ಖಾಜಿಬೂದಿಹಾಳ: ಅವಿರೋಧ ಆಯ್ಕೆ
Team Udayavani, Dec 23, 2020, 5:34 PM IST
ಬಾಗಲಕೋಟೆ: ಗುಳೇದಗುಡ್ಡ ತಾಲೂಕಿನ ಹಂಗರಗಿ ಗ್ರಾಮ ಪಂಚಾಯತ ವ್ಯಾಪಿಯ ಖಾಜಿಬೂದಿಹಾಳದ ಮೂರು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿವೆ.
ಖಾಜಿಬುದಿಹಾಳ ಗ್ರಾಮದ ಸಾಮಾನ್ಯ ಕ್ಷೇತ್ರಕ್ಕೆ ಸೈಯದ ಸಲೀಮ ಮಹಬೂಬಸಾಬ ಖಾಜಿ, ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಶೋಭಾ ಗುಂಡಯ್ಯ ಹಿರೇಮಠ, ಹಿಂದುಳಿದ ಅ ವರ್ಗಮಹಿಳೆ ಕ್ಷೇತ್ರಕ್ಕೆ ರುದ್ರಮ್ಮ ಬಸಪ್ಪ ಕಟಗೇರಿ ಅವರು ನಾಮ ಪತ್ರ ಸಲ್ಲಿಸಿದ್ದು, ಅವರ ಹೊರತು ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.
ಖಾಜಿಬೂದಿಹಾಳದ ಹಿಂದು- ಮುಸ್ಲಿಂ ಸಮಾಜದ ಗುರು-ಹಿರಿಯರು ಕೂಡಿಕೊಂಡು ಗ್ರಾಮದ ಮೂವರುಸದಸ್ಯರನ್ನು ಅವಿರೋಧ ಆಯ್ಕೆ ಮಾಡುವ ಮೂಲಕ ಭಾವೈಕ್ಯತೆ ಮರೆದಿದ್ದಾರೆ. ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಖಾಜಿ ನೇತೃತ್ವದಲ್ಲಿ ಲಿಂಗಾಯತ ಸಮಾಜದ ಹಿರಿಯರಾದ ಶಿವಪುತ್ರಪ್ಪ ಸಾಲಗುಂದಿ, ಬಮ್ಮಪ್ಪ ರಂಗಣ್ಣವರ,ಪಂಚಪ್ಪ ರಂಗಣ್ಣವರ, ಶಂಕ್ರಪ್ಪಣ್ಣಕಟಗೇರಿ, ಶೇಖಪ್ಪ ಸಾಲಗುಂದಿ, ದುಂಡಯ್ಯ ಹಿರೇಮಠ, ರಮೇಶಕರ್ಕಿಕಟ್ಟಿ, ಮಹಾಗುಂಡಪ್ಪ ಜೆಂಡೇದ ಭೀಮಪ್ಪ ನರಸಾಪುರ ಹಾಗೂ ಮುಸ್ಲಿಂ ಸಮಾಜ ಹಿರಿಯರಾದ ಮೌಲಾನಾ ಶಬ್ಬೀರ ಅಹ್ಮದ ಖಾಜಿ, ರಜಾಕಸಾಬ ಖಾಜಿ, ಸೈಯದಮಹ್ಮದಇನಾಂದಾರ, ಶರೀಫಸಾಬ ಖಾಜಿ, ಆಶೀಫ್ ಖಾಜಿ, ಹಾಶಾಮಸಾಬಖಾಜಿ, ಬಾಷಾ ಖಾಜಿ, ನಿಸಾರಅಹ್ಮದ ಖಾಜಿ, ಅಸ್ಲಂ ಮಹಬೂಬಸಾಬ ಖಾಜಿಒಳಗೊಂಡಂತೆ ಹಿಂದೂ ಮುಸ್ಲಿಂ ಸಮಾಜದ ಸಮಸ್ತ ಗುರು-ಹಿರಿಯರ ಉಪಸ್ಥಿತಿಯಲ್ಲಿ ಒಮ್ಮತದ ಗ್ರಾಮ ಪಂಚಾಯತ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು