ಆಲಮಟ್ಟಿ-ಕೆಆರ್‌ಎಸ್‌ ಮಾದರಿ: ಹೆರಕಲ್‌ ಮೂಕಿಗೆ ಪ್ರವಾಸಿ ತಾಣದ ಭಾಗ್ಯ

ಗ್ರಾಮೀಣ ಸೊಗಡಿನ ವಿವಿಧ ಕಲೆ ಹೀಗೆ ಹಲವು ರೀತಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.

Team Udayavani, Oct 26, 2022, 3:43 PM IST

ಆಲಮಟ್ಟಿ-ಕೆಆರ್‌ಎಸ್‌ ಮಾದರಿ: ಹೆರಕಲ್‌ ಮೂಕಿಗೆ ಪ್ರವಾಸಿ ತಾಣದ ಭಾಗ್ಯ

ಬಾಗಲಕೋಟೆ: ಜಿಲ್ಲೆಯ ಘಟಪ್ರಭಾ ನದಿ ವಿಶಾಲವಾಗಿ ಹರಿದು, ಚಿಕ್ಕ ಗುಡ್ಡಗಳ ಮಧ್ಯೆ ಚಿಕ್ಕದಾಗಿ ಹರಿಯುವ ಪ್ರದೇಶಕ್ಕೆ ಗ್ರಾಮೀಣ ಜನ ಹೆರಕಲ್‌ ಮೂಕಿ ಎಂದೇ ಕರೆದಿದ್ದಾರೆ. ಆ ಸ್ಥಳವೀಗ ಜಿಲ್ಲೆಯಲ್ಲೇ ಅತ್ಯಂತ ಮಾದರಿಯಾದ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಿಸಿ, ಗಮನ ಸೆಳೆದಿದೆ. ಅದೀಗ ಮತ್ತೂಂದು ವಿಶೇಷತೆಯಿಂದ ಗಮನ ಸೆಳೆಯಲು ಸಜ್ಜಾಗಿದೆ.

ಹೌದು, ಜಿಲ್ಲೆಯ ಬೀಳಗಿ ತಾಲೂಕಿನ ಹೆರಕಲ್‌ ಬಳಿ ಕಳೆದ 2012-13ನೇ ಸಾಲಿನಲ್ಲಿ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಿಸಲಾಗಿದೆ. ಇದರಿಂದ ಬೀಳಗಿ ತಾಲೂಕಿನ ಹಳ್ಳಿಗಳಿಂದ ಬಸವನಬಾಗೇವಾಡಿ ತಾಲೂಕಿನ ಹಲವು ಹಳ್ಳಿಗಳ ಸಂಪರ್ಕಕ್ಕೆ ಸನಿಹವಾಗಿದ್ದು, ಮುಖ್ಯವಾಗಿ ಘಟಪ್ರಭಾ ನದಿಯಲ್ಲಿ, ಅದರಲ್ಲೂ ಬಾಗಲಕೋಟೆ ನಗರದ ಸುತ್ತ, ಬೀಳಗಿ ತಾಲೂಕಿನ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರು, ನೀರಾವರಿ ಕಲ್ಪಿಸಲು ಅನುಕೂಲವಾಗಿದೆ. 515 ಮೀಟರ್‌ ಎತ್ತರದ ಈ ಸೇತುವೆ ಸಹಿತ ಬ್ಯಾರೇಜ್‌, ಜಿಲ್ಲೆಯಲ್ಲೇ ಅತ್ಯಂತ ಮಾದರಿ ಎಂಬ ಹೆಗ್ಗಳಿಕೆ ಪಡೆದಿದೆ. ವಿಜಯಪುರದ ಜಿ. ಶಂಕರ ಕಂಪನಿ ಇದನ್ನು ಅಚ್ಚುಕಟ್ಟಾಗಿ ನಿರ್ಮಿಸಿ,
ಸೈ ಎನಿಸಿಕೊಂಡಿದೆ. ಈ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಾಣದ ವೇಳೆಯೇ, ಇಲ್ಲಿ ಪಕ್ಷಧಾಮ, ಮೊಸಳೆ ಪಾರ್ಕ್‌, ಉದ್ಯಾನವನ ನಿರ್ಮಿಸಿ, ಇದೊಂದು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಕನಸು ಚಿಗುರೊಡೆದಿತ್ತು. ಅದನ್ನು ಇದೀಗ ನನಸಾಗಿಸುವ ಕಾಲ ಬಂದಿದೆ ಎನ್ನಲಾಗಿದೆ.

