ಗ್ರಾಮ ದೇವತೆ ಪೂಜೆಗೆ ಹೊಳೆಯಿಂದ ನೀರು ತರಲು ಹೋದ ಯುವಕ ನೀರುಪಾಲು: ಮುಗಿಲು ಮುಟ್ಟಿದ ಆಕ್ರಂದನ


Team Udayavani, Apr 26, 2022, 8:13 PM IST

ಗ್ರಾಮ ದೇವರ ಪೂಜೆಗೆ ಹೊಳೆಯಿಂದ ನೀರು ತರಲು ಹೋದ ಯುವಕ ನೀರು ಪಾಲು: ಮುಗಿಲು ಮುಟ್ಟಿದ ಆಕ್ರಂದನ

ಹುನಗುಂದ : ಗ್ರಾಮ ದೇವತೆಯ ಪೂಜೆಗಾಗಿ ಹೊಳೆಯಿಂದ ನೀರು ತರಲು ಹೋದ ಯುವಕ ಈಜು ಬರದೇ ಮಲಪ್ರಭೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಹುನಗುಂದ ತಾಲೂಕಿನ ಗಂಗೂರ ಗ್ರಾಮದಲ್ಲಿ ನಡೆದಿದೆ.

ಶಿವಸಂಗಪ್ಪ ಮುದ್ದಣ್ಣ ಚೌಡಾಪೂರ (29) ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ ಯುವಕನಾಗಿದ್ದಾನೆ.

ಘಟನೆಯ ವಿವರ : ಮುಂಗಾರು ಬಿತ್ತನೆಯ ಪೂರ್ವದಲ್ಲಿ ಸಮೃದ್ದಿ ಮಳೆ ಮತ್ತು ಬೆಳೆಗಾಗಿ ಉತ್ತರ ಕರ್ನಾಟಕದ ಪ್ರತಿಯೊಂದು ಹಳ್ಳಿಗಳಲ್ಲಿ ಗ್ರಾಮ ದೇವತಿಗಳನ್ನು ಶಾಂತಗೊಳಿಸಲು ಮಂಗಳವಾರ ಮತ್ತು ಶುಕ್ರವಾರ ಐದು ವಾರಗಳ ಪರಿಯಂತ ಮಡಿಯುಡಿಯಿಂದ ಹೊಳೆಯಿಂದ ನೀರು ತಂದು ಗ್ರಾಮ ದೇವತೆಗಳ ಪೂಜಿಸುವುದು ವಾಡಿಕೆ ಅದರಂತೆ ಗಂಗೂರ ಗ್ರಾಮದಲ್ಲಿ ಕಳೆದ ನಾಲ್ಕು ವಾರಗಳಿಂದ ಹೊಳೆಯ ನೀರಿನಿಂದ ಗ್ರಾಮದ ದೇವತೆಗೆ ಪೂಜೆಸುತ್ತಾ ಬಂದಿದ್ದರು. ಆದರೆ ನಾಲ್ಕನೆಯ ವಾರದ ಮಂಗಳವಾರ ದೇವತೆಗೆ ಹೊಳೆಯ ನೀರು ತರಲು ಗ್ರಾಮಸ್ಥರು ಮಲಪ್ರಭೆ ನದಿಗೆ ಹೋದಾಗ ಈಜು ಬರುವ ಯುವಕರು ನದಿಗೆ ಹಾರಿದ್ದಾರೆ ಅದನ್ನು ಕಂಡ ಮೃತ ಯುವಕ ಶಿವಸಂಗಪ್ಪ ಚೌಡಾಪೂರ ಪ್ಲಾಸ್ಟಿಕ್ ಕೊಡವನ್ನು ಹೊಟ್ಟೆಗೆ ಇಟ್ಟುಕೊಂಡು ನದಿಗೆ ಹಾರಿದ್ದಾನೆ. ಪ್ಲಾಸ್ಟಿಕ್ ಕೊಡದ ಮೇಲೆ ಈಜುತ್ತಾ ಮುಂದೆ ಹೋದಂತೆ ಪ್ಲಾಸ್ಟಿಕ್ ಕೊಡವು ನೀರು ತುಂಬಿಕೊಂಡು ಯುವಕನ ಕೈಗೆ ಸಿಗದೇ ಹೋಗಿದೆ ಆಗ ಈಜು ಬರದೇ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ : ಪುತ್ತೂರು : ಕೋಮು ಪ್ರಚೋದಕ ಸಂದೇಶ ರವಾನೆ : ಗೃಹರಕ್ಷಕ ಸಿಬಂದಿ ಅಮಾನತು

