ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ
Team Udayavani, Aug 1, 2021, 9:29 PM IST
ಬನಹಟ್ಟಿ: ಕಳೆದ ಹಲವಾರು ದಿನಗಳಿಂದ ರಬಕವಿ-ಬನಹಟ್ಟಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕೃಷ್ಣಾ ನದಿ ನೀರು ಪ್ರವಾಹ ಹೆಚ್ಚಾಗಿ ಪ್ರವಾಹ ಪ್ರಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಹಿಪ್ಪರಗಿ ಜಲಾಶಯಕ್ಕೆ 2 ಲಕ್ಷ 80 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವುದರಿಂದ ಕೃಷ್ಣಾ ನದಿ ನೀರು ಇಳಿಮುಖವಾಗಿದೆ.
ಭಾನುವಾರ ಉದಯವಾಣಿ ಪತ್ರಿಕೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ನೀರು ಕ್ರಮೇಣವಾಗಿ ಇಳಿಮುಖವಾಗುತ್ತಿದ್ದಂತೆ ನಾಲ್ಕೈದು ಕುಟುಂಬಗಳ ಸದಸ್ಯರು ಗ್ರಾಮಕ್ಕೆ ಮರಳಿ ಮನೆಗಳನ್ನು ಸ್ವಚ್ಛಗೊಳಿಸುತ್ತಿರುವುದು ಕಂಡು ಬಂತು.
ಈ ಸಂದರ್ಭದಲ್ಲಿ ಪತ್ರಿಕೆಯ ಜೊತೆಗೆ ಮಾತನಾಡಿದ ಜನರು, ನಮ್ಮ ಗೋಳ ಕೇಳಾವ್ರು ಯಾರು ಇಲ್ಲರಿ, ಪ್ರವಾಹದ ಸಂದರ್ಭದಲ್ಲಿ ಮನ್ಯಾಗಿನು ಸಾಮಾನು, ಮಕ್ಕಳು, ಕಾಳು ಕಡಿಗಳನ್ನು ಮತ್ತು ಜಾನುವಾರುಗಳನ್ನು ಕಟ್ಟಿಕೊಂಡು ಗಂಜಿ ಕೇಂದ್ರದಾಗ ಇರಬೇಕ್ರಿ. ನಮಗ ಜೀವನ ಸಾಕಾಗೇತ್ರಿ ಎನ್ನುತ್ತಾರೆ ಇಲ್ಲಿಯ ಜನರು.
ತಾಲ್ಲೂಕಿನ ಅಸ್ಕಿ ಗ್ರಾಮದಿಂದ ಕೂಗಳತೆಯಲ್ಲಿರುವ ಕೃಷ್ಣಾ ನದಿಯ ಪ್ರವಾಹದ ಸಂದರ್ಭದಲ್ಲಿ ಇಲ್ಲಿಯ 520 ಕುಟುಂಬಗಳ ಅಂದಾಜು ೧೮೦೦ ಜನರು ಪ್ರವಾಹದ ಭೀತಿಯಲ್ಲಿರುತ್ತಾರೆ.
ಇದನ್ನೂ ಓದಿ: ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯ
ಕೃಷ್ಣಾ ನದಿಗೆ ಪ್ರವಾಹ ಉಂಟಾದ ಕೂಡಲೇ ನದಿ ಈ ಗ್ರಾಮವನ್ನು ಸುತ್ತುವರೆಯುತ್ತದೆ. ಗ್ರಾಮದ ಅನೇಕ ಮನೆಗಳು ನೀರಿನಲ್ಲಿ ನಿಲ್ಲುತ್ತವೆ.
2004 ರಿಂದ ಇಲ್ಲಿಯವರೆಗೆ ಈ ಗ್ರಾಮದ ಜನರು ಶಾಶ್ವತ ನೆಲೆಗಾಗಿ ಹೋರಾಡುತ್ತಿದ್ದಾರೆ. ಆದರೆ ಹಲವಾರು ಸಮಸ್ಯೆಗಳಿಂದಾಗಿ ಈ ಗ್ರಾಮ ಸ್ಥಳಾಂತರವಾಗುತ್ತಿಲ್ಲ. ನಾವು ಕೇಳಿದ ಸ್ಥಳದಲ್ಲಿಯೇ ನಮಗೆ ಜಾಗವನ್ನು ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. 2009 ರಲ್ಲಿ ಇಲ್ಲಿಯ ಮನೆಗಳಿಗೆ ಪರಿಹಾರ ಧನ ನೀಡಲಾಗಿದೆ. ಆದರೆ ಮನೆಗಳನ್ನು ಕಟ್ಟಿಕೊಳ್ಳಲು ಸ್ಥಳವನ್ನು ನೀಡಿಲ್ಲ.
ನಮಗ ಒಂದು ಶಾಶ್ವತ ಜಾಗಾ ಕೊಡ್ರಿ ಪತ್ರಾಸ ಶೆಡ್ ಮಾಡಿಕೊಂಡು ಇರತಿವ್ರಿ ಎನ್ನುತ್ತಿದ್ದಾರೆ. 2019 ರಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ಈ ಗ್ರಾಮದ ಮನೆಗಳು ಒಂಭತ್ತು ದಿನಗಳ ಕಾಲ ಸಂಪೂರ್ಣವಾಗಿ ನೀರಿನಲ್ಲಿ ನಿಂತಿದ್ದವು. ಪ್ರವಾಹಕ್ಕೆ ಮತ್ತೆ ಮನೆಗಳು ಹಾಳಾಗುತ್ತವೆ ಎಂದು ಇಲ್ಲಿಯವರೆಗೂ ಅವುಗಳನ್ನು ರಿಪೇರಿ ಮಾಡಿಕೊಂಡಿಲ್ಲ. ಗೋಡೆಗಳು ಮತ್ತು ಮೇಲ್ಛಾವಣಿಗಳು ಬಿದ್ದ ಮನೆಯಲ್ಲಿಯೇ ಜನರು ವಾಸಿಸುತ್ತಿದ್ದಾರೆ.
– ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್