ಹುನಗುಂದಕ್ಕೆ  ಇನ್ನೂ  ಸಿದ್ದುನೇ ಸಿಎಂ!


Team Udayavani, Mar 7, 2019, 9:49 AM IST

7-mach-14.jpg

ಹುನಗುಂದ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದರೂ ಹುನಗುಂದ ಕ್ಷೇತ್ರಕ್ಕೆ ಮಾತ್ರ ಇನ್ನೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾರೆ.

ಹೌದು, ಇದು ಜನರ ಮನಸ್ಸಿನಲ್ಲಿ ಅಲ್ಲ. ಸಿದ್ದರಾಮಯ್ಯ ಅವರ ಆಪ್ತರು ಹೇಳಿಕೊಳ್ಳುವುದೂ ಅಲ್ಲ. ಸರ್ಕಾರದ ಅಧೀನದಲ್ಲಿರುವ ತಾಲೂಕು ಆಡಳಿತದ ಪಾಲಿಗೆ ರಾಜ್ಯದ ಮುಖ್ಯಮಂತ್ರಿ ಇನ್ನೂ ಸಿದ್ದರಾಮಯ್ಯ. ಕಾರಣ, ತಾಲೂಕು ಆಡಳಿತ ತನ್ನ ಕಚೇರಿ ಮುಂಭಾಗದ ಯಾವ ಫಲಕಗಳನ್ನೂ ಬದಲಾಯಿಸಿಲ್ಲ. ಮೈತ್ರಿ ಸರ್ಕಾರದ ಅಥವಾ ವಿವಿಧ ಇಲಾಖೆಗಳ ಯೋಜನೆ ಪ್ರಚಾರಪಡಿಸಲೆಂದೇ ಇರುವ ಫಲಕಗಳಲ್ಲಿ ಇಂದಿಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವ ಹಾಗೂ ಅವರ ಸರ್ಕಾರದ ಯೋಜನೆಗಳ ಮಾಹಿತಿ ಇರುವ ಫಲಕಗಳೇ ರಾರಾಜಿಸುತ್ತಿವೆ. 

ಉಡಾಫೆ ಉತ್ತರ: ಕಳೆದ ವಿಧಾನಸಭೆ ಚುನಾವಣೆ ಮತದಾನ ಜಾಗೃತಿ ಫಲಕ ಹಾಗೂ ತಹಶೀಲ್ದಾರ್‌ ಕಚೇರಿ, ತಾಪಂ ಕಚೇರಿ ಸಹಿತ ಇಡೀ ತಾಲೂಕು ಆಡಳಿತ ಆವರಣದಲ್ಲಿ ಹಳೆಯ ಫಲಕಗಳೇ ಇವೆ. ಯಾಕೆ ಸರ್‌, ಸರ್ಕಾರ ಬದಲಾಗಿದೆ. ಸಿಎಂ ಕೂಡ ಬದಲಾಗಿದ್ದಾರೆ, ನಿಮ್ಮ ಕಚೇರಿ ಎದುರು ಇನ್ನೂ ಸಿದ್ದರಾಮಯ್ಯ ಸಿಎಂ ಆಗಿರುವ ಫಲಕಗಳೇ ಇವೆಯಲ್ಲ ಎಂದು ತಹಶೀಲ್ದಾರ್‌ ರನ್ನು ಕೇಳಿದರೆ, ಉಡಾಫೆ ಉತ್ತರ ಕೊಡುತ್ತಿದ್ದಾರೆ ಎಂಬ ಆಕ್ರೋಶ ಜನರದ್ದು.

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಜನೆ ನಾಮಫಲಕಗಳಿವೆ. ಇದರಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯೋ ಅಥವಾ ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯೋ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಕೆಲವು ಗ್ರಾಮೀಣ ಜನರು ಮಾತ್ರ ಈ ಫಲಕ ನೋಡಿ ಇನ್ನೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಆಡಿಕೊಳ್ಳುವಂತಾಗಿದೆ. ವಿಧಾನಸಭೆ ಚುನಾವಣೆ ಮುಗಿದು, ಲೋಕಸಭೆ ಚುನಾವಣೆ ಹತ್ತಿರ ಬಂದಿದೆ. ಆದರೂ, ಕಳೆದ ವಿಧಾನಸಭೆ ಚುನಾವಣೆಯ ಪ್ರಜಾಪ್ರಭುತ್ವ ನಮ್ಮಿಂದ ಮತದಾನ ಹೆಮ್ಮೆಯಿಂದ ಎನ್ನುವ ನಾಮಫಲಕಗಳು ಗೋಚರಿಸುತ್ತಿವೆ.

ರಾರಾಜಿಸುತ್ತಿರುವ ಹಳೆ ಯೋಜನೆ ಬ್ಯಾನರ್‌: ಹುನಗುಂದ ನಗರದ ತುಂಬ ಹಳೆಯ ಯೋಜನೆಗಳ ಬ್ಯಾನರ್‌ಗಳೇ ಎದ್ದು ಕಾಣುತ್ತಿವೆ. ಕೃಷ್ಣಾ ಭಾಗ್ಯ ಜಲ ನಿಗಮ, ಲೋಕೋಪಯೋಗಿ, ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಇಲಾಖೆಗೆ ಸಂಬಂಧಿಸಿದ ಫಲಕಗಳಲ್ಲಿ ಇಂದಿನ ಸಿಎಂ, ಆಗಿನ ಸಚಿವರ ಭಾವಚಿತ್ರ ಇರುವ ಫಲಕ ತೆಗೆದಿಲ್ಲ. ಕೆಲವೊಂದು ಯೋಜನೆಗಳೇ ಬದಲಾದರೂ ಅವುಗಳ ಹೆಸರು ಇಂದಿಗೂ ತೆಗೆದುಹಾಕಿ, ಹೊಸ ಯೋಜನೆಗಳ ಕುರಿತು ಜನರಿಗೆ ಮಾಹಿತಿ ಕೊಡುವ ಕೆಲಸ ತಾಲೂಕು ಆಡಳಿತ ಮಾಡಿಲ್ಲ.