ಕುಟುಂಬಸ್ಥರ ಆಕ್ರಂದನ : ದೇವರಿಗೆ ನೀರು ತರಲು ಹೊಳೆಗೆ ಹೋದ ಮಗ ನದಿಯಲ್ಲಿ ಮುಳುಗಿದ್ದಾನೆ ಎನ್ನುವ ಸುದ್ದಿಯನ್ನು ತಿಳಿದ ತಂದೆ ತಾಯಿ ಮತ್ತು ಆತನ ಹೆಂಡತಿ ಮಕ್ಕಳು ಓಡೋಡಿ ನದಿಯ ದಡಕ್ಕೆ ಬಂದ ದೇವರಿಗೆ ನೀರು ಹಾಕಿ ಮನೆಗೆ ಬರಬೇಕಾದ ಮಗ ಹೊಳೆಯಲ್ಲಿ ಮುಳಗಿರೋದ್ದನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಇನ್ನು ಬಾಳಿ ಬದುಕಬೇಕಾಗಿದ್ದ ಮಗ ಸಣ್ಣ ವಯಸ್ಸಿನ ಮಡದಿ ಚಿಕ್ಕ ಚಿಕ್ಕ ವಯಸ್ಸಿನ ಎರಡು ಗಂಡು, ಒಂದು ಹೆಣ್ಣು ಮಗುವನ್ನು ಬಿಟ್ಟು ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿ ಅರಗಿಸಿಕೊಳ್ಳುಲು ಆಗದೇ ಇರುವ ಕುಟುಂಬಸ್ಥರು ನದಿಯ ದಂಡಯ ಮೇಲೆ ಮಗನನ್ನು ನೆನೆಸಿಕೊಂಡು ಉರಳಾಡಿ ಅಳುವುದು ಎಂತಹ ಕಲ್ಲು ಹೃದಯವು ಕರಗುವಂತಿತ್ತು.ಇತ್ತ ಹೆಂಡತಿ ಗಂಡನ್ನು ನೆನೆಸಿಕೊಂಡು ಮಕ್ಕಳನ್ನು ತೋರಿಸಿ ಬಿಕ್ಕಿ ಬಿಕ್ಕಿ ಅಳುವುದು ನೋಡಿದ ಅಲ್ಲಿದ್ದ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿದ್ದವು.

ಶವ ಪತ್ತೆಗಾಗಿ ಅಗ್ನಿ ಶಾಮಕದಿಂದ ಕಾರ್ಯಾಚರಣೆ : ಯುವಕ ನದಿಯಲ್ಲಿ ಮುಳಗಿ ಮೇಲೆ ಏಳದೇ ಇದ್ದಾಗ ತಾಲೂಕಿನ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಬೋಟ್ ಮುಖಾಂತರ ಶವ ಪತ್ತೆಗೆ ನಿರತರಾಗಿದ್ದರು. ಇನ್ನು ನುರಿತ ಈಜುಗಾರರಿಂದಲೂ ಶವ ಪತ್ತೆ ಕಾರ್ಯಾಚರಣೆ ನಡೆಯಿತು. ಬೆಳಗ್ಗೆ ೧೦ ಗಂಟೆಗೆ ಶವ ಪತ್ತೆ ಕಾರ್ಯಾಚರಣೆ ಪ್ರಾರಂಭವಾಗಿ ಮಧ್ಯಾಹ್ನ ೨ ಗಂಟೆಗೆ ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ಟಾಪ್ ನ್ಯೂಸ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.