ಚಹಾ ಸೇವಿಸಿ ಕರ್ತವ್ಯಕ್ಕೆ ತೆರಳಿದ್ದ ಚಾಲಕ
Team Udayavani, Apr 17, 2021, 7:08 PM IST
ಜಮಖಂಡಿ: ಶುಕ್ರವಾರ ಪವಿತ್ರ ರಮಜಾನ್ ಉಪವಾಸ ಮಾಡಲು ಬಯಸಿದ್ದ ವಾಯವ್ಯ ಸಾರಿಗೆ ಚಾಲಕ ನಭಿರಸೂಲ ಖಾದಿರಸಾಬ ಅವಟಿಗೆ ಸಾವು ಎದುರಾಗಿದ್ದು ದುರಂತ. ಕರ್ತವ್ಯ ನಿರ್ವಹಿಸುವ ಹಿನ್ನೆಲೆಯಲ್ಲಿ ಒತ್ತಡದಲ್ಲಿದ್ದ ಮನೆಯ ಕುಟುಂಬ ಸದಸ್ಯರೊಂದಿಗೆ ಕೇವಲ ಚಹಾ ಕುಡಿದು ತೆರಳಿದ್ದರು.
ಪವಿತ್ರ ರಮಜಾನ್ ತಿಂಗಳ ಆರಂಭಗೊಂಡಿದ್ದು, ಚಾಲಕನಿಗೆ ಶುಕ್ರವಾರ ರಜೆ ಇದ್ದರೂ ಸಾರಿಗೆ ನೌಕರರ ಮುಷ್ಕರ ಪರಿಣಾಮವಾಗಿ ಅಧಿ ಕಾರಿಗಳ ಒತ್ತಡಕ್ಕೆ ಮಣಿದ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಮುಷ್ಕರ ತೊರೆದು ಗುರುವಾರ ನೌಕರಿಗೆ ಆಗಮಿಸಿದ್ದರು. ಮೃತ ವಾಯವ್ಯ ಸಾರಿಗೆ ಚಾಲಕ ನಭಿರಸೂಲ ಖಾದಿರಸಾಬ ಅವಟಿ ಕುಟುಂಬಕ್ಕೆ ಅವರೇ ಪ್ರಮುಖ ಆಧಾರಸ್ಥಂಭ. ಪತ್ನಿ ಸಾಯಿರಾಬಾನು, ಪುತ್ರರಾದ ಮುಬಾರಕ, ಚಾಂದಪಾಷಾ, ಮಕಸುದ್, ಶಾನೂರ ಅವರನ್ನೊಳಗೊಂಡ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲ.
ಧಾರವಾಡದ ವಾಯುವ್ಯ ಸಾರಿಗೆ ಆಯುಕ್ತ ಕೃಷ್ಣಾ ಭಾಜಪೇಯಿ, ಸಾರಿಗೆ ಅ ಧಿಕಾರಿಗಳು, ನೌಕರರು ಚಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಶಾಸಕ ಆನಂದ ನ್ಯಾಮಗೌಡ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಶ್ರೀಶೈಲ ದಳವಾಯಿ, ಸಂಗಮೇಶ ನಿರಾಣಿ ಸಹಿತ ಗಣ್ಯರು ಸಂತಾಪ ಸೂಚಿಸಿದ್ದು, ಕಲ್ಲು ಎಸೆದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
MUST WATCH
ಹೊಸ ಸೇರ್ಪಡೆ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
High Court ಎಚ್ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