಟ್ಟಿಕೊಳ್ಳಲು ಹೈರಾಣಾಗುತ್ತಿರುವಾಗಲೇ ಮತ್ತೆ ನೀರು ಹೊಕ್ಕಿದೆ.ಇದರಿಂದ ಕಂಗಾಲಾಗಿರುವ ಜನರು, ತಾಯಿ ಬನವ್ವ ನಾವೇನ್‌ ತಪ್ಪ ಮಾಡೀವಿ ಎಂದು ಅಸಹಾಯಕರಂತೆ ಕೇಳುತ್ತಿದ್ದಾರೆ.

ಬದುಕಿನ ಬಂಡಿ ನೀರಲ್ಲ: 2011ರ ಜನಗಣತಿ ಪ್ರಕಾರ ಗ್ರಾಮದಲ್ಲಿ 2015 ಜನಸಂಖ್ಯೆ ಇದೆ. ಅದರಲ್ಲಿ 1012 ಪುರುಷರು, 1003 ಮಹಿಳೆಯರು ಒಳಗೊಂಡಿದ್ದು, ಸುಮಾರು 400 ಕುಟುಂಬಗಳಿವೆ. ಬಹುತೇಕ ರೈತ ಕುಟುಂಬಗಳೇ ಇಲ್ಲಿದ್ದು, ಕಲ್ಲು ಮಣ್ಣಿನ ಮೇಲುಮುದ್ದೆಯ ಮನೆಗಳಿವೆ. 327.84 ಹೆಕ್ಟೇರ್‌ ನೀರಾವರಿ, 285.76 ಹೆಕ್ಟೇರ್‌ ಮಳೆಯಾಶ್ರಿತ ಸೇರಿ ಒಟ್ಟು 613.60 ಹೆಕ್ಟೇರ್‌ ಸಾಗುವಳಿ ಭೂಮಿ ಇದೆ. ಬಾದಾಮಿ ಚಾಲುಕ್ಯರ ಅರಸರ ಕಾಲದಲ್ಲಿ ಆಯುಧಗಳನ್ನು ಇಡಲು ಈ ಗ್ರಾಮ ಬಳಕೆಯಾಗುತ್ತಿತ್ತು ಎಂಬುದು ಇತಿಹಾಸದ ಪುಟಗಳು ಹೇಳುತ್ತವೆ. ಆಗ ಆಯುಧಗಳನ್ನು ಇಡುತ್ತಿದ್ದ ಗ್ರಾಮದಲ್ಲೀಗ, ರೈತನ ಆಯುಧಗಳು (ಎತ್ತಿನ ಬಂಡಿ, ಕೃಷಿ ಚಟುವಟಿಕೆಯ ಸಾಮಗ್ರಿ) ನೀರಿನಲ್ಲಿ ನಿಂತಿವೆ. ರೈತನ ಬದುಕಿಗೆ ಈ ಸಾಮಗ್ರಿಗಳೇ ಬದುಕಿನ ಬಂಡಿ ಸಾಗಲು ಆಯುಧಗಳು. ಅವು ನಿರಂತರ ನೀರಿನಲ್ಲಿ ನೆನೆದಿರುವುದರಿಂದ ಬಳಕೆ ಮಾಡಲಾಗದ ಸ್ಥಿತಿ ತಲುಪಿವೆ.

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ವೀಣಕ್ಕನನ್ನು ಜತೆಗೆ ಕರೆದೊಯ್ಯುವೆ: ಸಂಯುಕ್ತಾ ಪಾಟೀಲ್‌

Lok Sabha Elections; ವೀಣಕ್ಕನನ್ನು ಜತೆಗೆ ಕರೆದೊಯ್ಯುವೆ: ಸಂಯುಕ್ತಾ ಪಾಟೀಲ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.