ಪ್ರವಾಸಿ ತಾಣದ ಆಶಯ: ಹೆರಕಲ್‌ ಬ್ಯಾರೇಜ್‌ನ ಎರಡೂ ಬದಿಗೆ ನಿಸರ್ಗದತ್ತವಾದ ಬೆಟ್ಟಗಳಿಂದ ನೂರಾರು ಎಕರೆ ಅರಣ್ಯ ಪ್ರದೇಶವಿದೆ. ಹೆರಕಲ್‌ದಿಂದ ಯಡಹಳ್ಳಿ ಗುಡ್ಡದ ವರೆಗೂ ಅರಣ್ಯ ಪ್ರದೇಶ ಬೆಳೆದು ನಿಂತಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ನಂ. 218ರಿಂದ ಸುಮಾರು 14 ಕಿ.ಮೀ.ಯಷ್ಟು ದೂರವಿರುವ ಈ ಪ್ರದೇಶ, ಬ್ಯಾರೇಜ್‌ ನಿರ್ಮಾಣದ ಬಳಿಕ ಪಿಕ್‌ನಿಕ್‌ ಸ್ಪಾಟ್‌ ಆಗಿ ರೂಪುಗೊಂಡಿದೆ. ಆದರೆ, ಸುಂದರ ಬ್ಯಾರೇಜ್‌, ವಿಶಾಲವಾದ ಹಿನ್ನೀರು, ಸ್ವತ್ಛಂದವಾದ ವಾತಾವರಣ ನೋಡಲು ಮಾತ್ರ ಸಾಧ್ಯ. ಆದರೆ, ಇಲ್ಲೊಂದು ಪ್ರವಾಸಿ ತಾಣ ಮಾಡಬೇಕು, ಕುಟುಂಬ ಸಮೇತ ಬಂದು, ವೀಕ್ಷಿಸಬೇಕು. ಆ ನಿಟ್ಟಿನಲ್ಲಿ ಇದೊಂದು ಪ್ರವಾಸಿ ತಾಣ ಮಾಡಬೇಕೆಂಬ ಆಶಯ ಹಲವು ವರ್ಷಗಳಿಂದಲೂ ಕೇಳಿ ಬಂದಿತ್ತು.

ಆಲಮಟ್ಟಿ-ಕೆಆರ್‌ಎಸ್‌ ಮಾದರಿ: ದಕ್ಷಿಣ ಭಾಗದ ಕೆಆರ್‌ಎಸ್‌ ಡ್ಯಾಂ, ಉತ್ತರದ ಆಲಮಟ್ಟಿ ಡ್ಯಾಂ ಸುತ್ತ ಸುಂದರ ಉದ್ಯಾನವನ ನಿರ್ಮಿಸಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ರೂಪುಗೊಂಡಿವೆ. ಅದೇ ಮಾದರಿಯಲ್ಲಿ ಹೆರಕಲ್‌ ಬ್ಯಾರೇಜ್‌ ಸುತ್ತಲಿನ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು, ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆಯೊಂದು ರೂಪಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಶೀಘ್ರವೇ ಇದೊಂದು ಸುಂದರ ಪ್ರವಾಸಿ ತಾಣ ಆಗುವುದರಲ್ಲಿ ಸಂದೇಹವಿಲ್ಲ.