ಹೊಸ ಯೋಜನೆಗಳ ನಾಮಫಲಕ ಇಲ್ಲ: ಮೈತ್ರಿ ಸರ್ಕಾರದ ಮಹತ್ವಪೂರ್ಣ ಯೋಜನೆಗಳಾದ ರೈತರ ಬೆಳೆ ಸಾಲ ಮನ್ನಾ, ಬೀದಿ ವ್ಯಾಪಾರಸ್ಥರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಬಡವರ ಬಂಧು, ಮಹಿಳೆ ಮತ್ತು ಮಕ್ಕಳ ಅಭ್ಯುದಯಕ್ಕಾಗಿ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ, ಕಟ್ಟಡ ಕಾರ್ಮಿಕರ ಬದುಕಿಗೆ ಭದ್ರತೆಗಾಗಿ ಶ್ರಮಿಕ ಸೌರಭ, ಕೈಗಾರಿಕಾಭಿವೃದ್ಧಿಗಾಗಿ ಉದ್ಯಮ ಸ್ನೇಹಿ ಯೋಜನೆ, ಕೃಷಿ ಮತ್ತು ಕೃಷಿಕರಿಗಾಗಿ ರೈತ ಸಿರಿ, ನಗರಾಭಿವೃದ್ಧಿ ಯೋಜನೆ, ಆರೋಗ್ಯ ಕರ್ನಾಟಕ ಹೀಗೆ ಹಲವು ಹೊಸ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಈ ಕುರಿತು ಕಾಳಜಿ ವಹಿಸಬೇಕಾದ ತಹಶೀಲ್ದಾರ್‌ ಸುಭಾಸ ಸಂಪಗಾವಿ ಅವರೇ, ಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದು ಹತ್ತು ತಿಂಗಳು ಸಮೀಪಿಸುತ್ತಿವೆ. ಹೊಸ ಸರ್ಕಾರದ ನಾಮಫಲಕ ಮಾತ್ರ ತಾಲೂಕ ಆಡಳಿತ ಭವನದ ಮುಂದೆ ಕಾಣುತ್ತಿಲ್ಲ. ಹಿಂದಿನ ಸಿಎಂ, ಆಗಿನ ಸಚಿವರು ಹಾಗೂ ಹಳೆಯ ಯೋಜನೆಗಳ ಮಾಹಿತಿ ಫಲಕಗಳೇ ಇವೆ. ಇಡೀ ತಾಲೂಕು ಆಡಳಿತದಲ್ಲೇ ಇಂತಹ ಜಿಡ್ಡುಗಟ್ಟಿದ ಆಡಳಿತವಿದ್ದರೆ, ಜನ ಸಾಮಾನ್ಯರಿಗೆ ಯೋಜನೆಗಳ ಮಾಹಿತಿ ಸಿಗುವುದು ಯಾವಾಗ, ಅದರ ಲಾಭ ತಲುಪಿಸುವುದು ಯಾವಾಗ ?
ಕೃಷ್ಣಾ ಜಾಲಿಹಾಳ,
ಕೃಷಿಕ ಸಮಾಜ ನಿರ್ದೇಶಕ, ಹುನಗುಂದ

ಡಿಸಿಯವರೇ ಬರಬೇಕಾ?
ತಹಶೀಲ್ದಾರ್‌, ತಾಪಂ ಕಚೇರಿ ಸಹಿತ ಹಲವು ಸರ್ಕಾರಿ ಕಚೇರಿ ಎದುರು ಹಳೆಯ ಯೋಜನೆಗಳು, ವಿಧಾನಸಭೆ ಚುನಾವಣೆ ಮತದಾನ ಜಾಗೃತಿ ಫಲಕಗಳು ಬದಲಿಸಿಲ್ಲ. ಜಿಲ್ಲೆಗೆ ಸದ್ಯ ಯುವ-ಉತ್ಸಾಹಿ ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಅಧಿಕಾರ ವಹಿಸಿಕೊಂಡಿದ್ದು, ಅವರು ಸರ್ಕಾರದ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸಬೇಕು. ಕಚೇರಿಗಳ ಎದುರು, ಯೋಜನೆಗಳ ಮಾಹಿತಿ ಫಲಕ ಹಾಕಿರಬೇಕು ಎಂದು ಹೇಳುತ್ತಾರೆ. ಇದನ್ನು ತಹಶೀಲ್ದಾರ್‌ ಸುಭಾಸ ಸಂಪಗಾವಿ ಅವರಿಗೆ ಕೇಳಿದರೆ, ಹಳೆಯ ಫಲಕ ಇದ್ರೆ ಏನಾಯಿತು, ಹೊಸ ಫಲಕ ಹಾಕ್ತೇವೇಳ್ರಿ  ಎಂಬ ಉತ್ತರ ಕೊಡುತ್ತಾರೆ. ಹೀಗಾಗಿ ಇಲ್ಲಿನ ಹಳೆಯ ಫಲಕ ಬದಲಿಸಿ, ಸರ್ಕಾರದ ಯೋಜನೆ ಮಾಹಿತಿ ಫಲಕ ಅಳವಡಿಸಲು, ಡಿಸಿಯವರೇ ಬರಬೇಕಾ ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಮಲ್ಲಿಕಾರ್ಜುನ ಬಂಡರಗಲ್ಲ 

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.