40 ಕೋಟಿ ವೆಚ್ಚದ ಯೋಜನೆ: ಹುಬ್ಬಳ್ಳಿ-ವಿಜಯಪುರ ಹೆದ್ದಾರಿಯಿಂದ ಹೆರಕಲ್‌ ಬ್ಯಾರೇಜ್‌ ವರೆಗೆ ಸುಸಜ್ಜಿತ ರಸ್ತೆ, ಬ್ಯಾರೇಜ್‌ ಬಳಿ ಸುಂದರ ಉದ್ಯಾನವನ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 40 ಕೋಟಿ ವೆಚ್ಚದ ಯೋಜನೆ ರೂಪಿಸಲಾಗುತ್ತಿದೆ. ಮ್ಯೂಜಿಕಲ್‌ ಕಾರಂತಿ, ಉದ್ಯಾನವನ, ಗ್ರಾಮೀಣ ಸೊಗಡಿನ ವಿವಿಧ ಕಲೆ ಹೀಗೆ ಹಲವು ರೀತಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.

ಬಾಗಲಕೋಟೆ, ಬೀಳಗಿ, ಕೊಲ್ಹಾರ, ನಿಡಗುಂದಿ, ಆಲಮಟ್ಟಿ ಹೀಗೆ ಹಲವು ಭಾಗದ ಜನರು ಪ್ರತಿ ರವಿವಾರಕ್ಕೊಮ್ಮೆ ಸೈಕ್ಲಿಂಗ್‌ ಮೂಲಕ ಇಲ್ಲಿಗೆ ಆಗಮಿಸಿ, ಈ ತಾಣದ ಸವಿ ಸವಿಯುತ್ತಾರೆ. ಇನ್ನೂ ಕೆಲವರು ಮನೆಯಲ್ಲಿ ತಿಂಡಿ-ತಿನಿಸು ಮಾಡಿಕೊಂಡು, ಕುಟುಂಬ ಸಮೇತ ಹೋಗಿ ಒಂದಷ್ಟು ಹೊತ್ತು ಇದ್ದು, ಪ್ರಕೃತಿ ಸೌಂದರ್ಯ ಸವೆಯುತ್ತಾರೆ. ಆದರೆ, ಇಲ್ಲಿ ಕುಟುಂಬ ಸಮೇತ ಕುಳಿತುಕೊಂಡು, ಉಪಾಹಾರ ಮಾಡುವ ಜತೆಗೆ ನೋಡುವ ಬೇರೆ ಬೇರೆ ಸೌಂದರ್ಯವಿಲ್ಲ. ಹೀಗಾಗಿ ಪ್ರವಬಾಸಿ ತಾಣವಾಗಿ ರೂಪಿಸುವ ಅಗತ್ಯವಿದೆ ಎಂದು ಹಲವರ ಒತ್ತಾಯ.

ಹೆರಕಲ್‌ ಬ್ಯಾರೇಜ್‌ ಅನ್ನು ಈಗಿರುವ 515 ಮೀಟರ್‌ನಿಂದ 519.60 ಮೀಟರ್‌ ವರೆಗೆ ಎತ್ತರಿಸಲು ಕೆಬಿಜೆಎನ್‌ಎಲ್‌ನಿಂದ 15 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ದೊರೆತಿದೆ. ಬ್ಯಾರೇಜ್‌ ಎತ್ತರಿಸುವ ಜತೆಗೆ ಇದೊಂದು ಸುಂದರ ಪ್ರವಾಸಿ ತಾಣವನ್ನಾಗಿ ನಿರ್ಮಿಸುವ ಗುರಿ ಹಾಕಿಕೊಂಡಿದ್ದು, ಇದಕ್ಕಾಗಿ 40 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರ ಅನುಷ್ಠಾನಗೊಳಿಸಲಾಗುವುದು.
ಮುರುಗೇಶ ನಿರಾಣಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ

*ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.